ಬಿಜೆಪಿ ನಾಯಕ ಗುಂಡಿಕ್ಕಿ ಹತ್ಯೆ: ಪ್ರಮುಖ ಆರೋಪಿ ಪೊಲೀಸರಿಗೆ ಶರಣು
Team Udayavani, Jan 25, 2023, 8:45 AM IST
ಬಿಜೆಪಿ ನಾಯಕ
ಇಂಪಾಲ್ (ಮಣಿಪುರ) : ಹಾಡಹಗಲೇ ಬಿಜೆಪಿ ನಾಯಕನನ್ನು ಗುಂಡಿಕ್ಕಿ ಕೊಲೆಗೈದ ಘಟನೆ ಮಣಿಪುರದ ತೌಬಲ್ ಜಿಲ್ಲೆ ಮಂಗಳವಾರ (ಜ.24 ರಂದು) ನಡೆದಿದ್ದು, ಈ ಸಂಬಂಧ ಕೃತ್ಯದ ಪ್ರಮುಖ ಆರೋಪಿ ಪೊಲೀಸರ ಮುಂದೆ ಶರಣಾಗಿದ್ದಾನೆ.
ಮಾಜಿ ಸೈನಿಕರ ಪ್ರಕೋಷ್ಠದ ರಾಜ್ಯ ಸಂಚಾಲಕ ಹಾಗೂ ಬಿಜೆಪಿ ನಾಯಕ ಲೈಶ್ರಾಮ್ ರಾಮೇಶ್ವರ್ ಸಿಂಗ್( 50) ಹತ್ಯೆಗೀಡಾದ ನಾಯಕ.
ಘಟನೆ ವಿವರ: ನೋಂದಣಿ ಸಂಖ್ಯೆ ಇಲ್ಲದ ವಾಹನದಲ್ಲಿ ಬಂದ ಇಬ್ಬರು ಅಪರಿಚಿತರು ಮಂಗಳವಾರ ರಾಮೇಶ್ವರ್ ಸಿಂಗ್ ಅವರ ಮೇಲೆ ಏಕಾಏಕಿ ಗುಂಡಿನ ದಾಳಿ ನಡೆಸಿ ಪರಾರಿಯಾಗಿದ್ದಾರೆ. ಎದೆಯ ಭಾಗಕ್ಕೆ ಗಂಭೀರವಾಗಿ ಗಾಯಗೊಂಡ ರಾಮೇಶ್ವರ್ ಸಿಂಗ್ ಅವರನ್ನು ಆಸ್ಪತ್ರೆಗೆ ದಾಖಲಿಸಿದರೂ, ಅವರು ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ.
ಘಟನೆಯ ಬಳಿಕ ಪೊಲೀಸರು ವಾಹನ ಚಲಾಯಿಸುತ್ತಿದ್ದ ನವೋರೆಮ್ ರಿಕಿ ಪಾಟಿಂಗ್ ಸಿಂಗ್ ಎಂಬಾತನನ್ನು ಬಂಧಿಸಿದ್ದಾರೆ.
ಇದಾದ ಬಳಿಕ ಕೃತ್ಯದ ಪ್ರಮುಖ ರೂವಾರಿ 46 ವರ್ಷದ ಅಯೆಕ್ಪಾಮ್ ಕೇಶೋರ್ಜಿತ್ ಎಂಬಾತನಿಗೆ ತೀವ್ರ ಶೋಧ ನಡೆಸಿ, ಎಲ್ಲೇ ಇದ್ದರೂ ಶರಣಾಗುವಂತೆ ಪೊಲೀಸರು ಹೇಳಿದ್ದಾರೆ. ಕೆಲ ಸಮಯದ ಬಳಿಕ ನಂತರ ಪ್ರಮುಖ ಇಂಫಾಲ್ ಪಶ್ಚಿಮ ಜಿಲ್ಲೆಯ ಕಮಾಂಡೋ ಕಾಂಪ್ಲೆಕ್ಸ್ನಲ್ಲಿ ಪೊಲೀಸರ ಮುಂದೆ ಶರಣಾದ್ದಾನೆ. ಬಂಧಿತನಿಂದ 32 ಕ್ಯಾಲಿಬರ್ ನ ಪರವಾನಗಿ ಪಡೆದ ಪಿಸ್ತೂಲ್, ಎರಡುಮ್ಯಾಗಜಿನ್ ಮತ್ತು ಒಂಬತ್ತು ಕಾರ್ಟ್ರಿಜ್ ಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಕೃತ್ಯ ಯಾಕೆ ನಡೆಸಿದ್ದಾರೆ ಎನ್ನುವುದರ ಕುರಿತು ತನಿಖೆ ನಡೆಯುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chattisgarh: ಕಳೆದ 4 ತಿಂಗಳಲ್ಲಿ 80 ನಕ್ಸಲೀಯರ ಸಾವು, 125 ಮಂದಿ ಬಂಧನ; 150 ಶರಣಾಗತಿ!
ದ. ಭಾರತದಲ್ಲಿ ಬಿಜೆಪಿ ಎಷ್ಟು ಸ್ಥಾನಗಳಲ್ಲಿ ಜಯಗಳಿಸಬಹುದು? ರೇವಂತ್ ರೆಡ್ಡಿ ಲೆಕ್ಕಚಾರವೇನು!
Delhi ; ಬಿಕಿನಿಯಲ್ಲೇ ಬಸ್ ಹತ್ತಿದ ಮಹಿಳೆ; ವಿಡಿಯೋ ವೈರಲ್
EVM VVPAT case: ಚುನಾವಣಾ ಪ್ರಕ್ರಿಯೆಯಲ್ಲಿ ಪಾವಿತ್ರ್ಯತೆ ಇರಬೇಕು: ಆಯೋಗಕ್ಕೆ ಸುಪ್ರೀಂ
Diabetes ಇದ್ದರೂ ಕೇಜ್ರಿವಾಲ್ ಸಿಹಿ ಹೆಚ್ಚೆಚ್ಚು ತಿನ್ನುತ್ತಿದ್ದಾರೆ!: ಕೋರ್ಟ್ ಗೆ ಇಡಿ