‘ಇಂತಹ ಮೃಗಕ್ಕೆ ಇತಿಹಾಸ ಕ್ಯಾಕರಿಸಿ ಉಗುಳಲಿದೆ!’: ಅನುರಾಗ್ ಕಶ್ಯಪ್ ಸಿಟ್ಟು ಯಾರ ಮೇಲೆ?
Team Udayavani, Jan 27, 2020, 5:06 PM IST
ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆ ಸಂಸತ್ತಿನಲ್ಲಿ ಅಂಗೀಕಾರಗೊಂಡು ಜಾರಿಗೆ ಬಂದ ನಂತರ ದೇಶದಲ್ಲಿ ಎರಡು ವರ್ಗ ಸೃಷ್ಟಿಯಾಗಿದೆ. ಒಂದು ಸಿಎಎಯನ್ನು ಬೆಂಬಲಿಸುವ ವರ್ಗ ಇನ್ನೊಂದು ಇದನ್ನು ವಿರೋಧಿಸುವ ವರ್ಗ. ಎರಡೂ ಕಡೆಗಳಲ್ಲಿ ಚಿಂತಕರು, ಚಿತ್ರ ನಟರು, ಲೇಖಕರು, ಶಿಕ್ಷಣ ತಜ್ಞರು… ಹೀಗೆ ಸಮಾಜದ ನಾನಾ ರಂಗಗಳಲ್ಲಿ ಹೆಸರು ಮಾಡಿರುವರಿದ್ದಾರೆ.
ಹಾಗೆಯೇ ಸಿಎಎ ವಿರೋಧಿ ಗುಂಪಿನಲ್ಲಿ ಕ್ರಿಯಾಶೀಲವಾಗಿ ಸರಕಾರವನ್ನು ತರಾಟೆಗೆ ತೆಗೆದುಕೊಳ್ಳುತ್ತಿರುವವರಲ್ಲಿ ಬಾಲಿವುಡ್ ನಿರ್ದೇಶಕ ಅನುರಾಗ್ ಕಶ್ಯಪ್ ಅವರೂ ಸಹ ಒಬ್ಬರು. ಸಿಎಎ ವಿಚಾರದಲ್ಲಿ ಕಶ್ಯಪ್ ಅವರು ಈಗಾಗಲೇ ಕೇಂದ್ರ ಸರಕಾರವನ್ನು ಹಲವು ವೇದಿಕೆಗಳಲ್ಲಿ ತರಾಟೆಗೆ ತೆಗೆದುಕೊಂಡಿದ್ದಾರೆ.
ಆದರೆ ಅನುರಾಗ್ ಕಶ್ಯಪ್ ಅವರು ಈ ಸಲ ಗರಂ ಆಗಿರುವುದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೇಲೆ. ಆದಿತ್ಯವಾರ ದೆಹಲಿಯಲ್ಲಿ ನಡೆದಿದ್ದ ಶಾ ಅವರ ಚುನಾವಣಾ ಪ್ರಚಾರದ ಸಮಾವೇಶದಲ್ಲಿ ಸಿಎಎ ವಿರೋಧಿ ಪ್ರತಿಭಟನಾಕಾರನೊಬ್ಬರ ಮೇಲೆ ಅಮಿತ್ ಶಾ ಹಾಗೂ ಬಿಜೆಪಿ ಬೆಂಬಲಿಗರು ದರ್ಪ ಪ್ರದರ್ಶಿಸಿದ್ದಾರೆ ಎಂಬ ವರದಿಗಳನ್ನು ಉಲ್ಲೇಖಿಸಿ ಅನುರಾಗ್ ಅವರು ಅಮಿತ್ ಶಾ ಮೇಲೆ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತಾಗಿ ಟ್ವೀಟ್ ಮಾಡಿರುವ ಕಶ್ಯಪ್ ಅವರು, ‘ ನಮ್ಮ ಗೃಹ ಸಚಿವರೊಬ್ಬ ಹೇಡಿ. ಅವರು ಪೊಲೀಸರನ್ನು ನಿಯಂತ್ರಿಸುತ್ತಾರೆ, ಗೂಂಡಾಗಳನ್ನು ತನ್ನ ಅಂಕೆಯಲ್ಲಿರಿಸಿಕೊಂಡಿದ್ದಾರೆ. ತನ್ನ ರಕ್ಷಣೆಗೆ ಭದ್ರತಾ ಪಡೆಗಳನ್ನು ಸುತ್ತಲೂ ಇರಿಸಿಕೊಂಡು ನಿಶ್ಯಸ್ತ್ರ ಪ್ರತಿಭಟನಾಕಾರರ ಮೇಲೆ ದಾಳಿ ಮಾಡಿಸುತ್ತಾರೆ. ಅಮಿತ್ ಶಾ ಅವರ ಈ ವರ್ತನೆ ತುಂಬಾ ಕೀಳು ಮಟ್ಟದ್ದಾಗಿದೆ. ಇಂತಹ ಮೃಗಗಳ ಮೇಲೆ ಇತಿಹಾಸ ಕ್ಯಾಕರಿಸಿ ಉಗುಳಲಿದೆ’ ಎಂದು ಕಟು ಶಬ್ದಗಳಿಂದ ಟ್ವೀಟ್ ಮಾಡಿದ್ದಾರೆ.
हमारा गृहमंत्री कितना डरपोक है । खुद की police , खुद ही के गुंडे , खुद की सेना और security अपनी बढ़ाता है और निहत्थे protestors पर आक्रमण करवाता है । घटियेपन और नीचता की हद अगर है तो वो है @AmitShah । इतिहास थूकेगा इस जानवर पर।
— Anurag Kashyap (@anuragkashyap72) January 26, 2020
ದೆಹಲಿಯಲ್ಲಿ ಆಯೋಜಿಸಲಾಗಿದ್ದ ಅಮಿತ್ ಶಾ ಚುನಾವಣಾ ಪ್ರಚಾರ ಸಮಾವೇಶದ ಸಂದರ್ಭದಲ್ಲಿ ಅಲ್ಲಿ ಸೇರಿದ್ದ ಪ್ರತಿಭಟನಾಕಾರರ ಗುಂಪೊಂದು ಸಿಎಎ ವಿರೋಧಿ ಘೋಷಣೆಗಳನ್ನು ಕೂಗಲಾರಂಭಿಸಿದರು. ಈ ಸಂದರ್ಭದಲ್ಲಿ ಒಬ್ಬ ಪ್ರತಿಭಟನಾಕಾರನನ್ನು ಹಿಡಿದ ಬಿಜೆಪಿ ಬೆಂಬಲಿಗರು ಆತನ್ನು ಥಳಿಸಲಾರಂಭಿಸಿದರು. ಬಳಿಕ ಅಮಿತ್ ಶಾ ಸೂಚನೆಯ ಮೇರೆಗೆ ಭದ್ರತಾ ಪಡೆಯವರು ಯುವಕನ್ನು ಗುಂಪಿನಿಂದ ಬಿಡಿಸಿ ಸುರಕ್ಷಿತವಾಗಿ ಕಳುಹಿಸಿಕೊಟ್ಟರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
4 ಮಕ್ಕಳೊಂದಿಗೆ ಬಾವಿಗೆ ಹಾರಿ,ಹಗ್ಗ ಹಿಡಿದು ತನ್ನನು ಹಾಗೂ ಹಿರಿ ಮಗಳನ್ನು ರಕ್ಷಿಸಿದ ತಾಯಿ.!
ಸಾವರ್ಕರ್ ಅವರನ್ನು ಅವಮಾನಿಸಿದರೆ… ರಾಹುಲ್ ಗಾಂಧಿ ಹೇಳಿಕೆಗೆ ಉದ್ಧವ್ ಠಾಕ್ರೆ ಆಕ್ರೋಶ
ರಾಘವ್ ಛಡ್ಡಾ-ಪರಿಣಿತಿ ಛೋಪ್ರಾ ಶೀಘ್ರವೇ ಎಂಗೇಜ್
ಉದ್ಯೋಗ ಖಾತ್ರಿ ಕೂಲಿ ಹೆಚ್ಚಳಕ್ಕೆ ಕೇಂದ್ರ ಸರ್ಕಾರ ನಿರ್ಧಾರ
ರಾಷ್ಟ್ರೀಯ ಸ್ಮಾರಕವಾಗಿ ರಾಮ ಸೇತು: ಸುಪ್ರೀಂಗೆ ಮತ್ತೊಂದು ಅರ್ಜಿ
MUST WATCH
ಹೊಸ ಸೇರ್ಪಡೆ
“ನೀವು ಯಾರನ್ನಾದರೂ ಡೇಟ್ ಮಾಡಿ”.. ಸಮಂತಾಗೆ ಅಭಿಮಾನಿಯ ಮನವಿ; ನಟಿಯ ಪ್ರತಿಕ್ರಿಯೆ ವೈರಲ್
ಚಿಕ್ಕಮಗಳೂರು: ಕಾರಿನಲ್ಲಿ ಮದ್ಯದ ಬಾಟಲ್, ಸಿ.ಟಿ.ರವಿ ಕ್ಯಾಲೆಂಡರ್, ಲಾಂಗ್ ಪತ್ತೆ
4 ಮಕ್ಕಳೊಂದಿಗೆ ಬಾವಿಗೆ ಹಾರಿ,ಹಗ್ಗ ಹಿಡಿದು ತನ್ನನು ಹಾಗೂ ಹಿರಿ ಮಗಳನ್ನು ರಕ್ಷಿಸಿದ ತಾಯಿ.!
ಸಾವರ್ಕರ್ ಅವರನ್ನು ಅವಮಾನಿಸಿದರೆ… ರಾಹುಲ್ ಗಾಂಧಿ ಹೇಳಿಕೆಗೆ ಉದ್ಧವ್ ಠಾಕ್ರೆ ಆಕ್ರೋಶ
ಮಲಯಾಳಂ ಖ್ಯಾತ ನಟ ಇನೋಸೆಂಟ್ ನಿಧನ: ದುಃಖದಲ್ಲಿ ಮಾಲಿವುಡ್ ಚಿತ್ರರಂಗ