Film Piracy: ಚಲನಚಿತ್ರಗಳನ್ನು ಪೈರಸಿ ಮಾಡುವುದು ಇನ್ನು ಅಸಾಧ್ಯ!
ಯು, ಎ ಬದಲು ಇನ್ನು ವಯೋಮಿತಿ ಆಧಾರದಲ್ಲಿ ಪ್ರಮಾಣಪತ್ರ
Team Udayavani, Apr 20, 2023, 6:50 AM IST
ನವದೆಹಲಿ: ಕೇಂದ್ರ ಸಚಿವ ಸಂಪುಟ ಬುಧವಾರ ದೇಶದ ಸಿನಿಮಾರಂಗಕ್ಕೆ ಸಂತೋಷದ ಸುದ್ದಿಯನ್ನು ನೀಡಿದೆ. ಚಲನಚಿತ್ರ ತಿದ್ದುಪಡಿ ಮಸೂದೆಯನ್ನು (ಸಿನಿಮ್ಯಾಟೋಗ್ರಾಫ್ ಅಮೆಂಡ್ಮೆಂಟ್ ಬಿಲ್) ಅಂಗೀಕರಿಸುವ ಮೂಲಕ, ಸಿನಿಮಾಗಳನ್ನು ಪೈರಸಿ ಮಾಡುವುದಕ್ಕೆ ಬಲವಾದ ತಡೆಯನ್ನೊಡ್ಡಿದೆ. “ಸಿನಿಮಾಗಳನ್ನು ನಕಲಿ ಮಾಡಿ, ಅಂತರ್ಜಾಲದಲ್ಲಿ ಹರಿಬಿಡುವುದನ್ನು ತಡೆಯುವುದೇ ಇದರ ಉದ್ದೇಶ. ಈ ಮಸೂದೆಯನ್ನು ಸಂಸತ್ತಿನ ಮುಂದಿನ ಅಧಿವೇಶನದಲ್ಲಿ ಮಂಡಿಸಲಾಗುವುದು’ ಎಂದು ಕೇಂದ್ರ ವಾರ್ತಾ ಸಚಿವ ಅನುರಾಗ್ ಠಾಕೂರ್ ಹೇಳಿದ್ದಾರೆ.
ಈ ಮಸೂದೆಯಲ್ಲಿ ಆಗಿರುವ ಇನ್ನೊಂದು ಮಹತ್ವದ ಬದಲಾವಣೆಯೆಂದರೆ ಯು, ಎ, ಯುಎ ಪ್ರಮಾಣಪತ್ರದಲ್ಲೂ ಬದಲಾವಣೆ ತಂದಿರುವುದು. ಇನ್ನು ಮುಂದೆ ಚಲನಚಿತ್ರ ಸೆನ್ಸಾರ್ ಮಂಡಳಿಗಳು ಯು, ಎ ಪ್ರಮಾಣಪತ್ರಗಳನ್ನು ನೀಡುವ ಬದಲು ವಯೋಮಾನದ ಆಧಾರದಲ್ಲಿ ಸಿನಿಮಾಗಳನ್ನು ವಿಂಗಡಿಸುವ ಅವಕಾಶ ನೀಡಲಾಗಿದೆ. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಯನ್ನು ಅನುರಾಗ್ ಠಾಕೂರ್ ನೀಡಿಲ್ಲ. ಸಂಸತ್ ಅಧಿವೇಶನದಲ್ಲಿ ಇದು ಮಂಡಿಸಲ್ಪಟ್ಟ ನಂತರ ಎಲ್ಲ ಮಾಹಿತಿಗಳು ಸ್ಪಷ್ಟವಾಗಲಿವೆ ಎಂದು ಹೇಳಿದ್ದಾರೆ.
ಏನಿದು ಯು, ಎ?: ಇಲ್ಲಿಯವರೆಗೆ ಸೆನ್ಸಾರ್ ಮಂಡಳಿಗಳು ಸಿನಿಮಾವನ್ನು ವೀಕ್ಷಿಸಿ, ಅವುಗಳೊಳಗಿನ ಮಾಹಿತಿ ಆಧಾರದಲ್ಲಿ ಪ್ರಮಾಣಪತ್ರ ನೀಡುತ್ತಿದ್ದವು. ಯು ಅಂದರೆ ನಿರಾತಂಕವಾಗಿ ಸಾರ್ವಜನಿಕ ಪ್ರದರ್ಶನ ನಡೆಸಲು ಅವಕಾಶ, ಎ ಅಂದರೆ ಪ್ರಾಪ್ತವಯಸ್ಕ ಪ್ರೇಕ್ಷಕರಿಗೆ ಮಾತ್ರ ಸೀಮಿತ, ಯುಎ ಅಂದರೆ ಎಲ್ಲರೂ ನೋಡಬಹುದಾದರೂ 12 ವರ್ಷದೊಳಗಿನ ಮಕ್ಕಳು ಪೋಷಕರ ಮಾರ್ಗದರ್ಶನ ಪಡೆದಿರಬೇಕು. ಇನ್ನು ಮುಂದೆ ಇದು ಈ ಪ್ರಮಾಣಪತ್ರ ವಯಸ್ಸಿನ ಆಧಾರದಲ್ಲಿ ನೀಡಲ್ಪಡುತ್ತವೆ. ಇದು ಅತ್ಯಂತ ಗಮನಾರ್ಹ ಬದಲಾವಣೆಯಾಗಿದೆ. ಆದ್ದರಿಂದ ಇಡೀ ಚಿತ್ರರಂಗಕ್ಕೆ ಅತ್ಯಂತ ಮಹತ್ವದ ಸುದ್ದಿಯಾಗಿ ಇದು ಪರಿಣಮಿಸಿದೆ.
2019ರಲ್ಲಿ ಚಲನಚಿತ್ರ ತಿದ್ದುಪಡಿ ಮಸೂದೆ ರಾಜ್ಯಸಭೆಯಲ್ಲಿ ಮಂಡನೆಯಾಗಿತ್ತು. ಈ ಹೊಸ ಬದಲಾವಣೆಗಳನ್ನು ಚಿತ್ರೋದ್ಯಮದೊಂದಿಗೆ ಚರ್ಚಿಸಿ ಸಿದ್ಧಪಡಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು
Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು
ಕಾಂಗ್ರೆಸ್ಗೆ ಶಾಕ್: ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಭ್ಯರ್ಥಿ
Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು
ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು
MUST WATCH
ಹೊಸ ಸೇರ್ಪಡೆ
Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ
BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ
Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್
Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು
Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ