ಛತ್ತೀಸ್ಗಡ ನಕ್ಸಲ್ ದಾಳಿಗೆ ಕಮಾಂಡರ್ ಬಲಿ
Team Udayavani, Mar 28, 2023, 5:22 AM IST
ಬಿಜಾಪುರ: ಛತ್ತೀಸಗಢದ ಬಿಜಾಪುರ ಜಿಲ್ಲೆಯಲ್ಲಿ ಸೋಮವಾರ ನಕ್ಸಲರು ಅಡಗಿಸಿಟಿದ್ದ ಸುಧಾರಿತ ಸ್ಫೋಟಕ ಸಾಧನ (ಐಇಡಿ) ಸ್ಫೋಟಿಸಿದ್ದರಿಂದ; ಛತ್ತೀಸಗಢ ಭದ್ರತಾ ಪಡೆಯ (ಸಿಎಎಫ್) ಸಹಾಯಕ ಪ್ಲಟೂನ್ ಕಮಾಂಡರ್ ವಿಜಯ್ ಯಾದವ್ ಮೃತಪಟ್ಟಿದ್ದಾರೆ.
ಮಿರೂ¤ರ್ ಪೊಲೀಸ್ ಠಾಣೆ ವ್ಯಾಪ್ತಿಯ ಎಟೆಪಾಲ್ ಮತ್ತು ಟಿಮೆನಾರ್ ಗ್ರಾಮಗಳ ನಡುವೆ ಸೋಮವಾರ ಬೆಳಗ್ಗೆ 7.40ರ ಸುಮಾರಿಗೆ ಈ ಘಟನೆ ನಡೆದಿದೆ. ಈ ಪ್ರದೇಶದ ಸಮೀಪ ರಸ್ತೆ ನಿರ್ಮಾಣ ಕಾರ್ಯ ನಡೆಯುತ್ತಿದ್ದು, ಇದಕ್ಕೆ ಭದ್ರತೆ ನೀಡಲು ಸಿಎಎಫ್ ತಂಡವೊಂದು ಅಲ್ಲಿಗೆ ತೆರಳುತ್ತಿತ್ತು.
ವಿಜಯ್ ಯಾದವ್ ತಮಗೆ ಅರಿವಿಲ್ಲದಂತೆ ನಕ್ಸಲರು ಅಡಗಿಸಿಟಿದ್ದ ಐಇಡಿ ಮೇಲೆ ಕಾಲಿಟ್ಟಿದ್ದರಿಂದ, ಅದು ಸ್ಫೋಟಗೊಂಡಿದೆ. ಅವರ ಮೃತದೇಹವನ್ನು ಉತ್ತರ ಪ್ರದೇಶದ ಬಲ್ಲಿಯ ಜಿಲ್ಲೆಯ ಭೈರ್ಮಗಢದ ಅವರ ನಿವಾಸಕ್ಕೆ ರವಾನಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.