ಕರ್ಕಶ ಮ್ಯೂಸಿಕ್ ಹಾಕಿದ್ದನ್ನು ಪ್ರಶ್ನಿಸಿದ್ದಕ್ಕೆ ದುಷ್ಕರ್ಮಿಗಳಿಂದ ಕೆನಡಾ ನಿವಾಸಿಯ ಹತ್ಯೆ
Team Udayavani, Mar 8, 2023, 7:50 PM IST
ಚಂಡೀಗಢ: ಕಾರಿನಲ್ಲಿ ಕರ್ಕಶ ಸಂಗೀತ ಹಾಕಿದ್ದನ್ನು ಕಡಿಮೆ ಮಾಡಿ ಎಂದು ಹೇಳಿದ್ದಕ್ಕೆ ಕೋಪಗೊಂಡ ಗೂಂಡಾಗಳ ಗುಂಪೊಂದು ಕೆನಡಾ ನಿವಾಸಿಯೊಬ್ಬರನ್ನು ಹತ್ಯೆಗೈದ ಆಘಾತಕಾರಿ ಘಟನೆ ಪಂಜಾಬ್ ನಮೊಹಾಲಿ ಪ್ರದೇಶದಲ್ಲಿ ನಡೆದಿದೆ.
ಹತ್ಯೆಯಾದ ಯುವಕನನ್ನು ಕೆನಡಾ ದೇಶದ ಖಾಯಂ ನಿವಾಸಿ ಪ್ರದೀಪ್ ಸಿಂಗ್ (24 ವರ್ಷ) ಎನ್ನಲಾಗಿದೆ.
ಪ್ರದೀಪ್ ಸಿಂಗ್ ಹಾಗೂ ಸಹೋದರಿ ಕಳೆದ ಫೆಬ್ರವರಿ ತಿಂಗಳಲ್ಲಿ ಕೆನಡಾ ದಿಂದ ಪಂಜಾಬ್ ಗೆ ಬಂದಿದ್ದು ಗುರುದಾಸ್ಪುರದ ಗಜಿಕೋಟ್ ಗ್ರಾಮದಲ್ಲಿ ನೆಲೆಸಿದ್ದರು ಎನ್ನಲಾಗಿದೆ. ಅದರಂತೆ ಮಾರ್ಚ್ 6 ರ ರಾತ್ರಿ ಮೊಹಾಲಿಗೆ ತೆರಳಿದ ವೇಳೆ ಯುವಕರ ಗುಂಪೊಂದು ಕಾರಿನಲ್ಲಿ ಕರ್ಕಶ ಸಂಗೀತ ಹಾಕಿದ್ದರು ಇದರಿಂದ ಅಲ್ಲಿನ ಸಾರ್ವಜನಿಕರಿಗೂ ಕಿರಿಕಿರಿ ಆಗುತ್ತಿತ್ತು ಎನ್ನಲಾಗಿದೆ ಈ ವೇಳೆ ಪ್ರದೀಪ್ ಸಿಂಗ್ ಕಾರಿನಲ್ಲಿದ್ದ ಯುವಕರಲ್ಲಿ ಶಬ್ದ ಕಡಿಮೆ ಮಾಡುವಂತೆ ಹೇಳಿದ್ದ ಅಷ್ಟರಲ್ಲೇ ಯುವಕರ ಗುಂಪು ಪ್ರದೀಪ್ ಸಿಂಗ್ ವಿರುದ್ಧ ಜಗಳಕ್ಕೆ ಬಂದಿದ್ದಾರೆ ಜಗಳ ವಿಕೋಪಕ್ಕೆ ತೆರಳಿ ಯುವಕರ ಗುಂಪು ಪ್ರದೀಪ್ ಸಿಂಗ್ ಮೇಲೆ ಮರಣಾತಿಕವಾಗಿ ಹಲ್ಲೆ ನಡೆಸಿದೆ ಅಲ್ಲದೆ ಹರಿತವಾದ ಆಯುಧದಿಂದ ದಾಳಿ ನಡೆಸಿದ್ದಾರೆ ಇದರಿಂದ ಗಂಭೀರ ಗಾಯಗೊಂಡ ಪ್ರದೀಪ್ ಅಸ್ವಸ್ಥಗೊಂಡು ಬಿದ್ದಿದ್ದಾನೆ ಅಷ್ಟರಲ್ಲೇ ಅಲ್ಲಿದ್ದ ಸಾರ್ವಜನಿಕರು ಮೊಹಾಲಿ ಪೊಲೀಸರಿಗೆ ದೂರು ನೀಡಿದ್ದಾರೆ ಕೂಡಲೇ ಘಟನಾ ಸ್ಥಳಕ್ಕೆ ಪೊಲೀಸರು ಬಂದ ವೇಳೆ ಅಸ್ವಸ್ಥ ಸ್ಥಿತಿಯಲ್ಲಿದ್ದ ಪ್ರದೀಪ್ ನನ್ನು ಕೂಡಲೇ ಹತ್ತಿರದ ಆಸ್ಪತ್ರೆಗೆ ಕರೆದೊಯ್ದರು ಅಷ್ಟೋತ್ತಿಗಾಗಲೇ ಪ್ರದೀಪ್ ಕೊನೆಯುಸಿರೆಳೆದಿದ್ದ ಎಂದು ಪೊಲೀಸರು ಹೇಳಿದ್ದಾರೆ.
ಘಟನೆಗೆ ಸಂಬಂಧಿಸಿ ಓರ್ವ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದು ವಿಚಾರಣೆ ವೇಳೆ ಪ್ರದೀಪ್ ಸಿಂಗ್ ವಿರುದ್ಧ ಯಾವುದೇ ದ್ವೇಷ ಇರಲಿಲ್ಲ ಎಂದು ಹೇಳಿದ್ದಾನೆ, ಸದ್ಯ ಪೊಲೀಸರು ಇತರ ಆರೋಪಿಗಳ ಪತ್ತೆಗೆ ಬಲೆ ಬಿಸಿದ್ದಾರೆ.
ಇದನ್ನೂ ಓದಿ: ಕಾಂತಾರ ಕಾಳಜಿ; ರಿಷಬ್ ಮನವಿಗೆ ಸ್ಪಂದಿಸುವುದಾಗಿ ತಿಳಿಸಿದ ಸಿಎಂ ಬೊಮ್ಮಾಯಿ
Pained to see young Canadian Sikh killed at Anandpur Sahib in Hola Muhalla celebrations
Such incidents reflect the need to introspect within our communityOn one side, we hv achievers like Mr Ajay Banga & on other, such incidents defame Sikhs & Punjabpic.twitter.com/HYSnbOOOMw
— Manjinder Singh Sirsa (@mssirsa) March 7, 2023
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ
ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
BJP 2025ರಲ್ಲಿ ಹಿಂದುಳಿದ ಸಮುದಾಯಗಳ ಮೀಸಲಾತಿ ತೆಗೆದು ಹಾಕಲಿದೆ: ರೇವಂತ್ ರೆಡ್ಡಿ
Patna: ಹೋಟೆಲ್ ನಲ್ಲಿ ಭಾರಿ ಅಗ್ನಿ ಅವಘಡ, 6 ಮಂದಿ ಸಜೀವ ದಹನ, ಹಲವರಿಗೆ ಗಾಯ
ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್ಗೆ ಸೂಚನೆ
MUST WATCH
ಹೊಸ ಸೇರ್ಪಡೆ
BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ
ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ
ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’
Kollywood: ಅಜಿತ್ ಹುಟ್ಟುಹಬ್ಬಕ್ಕೆ ಸೂಪರ್ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್ ಖುಷ್
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ