ಸಿಡಿಎಸ್ಸಿಒಗೆ ಅಧಿಕಾರ? ಔಷಧಗಳ ಮೇಲೆ ನಿಯಂತ್ರಣ ರಾಜ್ಯ ಪ್ರಾಧಿಕಾರಗಳಿಗಿಲ್ಲ
ಕೇಂದ್ರ ಸರಕಾರದ ಹೊಸ ಕರಡು ವಿಧೇಯಕದಲ್ಲಿ ಪ್ರಸ್ತಾಪ
Team Udayavani, Mar 13, 2023, 6:50 AM IST
ಹೊಸದಿಲ್ಲಿ: ಇನ್ನು ಮುಂದೆ ದೇಶದಲ್ಲಿ ತಯಾರಾಗುವ ಔಷಧಗಳು ಮತ್ತು ಸೌಂದರ್ಯವರ್ಧಕಗಳ ಮೇಲೆ ನಿಯಂತ್ರಣ ಹೇರುವ ಅಧಿಕಾರ ರಾಜ್ಯ ಔಷಧ ನಿರ್ದೇಶ ನಾಲಯಗಳ ಬದಲಿಗೆ ಕೇಂದ್ರೀಯ ಔಷಧ ಗುಣಮಟ್ಟ ನಿಯಂತ್ರಣ ಪ್ರಾಧಿಕಾರ (ಸಿಡಿಎಸ್ಸಿಒ)ಕ್ಕೆ ನೀಡುವ ಕುರಿತು ಕೇಂದ್ರ ಸರಕಾರ ಪ್ರಸ್ತಾಪಿಸಿದೆ.
ಸದ್ಯ ಇರುವ ಔಷಧಗಳು ಮತ್ತು ಸೌದರ್ಯವರ್ಧಕಗಳ ಕಾಯ್ದೆ 1940ಕ್ಕೆ ತಿದ್ದುಪಡಿ ತಂದು ಹೊಸ ಔಷಧ, ವೈದ್ಯಕೀಯ ಸಾಧನಗಳು ಮತ್ತು ಸೌಂದರ್ಯವರ್ಧಕಗಳ ವಿಧೇಯಕ 2023ರಲ್ಲಿ ಈ ಪ್ರಸ್ತಾಪ ಮಂಡಿಸಲಾಗಿದೆ. ಆದರೆ, ಔಷಧಗಳ, ಸೌಂದರ್ಯವರ್ಧಕಗಳ ಮತ್ತು ವೈದ್ಯಕೀಯ ಸಾಧನಗಳ ಮಾರಾಟವನ್ನು ನಿಯಂತ್ರಣ ಮಾಡುವ ಅಧಿಕಾರ ಆಯಾ ರಾಜ್ಯ ಸರ್ಕಾ ರಗಳ ವ್ಯಾಪ್ತಿಯಲ್ಲಿಯೇ ಮುಂದುವರಿಯ ಲಿದೆ ಎಂದು ಪರಿಷ್ಕೃತ ಕರಡು ವಿಧೇಯ ಕದಲ್ಲಿ ಉಲ್ಲೇಖೀಸಲಾಗಿದೆ. ಇದಲ್ಲದೆ, ಇ-ಫಾರ್ಮಸಿಯನ್ನು ನಿರ್ವ ಹಿಸುವ ಮತ್ತು ಆರಂಭಿಸುವ ನಿಟ್ಟಿನಲ್ಲಿ ಪರವಾನಗಿ ಪಡೆಯುವ ವ್ಯವಸ್ಥೆ, “ಆನ್ಲೈನ್ ಮೂಲಕ ಯಾವುದೇ ಔಷಧಗಳನ್ನು ಮಾರಾಟ, ಸಂಗ್ರಹ, ವಿತರಣೆ ನಿಯಮ ಗಳನ್ನು ಕೇಂದ್ರ ಸರಕಾರವೇ ಪರಿಶೀಲಿಸಿ ಜಾರಿಗೆ ತರಲಿದೆ’ ಎಂದು ಪ್ರತಿಪಾದಿಸ ಲಾಗಿದೆ. ಹೊಸ ವಿಧೇಯಕದಲ್ಲಿ ಆಯುಷ್ ಔಷಧಗಳ ಮಾರಾಟ ಮತ್ತು ನಿಯಂತ್ರಣ ವಿಚಾರಗಳ ಬಗ್ಗೆ ಪ್ರತ್ಯೇಕವಾಗಿಯೇ ಉಲ್ಲೇಖೀಸಲಾಗಿದೆ.
ಕರಡು ವಿಧೇಯಕವನ್ನು ಕೇಂದ್ರ ಸರಕಾರದ ವಿವಿಧ ಸಚಿವಾಲಯಗಳಿಗೆ ಕಳು ಹಿಸಿಕೊಡಲಾಗಿದೆ. ಜತೆಗೆ ಸಾರ್ವಜನಿಕರು, ಔಷಧೋದ್ಯಮ ಕ್ಷೇತ್ರದ ಪ್ರಮುಖರಿಂದ ಪ್ರತಿಕ್ರಿಯೆಗಳನ್ನು ಆಹ್ವಾನಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mumbai 26/11 ದಾಳಿಯ ವಕೀಲ ಉಜ್ವಲ್ ನಿಕಮ್ ಗೆ ಬಿಜೆಪಿ ಟಿಕೆಟ್, ಪೂನಮ್ ಗೆ ಕೊಕ್
Interim Bail: ಹೇಮಂತ್ ಸೋರೆನ್ ಗೆ ಮಧ್ಯಂತರ ಜಾಮೀನು ನಿರಾಕರಿಸಿದ ನ್ಯಾಯಾಲಯ
Mamata Banerjee: ಮತ್ತೆ ಎಡವಿ ಬಿದ್ದ ಮಮತಾ ಬ್ಯಾನರ್ಜಿ… ಕಾಲಿಗೆ ಸಣ್ಣ ಗಾಯ
‘ತಾರಕ್ ಮೆಹ್ತಾ ಕಾ ಉಲ್ಟಾ ಚಶ್ಮಾ’ ನಟ ಗುರುಚರಣ್ ಸಿಂಗ್ ನಾಪತ್ತೆ… ಮೊಬೈಲ್ ಸ್ವಿಚ್ ಆಫ್
W.Bengal; ಟಿಎಂಸಿ ಪಕ್ಷವನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿ: ಸುವೇಂದು ಅಧಿಕಾರಿ
MUST WATCH
ಹೊಸ ಸೇರ್ಪಡೆ
Belgavi; ಪ್ರಧಾನಿ ಮೋದಿ ವಾಸ್ತವ್ಯ: ಸಂಭ್ರಮದ ಸ್ವಾಗತ
Chamarajanagar: ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದವನಿಗೆ 20 ವರ್ಷ ಜೈಲು
Yellapur; ಬೊಲೆರೋ ಢಿಕ್ಕಿಯಾಗಿ ಬೈಕ್ ಸವಾರ ದುರ್ಮರಣ, ಹಿಂಬದಿ ಸವಾರ ಗಂಭೀರ
Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್
IPL; ಮೆಕ್ಗುರ್ಕ್ ಅಬ್ಬರ : ಡೆಲ್ಲಿ ಎದುರು ಹೋರಾಡಿ ಸೋತ ಮುಂಬೈ