Chandrayaan-4 ಅಣಿಯಾದ ಇಸ್ರೋ: ಸಂಕ್ಷಿಪ್ತ ಮಾಹಿತಿ ಇಲ್ಲಿದೆ…
ಚಂದ್ರನಲ್ಲಿರುವ ಶಿಲೆಯ ಮಾದ ರಿಗಳನ್ನು ಭೂಮಿಗೆ ತರಲಿರುವ ನೌಕೆ
Team Udayavani, Dec 8, 2023, 6:20 AM IST
ಚಂದ್ರಯಾನ-3ರ ಅಭೂತಪೂರ್ವ ಯಶಸ್ಸಿನ ಅನಂತರ ಚಂದ್ರಯಾನ-4 ಯೋಜನೆಗೆ ಭಾರತೀಯ ಬಾಹ್ಯಾಕಾಶ ಸಂಶೋಧನ ಸಂಸ್ಥೆ(ಇಸ್ರೋ) ಸಿದ್ಧವಾಗಿದೆ. ಈ ಯೋಜನೆಯು ಚಂದ್ರನ ಅಂಗಳದಿಂದ ಅಧ್ಯಯನಕ್ಕಾಗಿ ಶಿಲೆಯ ಮಾದರಿಗಳನ್ನು ಭೂಮಿಗೆ ತರುವ ಹಾಗೂ ಗಗನಯಾನಿಗಳನ್ನು ಹೊತ್ತೂಯ್ದು, ವಾಪಸ್ ಭೂಮಿಗೆ ಕರೆ ತರುವ ಮುಖ್ಯ ಗುರಿಯನ್ನು ಹೊಂದಿದೆ. ಯೋಜನೆ ಕುರಿತು ಸಂಕ್ಷಿಪ್ತ ಮಾಹಿತಿ ಇಲ್ಲಿದೆ.
ಯೋಜನೆಯ ಪ್ರಮುಖ ಹಂತಗಳು
ಯೋಜನೆಯ ಮೊದಲ ಹೆಜ್ಜೆಯಾಗಿ ಬಾಹ್ಯಾಕಾಶ ನೌಕೆ ಹೊತ್ತ ಉಡಾವಣ ವಾಹನವು ನಭಕ್ಕೆ ಹಾರಲಿದೆ. ಅನಂತರ ಚಂದ್ರನ ಕಕ್ಷಗೆ ತಲುಪಿ, ಚಂದ್ರನ ಮೇಲ್ಮೆ„ ಮೇಲೆ ಸಾಫ್ಟ್ ಲ್ಯಾಂಡಿಂಗ್ ಆಗಲಿದೆ. ಎರಡನೇ ಹಂತದಲ್ಲಿ ಪರೀಕ್ಷಾರ್ಥವಾಗಿ ಚಂದ್ರನಲ್ಲಿರುವ ಶಿಲೆಯ ಮಾದ ರಿಯನ್ನು ಸಂಗ್ರಹಿಸಲಿದೆ. ಮೂರನೇ ಹಂತದಲ್ಲಿ ಅದನ್ನು ಹೊತ್ತ ಬಾಹ್ಯಾಕಾಶ ನೌಕೆಯು ಪುನಃ ಭೂಮಿಯ ಕಡೆಗೆ ಪ್ರಯಾಣ ಬೆಳೆಸಲಿದೆ. ನಾಲ್ಕನೇ ಹಂತದಲ್ಲಿ ಭೂಮಿಯ ವಾತಾವರಣವನ್ನು ಪ್ರವೇಶಿಸಲಿರುವ ನೌಕೆಯು, ಇಲ್ಲಿ ಸಾಫ್ಟ್ ಲ್ಯಾಂಡಿಂಗ್ ಮಾಡಲಿದೆ.
ಯಶಸ್ಸಿನಿಂದ ಉತ್ತೇಜನ
ಇತ್ತೀಚೆಗೆ ಇಸ್ರೋ ವಿಜ್ಞಾನಿಗಳು ಚಂದ್ರಯಾನ-3ರ ಪ್ರೊಪಲÒನ್ ಮಾಡ್ನೂಲ್ ಅನ್ನು ಚಂದ್ರನ ಕಕ್ಷೆಯಿಂದ ಯಶಸ್ವಿಯಾಗಿ ಭೂಮಿಯ ಕಕ್ಷಗೆ ರವಾನಿಸಿದ್ದಾರೆ. ಈ ಪ್ರಯೋಗದಿಂದ ಉತ್ತೇಜನಗೊಂಡಿರುವ ಇಸ್ರೋ, ಚಂದ್ರಯಾನ-4ಕ್ಕೆ ಅಣಿಯಾಗುತ್ತಿದೆ.
ಚಂದ್ರಯಾನ-4 ಮುಖ್ಯ ಉದ್ದೇಶ
ಚಂದ್ರಯಾನ-4ರ ಮುಖ್ಯ ಗುರಿಯು ಚಂದ್ರನಲ್ಲಿಗೆ ಬಾಹ್ಯಾಕಾಶ ನೌಕೆಯನ್ನು ಕಳುಹಿಸುವುದು. ಚಂದ್ರನ ಅಂಗಳದಲ್ಲಿರುವ ಶಿಲೆಯ ಮಾದ ರಿಗಳನ್ನು ಸಂಗ್ರಹಿಸಿ, ಅವುಗಳನ್ನು ಹೊತ್ತ ಬಾಹ್ಯಾಕಾಶ ನೌಕೆಯು ಪುನಃ ಭೂಮಿಗೆ ಸುರಕ್ಷಿತವಾಗಿ ಮರಳುವುದಾಗಿದೆ. ಅನಂತರ ಈ ಮಾದರಿಗಳನ್ನು ವೈಜ್ಞಾನಿಕ ಅಧ್ಯಯನಕ್ಕೆ ಒಳಪಡಿಸಲಾಗುತ್ತದೆ. ಇದಿಷ್ಟೇ ಅಲ್ಲದೆ, ಗಗನಯಾನಿಗಳನ್ನೂ ಕರೆದೊಯ್ದು ವಾಪಸ್ ಕರೆತರುವ ಸಾಧ್ಯತೆ ಬಗ್ಗೆ ಇಸ್ರೋ ಪರಿಶೀಲಿಸುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mamata Banerjee: ಮತ್ತೆ ಎಡವಿ ಬಿದ್ದ ಮಮತಾ ಬ್ಯಾನರ್ಜಿ… ಕಾಲಿಗೆ ಸಣ್ಣ ಗಾಯ
‘ತಾರಕ್ ಮೆಹ್ತಾ ಕಾ ಉಲ್ಟಾ ಚಶ್ಮಾ’ ನಟ ಗುರುಚರಣ್ ಸಿಂಗ್ ನಾಪತ್ತೆ… ಮೊಬೈಲ್ ಸ್ವಿಚ್ ಆಫ್
W.Bengal; ಟಿಎಂಸಿ ಪಕ್ಷವನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿ: ಸುವೇಂದು ಅಧಿಕಾರಿ
ಉತ್ತರಪತ್ರಿಕೆಯಲ್ಲಿ ಜೈಶ್ರೀರಾಮ್ ಘೋಷಣೆ ಬರೆದ ವಿದ್ಯಾರ್ಥಿ ಪಾಸ್: ಪ್ರಾಧ್ಯಾಪಕ ಅಮಾನತು!
ಸಲ್ಮಾನ್ ಮನೆ ಬಳಿ ಗುಂಡಿನ ದಾಳಿ: ಲಾರೆನ್ಸ್ ಬಿಷ್ಣೋಯ್ ಸಹೋದರನ ವಿರುದ್ಧ ಲುಕ್ ಔಟ್ ನೋಟಿಸ್