ಹವಾಮಾನ ಬದಲಾವಣೆಯಿಂದ ದ. ಭಾರತದಲ್ಲಿ ಪ್ರವಾಹ?


Team Udayavani, Jan 20, 2021, 3:00 AM IST

ಹವಾಮಾನ ಬದಲಾವಣೆಯಿಂದ ದ. ಭಾರತದಲ್ಲಿ ಪ್ರವಾಹ?

ಹೊಸದಿಲ್ಲಿ: ಈ ವರ್ಷ ಜನವರಿ ಮೊದಲ ವಾರದವರೆಗೂ ಕಾಡಿದ ಮಳೆ, ಕಳೆದ ವರ್ಷದ ಮಳೆಗಾಲದಲ್ಲಿ ನೆರೆ, ಅದಕ್ಕೆ ಹಿಂದೆ 2018 ಮತ್ತು 2019ರಲ್ಲಿ ಕೇರಳ ಪ್ರವಾಹ, ಕೊಡಗು, ಸಂಪಾಜೆ, ಬೆಳ್ತಂಗಡಿ ಕಡೆಗಳಲ್ಲಿ ಭಾರೀ ಮಳೆಯಿಂದ ಗುಡ್ಡ ಕುಸಿತ, ಉತ್ತರ ಕರ್ನಾಟಕದಲ್ಲಿ ಪ್ರವಾಹ… ಭವಿಷ್ಯದಲ್ಲಿ ಇಂಥ ಘಟನೆಗಳು ಇನ್ನಷ್ಟು ಹೆಚ್ಚಬಹುದೇ? ಇವೆಲ್ಲ ಮಳೆಯ ವರ್ತನೆ ಸಹಿತ ಹವಾಮಾನ ಬದಲಾವಣೆಯ ಮುನ್ಸೂಚನೆಯೇ?

ಹೌದು ಎನ್ನುತ್ತದೆ ಒಂದು ಅಧ್ಯಯನ ವರದಿ. ಹವಾಮಾನ ಬದಲಾವಣೆಯಿಂದ ಭಾರತ ಸಹಿತ ಉಷ್ಣ ವಲಯದ ಮಳೆ ಸುರಿಯುವ ಪ್ರದೇಶಗಳಲ್ಲಿ ಅಸಮತೋಲನ ಉಂಟಾಗಲಿದ್ದು, ಇದು ಭಾರ ತದ ಹಲವು ಭಾಗಗಳಲ್ಲಿ ಪ್ರವಾಹವನ್ನು ತೀವ್ರಗೊಳಿ ಸಲಿದೆ ಎಂದು “ನೇಚರ್‌ ಕ್ಲೈಮೇಟ್‌ ಚೇಂಜ್‌’ ನಿಯತಕಾಲಿಕದಲ್ಲಿ ಪ್ರಕಟವಾದ ಅಧ್ಯಯನ ಎಚ್ಚರಿಸಿದೆ.

ಈ ಶತಮಾನದ ಅಂತ್ಯದ ವರೆಗೂ ಹಸುರುಮನೆ ಅನಿಲಗಳು ಮತ್ತು ಮಾಲಿನ್ಯದ ಪ್ರಮಾಣದಲ್ಲಿ ಏರಿಕೆಯಾದಲ್ಲಿ ಉಷ್ಣವಲಯದ ಮಳೆ ಪ್ರದೇಶಗಳು ಹೇಗೆ ಸ್ಪಂದಿಸಬಹುದು ಎನ್ನುವುದನ್ನು ಅಭ್ಯಸಿಸಲಾಗಿದೆ.

ವರದಿಯ ಪ್ರಕಾರ, ಪೂರ್ವ ಆಫ್ರಿಕ ಮತ್ತು ಹಿಂದೂ ಮಹಾಸಾಗರ ಆಸುಪಾಸಿನ ಉಷ್ಣವಲ ಯದ ಮಳೆ ಪ್ರದೇಶಗಳು ಉತ್ತರಾಭಿಮುಖವಾಗಿ ಸ್ಥಳಾಂತರವಾಗುತ್ತಿವೆ. ಇದರಿಂದ ದಕ್ಷಿಣ ಭಾರತ ದಲ್ಲಿ ಪ್ರವಾಹ ತೀವ್ರವಾಗುವ ಸಾಧ್ಯತೆಯಿದೆ. 2100ರ ವೇಳೆಗೆ ಇದರಿಂದ ಜಾಗತಿಕ ಜೀವವೈವಿಧ್ಯ ಮತ್ತು ಆಹಾರ ಭದ್ರತೆಯ ಮೇಲೂ ಪರಿಣಾಮ ಉಂಟಾಗಲಿದೆ.

ಪೂರ್ವ ಮತ್ತು ಪಶ್ಚಿಮ ಗೋಳಾರ್ಧಗಳಲ್ಲಿ ಸ್ಪಂದನೆಯನ್ನು ಪ್ರತ್ಯೇಕಿಸಿ ಭಾರತದಲ್ಲಿ ಮುಂಬ ರುವ ದಶಕಗಳಲ್ಲಾಗುವ ತೀವ್ರ ಹವಾಮಾನ ಬದಲಾವಣೆಗಳಿಗೆ ಈ ಅಧ್ಯಯನದಲ್ಲಿ ಮಹತ್ವ ನೀಡಲಾಗಿದೆ.

ಅಧ್ಯಯನದಲ್ಲಿ ಭಾರತದ ವಿವಿಧ ಹವಾಮಾನ ವಲಯಗಳಲ್ಲಿ 1901ರಿಂದ 2015ರ ವರೆಗಿನ ವಿವರಗಳನ್ನು ಪರಿಗಣಿಸಲಾಗಿದೆ. ಸಂಶೋಧ ನೆಯು ಮಳೆಯ ಬದಲಾವಣೆಗಳನ್ನು ದೀರ್ಘ‌ಕಾ ಲೀನ ಪ್ರಾದೇಶಿಕ ಮತ್ತು ತಾತ್ಕಾಲಿಕ ಆಯಾಮ ಗಳಿಂದ ಪರಿಶೀಲಿಸಿದೆ. ಅಧ್ಯಯನದ ಪ್ರಕಾರ ಭಾರತದ 34 ಹವಾಮಾನ ಉಪವಿಭಾಗಗಳ ಸಹಿತ 17 ವಲಯಗಳ ಪೈಕಿ 11ರಲ್ಲಿ ಮಳೆಯ ಪ್ರಮಾಣದಲ್ಲಿ ಗಮನಾರ್ಹ ಕುಸಿತವಾಗಿದೆ. ಮಳೆಯ ಪ್ರಮಾಣದಲ್ಲಿ ಇಳಿಕೆ 1951ರ ಬಳಿಕ ದಾಖಲಾಗಿದ್ದು, ಈ ಇಳಿಕೆ ಮುಂಬರುವ 15 ವರ್ಷಗಳಲ್ಲಿ ಎಲ್ಲ ಹವಾಮಾನ ವಲಯಗಳಿಗೂ ವಿಸ್ತರಿಸುವ ಮುನ್ಸೂಚನೆ ಇದೆ.

ಈಗಾಗಲೇ ಜಲಮೂಲಗಳ ಲಭ್ಯತೆ ಸೀಮಿತ ವಾಗಿದ್ದು, ಭವಿಷ್ಯದಲ್ಲಿ ನೀರಿನ ಬೇಡಿಕೆ ಇನ್ನೂ ಹೆಚ್ಚಲಿದೆ. ಮಳೆಯ ಪ್ರಮಾಣ, ಸಮಯದಲ್ಲಾ ಗುವ ಬದಲಾವಣೆಗಳಿಂದ ಜಲಸಂಪನ್ಮೂಲಗಳ ಲಭ್ಯತೆ, ನಿರ್ವಹಣೆಯ ಮೇಲೆ ಪ್ರತಿಕೂಲ ಪರಿಣಾಮಗಳು ಉಂಟಾಗಲಿವೆ ಎಂದು ಅಧ್ಯಯನ ಎಚ್ಚರಿಸಿದೆ.

ಎಲ್ಲೆಲ್ಲಿ, ಏನೇನು ಪರಿಣಾಮ? :

ಮಳೆಯ ಪ್ರಮಾಣದಲ್ಲಿ ಅತೀ ಹೆಚ್ಚಿನ ವ್ಯತ್ಯಯ: ಅರುಣಾಚಲ ಪ್ರದೇಶ ಉಪವಿಭಾಗದಲ್ಲಿ.ಅನಂತರದ ಸ್ಥಾನಗಳಲ್ಲಿ ಕರಾವಳಿ ಕರ್ನಾಟಕ (480.98 ಮಿ.ಮೀ.), ಕೊಂಕಣ, ಗೋವಾ (478.49 ಮಿ.ಮೀ.) ಉಪವಿಭಾಗಗಳಿವೆ.  2030ರ ವರೆಗಿನ ಅವಧಿಯಲ್ಲಿ ಕರಾವಳಿ ಕರ್ನಾಟಕ, ಕೊಂಕಣ ಮತ್ತು ಗೋವಾ ಹಾಗೂ ಕೇರಳ ಉಪವಿಭಾಗಗಳಲ್ಲಿ ಅತೀ ಹೆಚ್ಚಿನ ಮಳೆಯಾಗಲಿದೆ. (2,000 ಮಿ.ಮೀ.ಗೂ ಅಧಿಕ). ಹಾಗೆಯೇ ಪಶ್ಚಿಮ ರಾಜಸ್ಥಾನ, ಪೂರ್ವ ರಾಜಸ್ಥಾನ, ತಮಿಳು ನಾಡು ಮತ್ತು ರಾಯಲಸೀಮಾ ಉಪವಿಭಾ ಗಗಳಲ್ಲಿ ಅತೀ ಕಡಿಮೆ ಮಳೆಯಾಗಲಿದೆ (300 ಮಿ.ಮೀ.ಗೂ ಕಡಿಮೆ).

ಕೆಲವು ಉಪವಿಭಾಗಗಳಲ್ಲಿ ನಿಧಾನವಾಗಿ ಮಳೆ ಕಡಿಮೆಯಾಗಲಿದ್ದು, ಉಳಿದೆಡೆ ಹೆಚ್ಚಾಗಲಿದೆ. ತೀವ್ರ ಮಳೆಯಿಂದ ಭವಿಷ್ಯದಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗುವ ಸಂಭವವಿದೆ.

ಟಾಪ್ ನ್ಯೂಸ್

Surjewala

BJP ಎಂದರೆ ಹೊಸ ಈಸ್ಟ್ ಇಂಡಿಯಾ ಕಂಪೆನಿ: ಸುರ್ಜೇವಾಲಾ ಕಿಡಿ

Kharge (2)

Kalaburagi; ಸತ್ತಾಗ ಮಣ್ಣಿಗಾದರೂ ಬನ್ನಿ: ಭಾವನಾತ್ಮಕವಾಗಿ ಮತಯಾಚಿಸಿದ ಖರ್ಗೆ

voter

Vote ಚಲಾಯಿಸಲು ಭಾರೀ ಸಂಖ್ಯೆಯಲ್ಲಿ ಬರುತ್ತಿರುವ ಕೇರಳ ಎನ್‌ಆರ್‌ಐಗಳು

ತಂಗಿಯ ಸಮಾಧಿ ಸ್ಥಳಕ್ಕೆ  ಭೇಟಿ ನೀಡುವುದನ್ನು ವ್ಲಾಗ್‌ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ

ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್‌ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ

ಹಳದಿ ಶಾಸ್ತ್ರದ ವೇಳೆ ವರನಿಗೆ ವಿದ್ಯುತ್ ಸ್ಪರ್ಶ… ಆಸ್ಪತ್ರೆ ದಾರಿಯಲ್ಲಿ ಕೊನೆಯುಸಿರು

ಹಳದಿ ಶಾಸ್ತ್ರದ ವೇಳೆ ವಿದ್ಯುತ್ ಸ್ಪರ್ಶ… ಆಸ್ಪತ್ರೆ ದಾರಿ ಮಧ್ಯೆ ಕೊನೆಯುಸಿರೆಳೆದ ವರ

Inheritance Tax:  ಸ್ಯಾಮ್‌ ಪಿತ್ರೋಡಾ ಹೇಳಿದ್ದೇನು-ಏನಿದು ಪಿತ್ರಾರ್ಜಿತ ತೆರಿಗೆ ಜಟಾಪಟಿ!

Inheritance Tax:  ಸ್ಯಾಮ್‌ ಪಿತ್ರೋಡಾ ಹೇಳಿದ್ದೇನು-ಏನಿದು ಪಿತ್ರಾರ್ಜಿತ ತೆರಿಗೆ ಜಟಾಪಟಿ!

Rahul Gandhi 3

U-turn ಹೊಡೆದ ರಾಹುಲ್: ಸಂಪತ್ತು ಹಂಚಿಕೆ ಬಗ್ಗೆ ಹೇಳಿಲ್ಲ,ಅನ್ಯಾಯ…


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಹಳದಿ ಶಾಸ್ತ್ರದ ವೇಳೆ ವರನಿಗೆ ವಿದ್ಯುತ್ ಸ್ಪರ್ಶ… ಆಸ್ಪತ್ರೆ ದಾರಿಯಲ್ಲಿ ಕೊನೆಯುಸಿರು

ಹಳದಿ ಶಾಸ್ತ್ರದ ವೇಳೆ ವಿದ್ಯುತ್ ಸ್ಪರ್ಶ… ಆಸ್ಪತ್ರೆ ದಾರಿ ಮಧ್ಯೆ ಕೊನೆಯುಸಿರೆಳೆದ ವರ

ತಂಗಿ ಮದುವೆಗೆ ಟಿವಿ ಗಿಫ್ಟ್‌ ಕೊಟ್ಟದ್ದಕ್ಕೆ ಅಸಮಾಧಾನ: ಪತಿಯನ್ನು ಥಳಿಸಿ ಕೊಲ್ಲಿಸಿದ ಪತ್ನಿ

ತಂಗಿ ಮದುವೆಗೆ ಟಿವಿ ಗಿಫ್ಟ್‌ ಕೊಟ್ಟದ್ದಕ್ಕೆ ಅಸಮಾಧಾನ: ಪತಿಯನ್ನು ಥಳಿಸಿ ಕೊಲ್ಲಿಸಿದ ಪತ್ನಿ

1-wqqwqwe

West Bengal; ಮಗಳನ್ನು ಕಂಡು ಕಣ್ಣೀರಿಟ್ಟ ಶೇಖ್ ಷಹಜಹಾನ್: ಬಿಜೆಪಿ ವ್ಯಂಗ್ಯ

Amit Shah: 2024ರ ಚುನಾವಣೆಯಲ್ಲಿ ಎನ್‌ ಡಿಎಗೆ 400ಕ್ಕೂ ಅಧಿಕ ಸ್ಥಾನ ಖಚಿತ: ಶಾ

Amit Shah: 2024ರ ಚುನಾವಣೆಯಲ್ಲಿ ಎನ್‌ ಡಿಎಗೆ 400ಕ್ಕೂ ಅಧಿಕ ಸ್ಥಾನ ಖಚಿತ: ಶಾ

baba-ramdev

Patanjali ತಪ್ಪು ಜಾಹೀರಾತು; ಕ್ಷಮೆಯಾಚಿಸಿದ ಬಾಬಾ ರಾಮ್ ದೇವ್,ಬಾಲಕೃಷ್ಣ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

12-uv-fusion

UV Fusion: ಮಕ್ಕಳ ಆಸಕ್ತಿ ಹುಡುಕುವ ಕೆಲಸವಾಗಲಿ

Surjewala

BJP ಎಂದರೆ ಹೊಸ ಈಸ್ಟ್ ಇಂಡಿಯಾ ಕಂಪೆನಿ: ಸುರ್ಜೇವಾಲಾ ಕಿಡಿ

ಗದಗ: ಸೈಕ್ಲಿಂಗ್‌ ರಾಷ್ಟ್ರೀಯ ತರಬೇತಿ ಶಿಬಿರಕ್ಕೆ ಪವಿತ್ರಾ ಆಯ್ಕೆ

ಗದಗ: ಸೈಕ್ಲಿಂಗ್‌ ರಾಷ್ಟ್ರೀಯ ತರಬೇತಿ ಶಿಬಿರಕ್ಕೆ ಪವಿತ್ರಾ ಆಯ್ಕೆ

11-mallige

Bappanadu Durgaparameshwari: ಮಲ್ಲಿಗೆ ಪ್ರಿಯೆ ದೇವಿಗೆ ಲಕ್ಷ ಮಲ್ಲಿಗೆ ಶಯನೋತ್ಸವ

Kharge (2)

Kalaburagi; ಸತ್ತಾಗ ಮಣ್ಣಿಗಾದರೂ ಬನ್ನಿ: ಭಾವನಾತ್ಮಕವಾಗಿ ಮತಯಾಚಿಸಿದ ಖರ್ಗೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.