ಪ್ರತಿಭಟನಾ ನಿರತ ರೈತರಿಗೆ ‘ಮದ್ಯ’ ಕೊಡಿ ಎಂದ ಕಾಂಗ್ರೆಸ್ ನಾಯಕಿ….ಟಿಕಾಯತ್ ತಿರುಗೇಟು
Team Udayavani, Feb 15, 2021, 10:15 PM IST
ನವದೆಹಲಿ : ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತರಿಗೆ ಮದ್ಯ ನೀಡಿ ಎಂದು ಹೇಳುವ ಮೂಲಕ ಹರಿಯಾಣದ ಕಾಂಗ್ರೆಸ್ ನಾಯಕಿ ವಿದ್ಯಾರಾಣಿ ವಿವಾದ ಎಬ್ಬಿಸಿದ್ದಾರೆ.
ಇಂದು ರೈತರ ಪ್ರತಿಭಟನೆ ಕುರಿತು ಮಾತಾಡಿದ ವಿದ್ಯಾರಾಣಿ, ರೈತರ ಆಂದೋಲನ ಒಳ್ಳೆಯ ಉದ್ದೇಶದಿಂದ ನಡೆಯುತ್ತಿದೆ. ಅವರಿಗೆ ನಾವು ಬೆಂಬಲ ನೀಡಬೇಕು. ಇದರಿಂದ ನಮ್ಮ ಪಕ್ಷಕ್ಕೆ ಒಳ್ಳೆಯದಾಗಲಿದೆ. ರೈತರಿಗೆ ಅಗತ್ಯವಿರುವ ಎಲ್ಲವನ್ನೂ ನೀಡಿ, ಅದು ಹಣವಾಗಿರಬಹುದು, ತರಕಾರಿಯಾಗಿರಬಹುದು ಇಲ್ಲವೆ ಮದ್ಯ ( ಸಾರಾಯಿ) ಆಗಿರಬಹುದು ಎಂದಿದ್ದಾರೆ.
ವಿದ್ಯಾರಾಣಿ ಅವರ ಈ ಹೇಳಿಕೆ ವಿವಾದದ ರೂಪ ಪಡೆದುಕೊಂಡಿದೆ. ಕಾಂಗ್ರೆಸ್ ನಾಯಕಿ ವಿರುದ್ಧ ಟೀಕೆಗಳ ಸುರಿಮಳೆಯಾಗಿದೆ.
ಇದನ್ನೂ ಓದಿ:ಕಂದಕಕ್ಕೆ ಉರುಳಿದ ಕಾರು …6 ಜನರ ದುರ್ಮರಣ
ವಿದ್ಯಾರಾಣಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ರೈತ ಮುಖಂಡ ರಾಕೇಶ್ ಟಿಕಾಯತ್, ನಮ್ಮ ಪ್ರತಿಭಟನಾ ಸ್ಥಳದಲ್ಲಿ ಎಣ್ಣೆಯ ಅಗತ್ಯವಾದರೂ ಏನಿದೆ. ಅವರು ಹೀಗೇಕೆ ಹೇಳಿದರೂ ಅಂತಾ ಗೊತ್ತಿಲ್ಲ. ಇಂತವರ ಬೆಂಬಲ ನಮ್ಮ ಹೋರಾಟಕ್ಕೆ ಬೇಡ ಎಂದು ತಿರುಗೇಟು ನೀಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Brahmos; ಫಿಲಿಪ್ಪೀನ್ಸ್ಗೆ ಬ್ರಹ್ಮೋಸ್: ಭಾರತದ ಮೊದಲ ರಫ್ತು
EC ಚುನಾವಣ ಆಯೋಗ ಅಲ್ಲ, ಬಿಜೆಪಿ ಆಯೋಗ: ಮಮತಾ ಬ್ಯಾನರ್ಜಿ ಟೀಕಾಸ್ತ್ರ
ED; ನಾನು ತಿಂದದ್ದು ಮೂರೇ ಮಾವು: ಕೋರ್ಟ್ಗೆ ಕೇಜ್ರಿವಾಲ್ ಮಾಹಿತಿ
Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!
Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು