1984ರ ಸಿಖ್ ವಿರೋಧಿ ದಂಗೆ; ಕಾಂಗ್ರೆಸ್ ನಾಯಕ ಟೈಟ್ಲರ್ಗೆ ಬಂಧನ ಪೂರ್ವ ಜಾಮೀನು
Team Udayavani, Aug 4, 2023, 4:11 PM IST
ಹೊಸದಿಲ್ಲಿ: 1984ರ ಸಿಖ್ ವಿರೋಧಿ ದಂಗೆ ಕೇಸ್ ನಲ್ಲಿ ಕಾಂಗ್ರೆಸ್ ನಾಯಕ ಜಗದೀಶ್ ಟೈಟ್ಲರ್ ಅವರಿಗೆ ದೆಹಲಿಯ ರೂಸ್ ಅವೆನ್ಯೂ ಕೋರ್ಟ್ ಶುಕ್ರವಾರ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.
ಶನಿವಾರ ಅವರು ನ್ಯಾಯಾಲಯಕ್ಕೆ ಹಾಜರಾಗುವ ಮೊದಲು ಜಾಮೀನು ಮಂಜೂರು ಮಾಡಲಾಗಿದೆ. ಪ್ರಕರಣದಲ್ಲಿ ಸಿಬಿಐ ಚಾರ್ಜ್ಶೀಟ್ ಅನ್ನು ನ್ಯಾಯಾಲಯವು ಗಮನಕ್ಕೆ ತೆಗೆದುಕೊಂಡ ನಂತರ ಸಮನ್ಸ್ ನೀಡಲಾಗಿದೆ.
ನ್ಯಾಯಾಲಯದ ನಿರೀಕ್ಷಣಾ ಜಾಮೀನು ಟೈಟ್ಲರ್ರನ್ನು ಬಂಧಿಸಲು ಸಾಧ್ಯವಿಲ್ಲ ಎಂದು ಖಚಿತಪಡಿಸುತ್ತದೆ. 1 ಲಕ್ಷ ಜಾಮೀನು ಬಾಂಡ್ ಮೇಲೆ ಜಾಮೀನು ನೀಡಲಾಗಿದೆ.
ಮೇ 20 ರಂದು ಸಲ್ಲಿಸಲಾದ ಸಿಬಿಐ ಚಾರ್ಜ್ಶೀಟ್ನಲ್ಲಿ, ಟೈಟ್ಲರ್ ಅವರು 1984 ರ ನವೆಂಬರ್ 1 ರಂದು ಪುಲ್ ಬಂಗಾಶ್ ಗುರುದ್ವಾರ, ಆಜಾದ್ ಮಾರ್ಕೆಟ್ನಲ್ಲಿ ಗುಂಪನ್ನು ಪ್ರಚೋದಿಸಿದ್ದರು ಇದರ ಪರಿಣಾಮವಾಗಿ ಗುರುದ್ವಾರವನ್ನು ಸುಟ್ಟುಹಾಕಲಾಗಿತ್ತು, ಘಟನೆಯಲ್ಲಿ ಠಾಕೂರ್ ಸಿಂಗ್, ಬಾದಲ್ ಸಿಂಗ್ ಮತ್ತು ಗುರು ಚರಣ್ ಸಿಂಗ್ ಎಂಬ ಮೂರು ಸಿಖ್ಖರ ಹತ್ಯೆಯಾಗಿತ್ತು ಎಂಬ ಆರೋಪವಿದೆ.