
ಕಾಂಗ್ರೆಸ್ ಅಧ್ಯಕ್ಷ ಚುನಾವಣೆ : ಕೆ.ಎನ್.ತ್ರಿಪಾಠಿ ನಾಮಪತ್ರ ತಿರಸ್ಕಾರ
ಯಾರೇ ಅಧ್ಯಕ್ಷರಾದರೂ ಗಾಂಧಿ ಕುಟುಂಬಕ್ಕೆ "ವಿದಾಯ" ಹೇಳುವಷ್ಟು ಮೂರ್ಖರಲ್ಲ : ತರೂರ್
Team Udayavani, Oct 1, 2022, 4:11 PM IST

ನವದೆಹಲಿ: ಕಾಂಗ್ರೆಸ್ ಅಧ್ಯಕ್ಷ ಹುದ್ದೆಗೆ ಒಟ್ಟು 20 ಫಾರ್ಮ್ ಗಳನ್ನು ಸಲ್ಲಿಸಲಾಗಿದ್ದು, ಅವುಗಳಲ್ಲಿ 4 ಫಾರ್ಮ್ ಗಳನ್ನು ಸಹಿ ಸಮಸ್ಯೆಯಿಂದಾಗಿ ಪರಿಶೀಲನಾ ಸಮಿತಿ ತಿರಸ್ಕರಿಸಿದೆ ಎಂದು ಕಾಂಗ್ರೆಸ್ ಕೇಂದ್ರ ಚುನಾವಣಾ ಪ್ರಾಧಿಕಾರದ ಅಧ್ಯಕ್ಷ ಮಧುಸೂದನ್ ಮಿಸ್ತ್ರಿ ಶನಿವಾರ ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ : ಯುಪಿಯಲ್ಲಿ ಹಿಜಾಬ್ ವಿಚಾರಕ್ಕೆ ದೌರ್ಜನ್ಯ: ಪ್ರಾಂಶುಪಾಲೆಯ ಆರೋಪ; ವಿಡಿಯೋ ವೈರಲ್
ನಾಮಪತ್ರ ಹಿಂಪಡೆಯಲು ಅಕ್ಟೋಬರ್ 8 ರವರೆಗೆ ಸಮಯವಿದ್ದು, ಅದರ ನಂತರ ಚಿತ್ರವು ಸ್ಪಷ್ಟವಾಗುತ್ತದೆ. ಯಾರೂ ಹಿಂಪಡೆಯದಿದ್ದರೆ ಮತದಾನ ಪ್ರಕ್ರಿಯೆ ನಡೆಯಲಿದೆ ಎಂದು ಮಿಸ್ತ್ರಿ ಹೇಳಿದ್ದಾರೆ.
ಕೆ.ಎನ್.ತ್ರಿಪಾಠಿ ಅವರ ಫಾರ್ಮ್ ನಿಗದಿಪಡಿಸಿದ ಮಾನದಂಡಗಳನ್ನು ಪೂರೈಸದ ಕಾರಣ ತಿರಸ್ಕರಿಸಲಾಗಿದೆ, ಸಹಿ ಸಂಬಂಧಿತ ಸಮಸ್ಯೆಗಳಿದ್ದವು ಎಂದು ಮಿಸ್ತ್ರಿ ಸ್ಪಷ್ಟಪಡಿಸಿದರು.
ಮಲ್ಲಿಕಾರ್ಜುನ ಖರ್ಗೆ ಮತ್ತು ಶಶಿ ತರೂರ್ ಅಧ್ಯಕ್ಷ ಸ್ಥಾನಕ್ಕೆ ಇಬ್ಬರು ಪ್ರಬಲ ಆಕಾಂಕ್ಷಿಗಳಾಗಿದ್ದಾರೆ.
ಮೂರ್ಖರಲ್ಲ : ಶಶಿ ತರೂರ್
ಪಕ್ಷದ ಅಧ್ಯಕ್ಷರ ಆಯ್ಕೆಯ ನಂತರ ಗಾಂಧಿ ಕುಟುಂಬದ ಪಾತ್ರದ ಬಗ್ಗೆ ಕೇಳಿದಾಗ, ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ಶಶಿ ತರೂರ್ ಪ್ರತಿಕ್ರಿಯಿಸಿ , “ಗಾಂಧಿ ಕುಟುಂಬ ಮತ್ತು ಕಾಂಗ್ರೆಸ್ನ ಡಿಎನ್ಎ ಒಂದೇ . ಯಾರೇ ಅಧ್ಯಕ್ಷರಾದರೂ ಗಾಂಧಿ ಕುಟುಂಬಕ್ಕೆ “ವಿದಾಯ” ಹೇಳುವಷ್ಟು ಮೂರ್ಖರಲ್ಲ. ಅವರು ನಮಗೆ ದೊಡ್ಡ ಆಸ್ತಿ” ಎಂದು ಪ್ರತಿಕ್ರಿಯಿಸಿದ್ದಾರೆ.
”ಇದು ಕದನವಲ್ಲ.ಪಕ್ಷದ ಕಾರ್ಯಕರ್ತರು ಆಯ್ಕೆ ಮಾಡಲಿ ಎಂಬುದು ನಮ್ಮ ಸಂದೇಶ. ಪಕ್ಷದ ಕೆಲಸದಿಂದ ನಿಮಗೆ ತೃಪ್ತಿ ಇದ್ದರೆ ಖರ್ಗೆ ಸಾಹೇಬರಿಗೆ ಮತ ನೀಡಿ ಎಂದು ನಾನು ಹೇಳುತ್ತಿದ್ದೇನೆ. ನೀವು ಬದಲಾವಣೆಯನ್ನು ಬಯಸಿದರೆ, ನಾನು ಅಲ್ಲಿದ್ದೇನೆ. ಆದರೆ ಸೈದ್ಧಾಂತಿಕ ಸಮಸ್ಯೆ ಇಲ್ಲ” ಎಂದು ತರೂರ್ ಹೇಳಿದರು.
”ನಾವು ತೋರುತ್ತಿರುವ ಆಂತರಿಕ ಪ್ರಜಾಪ್ರಭುತ್ವ ಬೇರೆ ಯಾವ ಪಕ್ಷದಲ್ಲೂ ಇಲ್ಲ. ಚುನಾವಣೆ ಘೋಷಣೆಯಾದಾಗ ನನಗೆ ಸ್ಪರ್ಧಿಸುವ ಇರಾದೆ ಇತ್ತು. ನಾನು ಒಂದು ಲೇಖನವನ್ನು ಬರೆದಿದ್ದೇನೆ, ಚುನಾವಣೆಯು ಪಕ್ಷಕ್ಕೆ ಒಳ್ಳೆಯದು ಎಂದು ಹೇಳುತ್ತದೆ ಮತ್ತು ಅದರ ಕಾರಣಗಳನ್ನು ಉಲ್ಲೇಖಿಸಿದ್ದೆ” ಎಂದು ಸಂಸದ ತರೂರ್ ಹೇಳಿದರು.
” ಹಲವಾರು ಜನರು, ಸಾಮಾನ್ಯ ಕಾರ್ಯಕರ್ತರು ನನಗೆ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಹೇಳಿದರು. ನಾನು ಯೋಚಿಸಲು ಮತ್ತು ಜನರೊಂದಿಗೆ ಮಾತನಾಡಲು ಪ್ರಾರಂಭಿಸಿದೆ . ನಾನು ಪಕ್ಷವನ್ನು ಬಲಪಡಿಸಲು ಬಯಸುತ್ತೇನೆ, ಪಕ್ಷದೊಳಗಿನ ಬದಲಾವಣೆಗಳ ಧ್ವನಿಯಾಗುತ್ತೇನೆ ಮತ್ತು ಅದರ ವಿಭಿನ್ನ ಮುಖವನ್ನು ಜನರಿಗೆ ತೋರಿಸುತ್ತೇನೆ” ಎಂದರು.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಾಜಿ ಕಾನೂನು ಸಚಿವ, ಖ್ಯಾತ ವಕೀಲ ಶಾಂತಿ ಭೂಷಣ್ ಇನ್ನಿಲ್ಲ

ನೊಬೆಲ್ ಪ್ರಶಸ್ತಿ ಪುರಸ್ಕೃತ ಅಮರ್ತ್ಯ ಸೇನ್ಗೆ ದಾಖಲೆ ಹಸ್ತಾಂತರಿಸಿದ ಮಮತಾ ಬ್ಯಾನರ್ಜಿ

ಪಿಎಂ ಕೇರ್ಸ್ ಸರ್ಕಾರದ್ದಲ್ಲ, ಸ್ವತಂತ್ರ ದತ್ತಿ ಸಂಸ್ಥೆ!

ಅಪಪ್ರಚಾರಕ್ಕಾಗಿ ಬಿಬಿಸಿಗೆ ಚೀನಾದಿಂದ ಹಣಕಾಸು ನೆರವು? ಬಿಜೆಪಿ ಸಂಸದ ಮಹೇಶ್ ಜೇಠ್ಮಲಾನಿ

ವಿಮಾನದಲ್ಲಿ ಮಹಿಳೆಯ ಮೇಲೆ ಮೂತ್ರ ವಿಸರ್ಜನೆ: ಆರೋಪಿ ಶಂಕರ್ ಮಿಶ್ರಾಗೆ ಜಾಮೀನು
MUST WATCH

ಕಾಫಿನಾಡಲ್ಲಿ ಮುಂದುವರಿದ ಮತದಾನ ಬಹಿಷ್ಕಾರದ ಕೂಗು

ಅನುದಾನ ನೀಡಿ ವರ್ಷವಾದರೂ ಆರಂಭವಾಗದ ಕಾಮಗಾರಿ ; ಗ್ರಾಮಸ್ಥರಿಂದ ಚುನಾವಣಾ ಬಹಿಷ್ಕಾರದ ಎಚ್ಚರಿಕೆ

ಮರಳಿನಲ್ಲಿ ಅರಳಿತು ತುಳುನಾಡ ನಾಗಾರಾಧನೆ | Malpe Beach Uthsava 2023 | Udupi – Udayavani

Beach Utsavaದಲ್ಲಿ ತರ ತರಹದ ಸ್ಪರ್ಧೆ, ಚಟುವಟಿಕೆಗಳು !ರಘುಪತಿ ಭಟ್ಟರು ಹೇಳಿದ್ದೇನು ?
