ಭದ್ರತಾ ಸಿಬ್ಬಂದಿಯಾಗಿ ಪ್ರಯಾಣಿಕರಿಂದ ಚಿನ್ನ ಸುಲಿಗೆ; ಇಬ್ಬರು ಹೆಡ್ ಕಾನ್ಸ್ ಟೇಬಲ್ ಗಳು ಅರೆಸ್ಟ್
Team Udayavani, Dec 26, 2022, 10:31 AM IST
ನವದೆಹಲಿ: ವಿದೇಶದಿಂದ ಭಾರತಕ್ಕೆ ಬರುತ್ತಿದ್ದ ಪ್ರಯಾಣಿಕರಿಗೆ ಬೆದರಿಕೆ ಹಾಕಿ ಅವರಿಂದ ಸುಲಿಗೆ ಮಾಡುತ್ತಿದ್ದ ಇಬ್ಬರು ಹೆಡ್ ಕಾನ್ಸ್ ಟೇಬಲ್ ಗಳು ಅಮಾನತುಗೊಂಡು ಪೊಲೀಸರ ಅತಿಥಿಯಾಗಿದ್ದಾರೆ.
ಇಂದಿರಾ ಗಾಂಧಿ ಏರ್ಪೋರ್ಟ್ ಟರ್ಮಿನಲ್ 3ರಲ್ಲಿ ಭದ್ರತಾ ಸಿಬ್ಬಂದಿಯಾಗಿ ನಿಯೋಜನೆಗೊಂಡಿದ್ದ ರಾಬಿನ್ ಸಿಂಗ್ ಮತ್ತು ಗೌರವ್ ಕುಮಾರ್ ಬಂಧಿತ ಹೆಡ್ ಕಾನ್ಸ್ ಟೇಬಲ್ ಗಳು.
ಘಟನೆ ಹಿನ್ನೆಲೆ: ಏರ್ ಪೋರ್ಟ್ ನಲ್ಲಿ ಭದ್ರತಾ ಸಿಬ್ಬಂದಿಗಳಾಗಿ ನಿಯೋಜನೆಗೊಂಡಿದ್ದ ರಾಬಿನ್ ಸಿಂಗ್ ಮತ್ತು ಗೌರವ್ ಕುಮಾರ್ ದುಬೈನಿಂದ ಚಿನ್ನವನ್ನು ತರುತ್ತಿದ್ದ ವ್ಯಕ್ತಿಗಳನ್ನು ಗುರಿಯಾಗಿಸಿ ಅವರನ್ನು ಬೆದರಿಸಿ, ಅವರಿಂದ ಸುಲಿಗೆ ಮಾಡುತ್ತಿದ್ದರು. ಈ ವಿಷಯವನ್ನು ಯಾರಿಗೂ ಹೇಳದಂತೆ ಹೇಳಿ ಅವರನ್ನು ಕಳುಹಿಸಿ ಕೊಡುತ್ತಿದ್ದರು.
ಇದನ್ನೂ ಓದಿ: ಮಹಿಳೆಯರಿಗೆ ವಿಶ್ವವಿದ್ಯಾಲಯ ಪ್ರವೇಶ ನಿಷೇಧ; ತಾಲಿಬಾನ್ ಕ್ರಮ ಖಂಡಿಸಿ ತರಗತಿ ಬಹಿಷ್ಕಾರ ಹಾಕಿದ ಪುರುಷ ವಿದ್ಯಾರ್ಥಿಗಳು
ಈ ಬಗ್ಗೆ ಸಲಾವುದ್ದೀನ್ ಕಥಾತ್ ಎಂಬ ವ್ಯಕ್ತಿ ಪೊಲೀಸರಿಗೆ ದೂರು ಕೊಟ್ಟಿದ್ದು, ನಾನು ಮಸ್ಕತ್ ನಿಂದ ಸ್ನೇಹಿತರು ಕೊಟ್ಟ ಚಿನ್ನವನ್ನು ದಿಲ್ಲಿಗೆ ತರುತ್ತಿದ್ದೆ. ಈ ವೇಳೆ ಇಬ್ಬರು ಭದ್ರತಾ ಸಿಬ್ಬಂದಿಗಳು ನನ್ನನ್ನು ವಿಚಾರಿಸಿ ಜೀಪ್ ನಲ್ಲಿ ಕರೆದುಕೊಂಡು ಕಾಡಿನ ಪ್ರದೇಶಕ್ಕೆ ಹೋಗಿದ್ದಾರೆ. ಅಲ್ಲಿ ನನ್ನನ್ನು ಥಳಿಸಿ ನನ್ನ ಬಳಿಯಿದ್ದ 50 ಲಕ್ಷ. ರೂ ಮೌಲ್ಯದ ಚಿನ್ನವನ್ನು ಪಡೆದು, ನನ್ನ ಸಿಮ್ ಕಾರ್ಡ್ ಒಡೆದು ಹಾಕಿ, ಮೊಬೈಲ್ ರೀ ಸೆಟ್ ಮೂಡ್ ಗೆ ಹಾಕಿ, ಹಣ ಕೊಟ್ಟು ಕ್ಯಾಬ್ ಬುಕ್ ಮಾಡಿ ಮನೆಗೆ ಕಳುಹಿಸಿದ್ದಾರೆ ಎಂದು ದೂರಿನಲ್ಲಿ ಹೇಳಿದ್ದಾರೆ.
ಅದೇ ದಿನ ದುಬೈನಿಂದ ಬಂದ ಶೇಖ್ ಕಾದರ್ ಬಾಶಿ ಎಂಬಾತನಿಂದ 400 ಗ್ರಾಂ. ಚಿನ್ನವನ್ನು ಬೆದರಿಕೆ ಹಾಕಿ ಸುಲಿಗೆ ಮಾಡಿದ್ದಾರೆ.ಈ ಎರಡೂ ಘಟನೆಯ ಪ್ರಕರಣ ದಾಖಲಿಸಿದ ಪೊಲೀಸರು ಭಾನುವಾರ ಹೆಡ್ ಕಾನ್ಸ್ ಟೇಬಲ್ ಗಳನ್ನು ಬಂಧಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..
IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್
Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ
ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
BJP 2025ರಲ್ಲಿ ಹಿಂದುಳಿದ ಸಮುದಾಯಗಳ ಮೀಸಲಾತಿ ತೆಗೆದು ಹಾಕಲಿದೆ: ರೇವಂತ್ ರೆಡ್ಡಿ
MUST WATCH
ಹೊಸ ಸೇರ್ಪಡೆ
Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!
Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ
Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..
T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?
ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ