

Team Udayavani, Jun 4, 2024, 6:40 AM IST
ಮುಂಬಯಿ: ಬಹುಕೋಟಿ ಹಣ ವಚನೆ ಆರೋಪ ಎದುರಿಸುತ್ತಿರುವ ಉದ್ಯಮಿಗಳಾದ ನೀರವ್ ಮೋದಿ, ಮೆಹುಲ್ ಚೋಕ್ಸಿ, ವಿಜಯ ಮಲ್ಯ ಅವರನ್ನು ತನಿಖಾ ಸಂಸ್ಥೆಗಳು ಸರಿಯಾದ ಸಮಯಕ್ಕೆ ಬಂಧಿಸದ ಕಾರಣ, ವಿದೇಶಕ್ಕೆ ಪರಾರಿಯಾದರು ಎಂದು ಮುಂಬಯಿಯ ವಿಶೇಷ ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಮೇ 29ರಂದು ಅಕ್ರಮ ಹಣಕಾಸು ವರ್ಗಾವಣೆ ಪ್ರಕರಣದ ಆರೋಪಿ ವ್ಯೊಮೇಶ್ ಶಾ ಎಂಬವರು ವಿದೇಶ ಪ್ರಯಾಣಕ್ಕಾಗಿ ತಮ್ಮ ಜಾಮೀನಿನ ಷರತ್ತಿನಲ್ಲಿ ಬದಲಾವಣೆ ಮಾಡುವಂತೆ ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ವೇಳೆ ನ್ಯಾ| ಎಂ.ಜಿ. ದೇಶಪಾಂಡೆ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಶಾ ಅವರ ಕೋರಿಕೆಗೆ ಒಪ್ಪಿದರೆ, ಅವರೂ ನೀರವ್, ಚೋಕ್ಸಿ, ಮಲ್ಯರಂತೆ ಪರಾರಿಯಾಗ ಬಹುದು ಎಂದು ಇ.ಡಿ. ವಾದಿಸಿತ್ತು.
Ad
You seem to have an Ad Blocker on.
To continue reading, please turn it off or whitelist Udayavani.