ಕರ್ನಾಟಕ ಸಹಿತ 8 ರಾಜ್ಯ ಸಂಕಷ್ಟ
Team Udayavani, Aug 4, 2021, 7:10 AM IST
ಹೊಸದಿಲ್ಲಿ: ಕೊರೊನಾ ಮೂರನೇ ಅಲೆ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಕರ್ನಾಟಕ ಸಹಿತ ದೇಶದ ಎಂಟು ರಾಜ್ಯಗಳಿಗೆ ಬಿಗಿ ನಿಯಮ ರೂಪಿಸಿಕೊಳ್ಳುವಂತೆ ಎಚ್ಚರಿಕೆ ನೀಡಿದೆ.
ಈ ಎಂಟು ರಾಜ್ಯಗಳಲ್ಲಿ “ಆರ್’ ಫ್ಯಾಕ್ಟರ್ ಹೆಚ್ಚಿದೆ ಎಂದು ಕೇಂದ್ರ ಹೇಳಿದೆ. ಸೋಂಕು ಒಬ್ಬರಿಂದ ಎಷ್ಟು ಮಂದಿಗೆ ಹರಡುತ್ತದೆ ಎಂಬುದನ್ನು “ಆರ್ ಫ್ಯಾಕ್ಟರ್’ ವಿವರಿಸುತ್ತದೆ. ಆರ್ ಫ್ಯಾಕ್ಟರ್ ಹೆಚ್ಚಿದೆ ಎಂದರೆ ಒಬ್ಬರಿಂದ ಹಲವು ಮಂದಿಗೆ ಸೋಂಕು ಪ್ರಸಾರವಾಗುತ್ತಿದೆ ಎಂದರ್ಥ. ಕರ್ನಾಟಕ, ಕೇರಳ, ತ.ನಾಡು, ಹಿಮಾಚಲ ಪ್ರದೇಶ, ಜಮ್ಮು ಮತ್ತು ಕಾಶ್ಮೀರ, ಲಕ್ಷದ್ವೀಪ, ಮಿಜೋರಾಂ ಮತ್ತು ಪುದುಚೇರಿಗಳಲ್ಲಿ ಆರ್ ಫ್ಯಾಕ್ಟರ್ 1:2 ಇದೆ. ಅಂದರೆ ಒಬ್ಬರಿಗೆ ಸೋಂಕು ತಗಲಿದರೆ ಅವರಿಂದ ಇಬ್ಬರಿಗೆ ಸೋಂಕು ಹರಡುತ್ತಿದೆ.
ಆರ್ ಫ್ಯಾಕ್ಟರ್ ಹೆಚ್ಚಿರುವಲ್ಲಿ ನಿಗಾ ವಹಿಸಬೇಕು. ಸೋಂಕು ಹರಡದಂತೆ ಕ್ರಮ ತೆಗೆದುಕೊಳ್ಳಬೇಕು ಎಂದು ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ. ಹಾಗೆಯೇ 12 ರಾಜ್ಯಗಳ 44 ಜಿಲ್ಲೆ ಗಳಲ್ಲಿ ಪಾಸಿಟಿವಿಟಿ ದರ ಶೇ. 10ಕ್ಕಿಂತ ಹೆಚ್ಚಿದೆ ಎಂದು ಆರೋಗ್ಯ ಇಲಾಖೆ ಹೇಳಿದೆ.
ದೇಶದ 18 ಜಿಲ್ಲೆಗಳಲ್ಲಿ ಕೊರೊನಾ ಏರಿಕೆಯ ಹಾದಿ ಕಾಣಿಸುತ್ತಿದೆ. ಇದರಲ್ಲಿ 10 ಜಿಲ್ಲೆಗಳು ಕೇರಳದಲ್ಲಿವೆ. ದೇಶದ ಶೇ. 50ರಷ್ಟು ಪ್ರಕರಣಗಳು ಕೇರಳದಿಂದಲೇ ವರದಿಯಾಗುತ್ತಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mukhtar Ansari ಸಾವಿನ ಪ್ರಕರಣ: ನ್ಯಾಯಾಂಗ ತನಿಖೆಗೆ ಆದೇಶಿಸಿದ ಕೋರ್ಟ್
Congress ಬಳಿಕ ಸಿಪಿಐಗೂ 11 ಕೋಟಿ ರೂ.ಬಾಕಿಗಾಗಿ ಐಟಿ ನೋಟಿಸ್
ಬಂಧನದಲ್ಲಿರುವ ಪತಿಯ ಬೆಂಬಲಕ್ಕಾಗಿ ವಾಟ್ಸ್ಆ್ಯಪ್ ಅಭಿಯಾನ ಆರಂಭಿಸಿದ ಕೇಜ್ರಿವಾಲ್ ಪತ್ನಿ
ಕೋರ್ಟ್ ಮೇಲೆ ಪಟ್ಟಭದ್ರರ ಒತ್ತಡ: ವಕೀಲರ ಪತ್ರ
Income Tax; ಕಾಂಗ್ರೆಸ್ ಗೆ ಐಟಿ ಶಾಕ್; 1700 ಕೋಟಿ ರೂ ನೋಟಿಸ್ ನೀಡಿದ ಆದಾಯ ತೆರಿಗೆ ಇಲಾಖೆ
MUST WATCH
ಹೊಸ ಸೇರ್ಪಡೆ
Kannada Cinema; ಸ್ನೇಹಿತರ ಸುತ್ತ ‘ಪಾರ್ಟ್ನರ್’: ಟ್ರೇಲರ್, ಆಡಿಯೋದಲ್ಲಿ ಹೊಸಬರ ಚಿತ್ರ
Mukhtar Ansari ಸಾವಿನ ಪ್ರಕರಣ: ನ್ಯಾಯಾಂಗ ತನಿಖೆಗೆ ಆದೇಶಿಸಿದ ಕೋರ್ಟ್
ವಿಕಸಿತ ಭಾರತದಂತ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಎಷ್ಟು ವರ್ಷ ಆಳ್ವಿಕೆ ಮಾಡಿದರೂ ಸಾಧ್ಯವಾಗದು
Congress ಬಳಿಕ ಸಿಪಿಐಗೂ 11 ಕೋಟಿ ರೂ.ಬಾಕಿಗಾಗಿ ಐಟಿ ನೋಟಿಸ್
Belagavi; ಬಸವಜಯ ಮೃತ್ಯುಂಜಯ ಸ್ವಾಮೀಜಿ ಭೇಟಿಯಾದ ಜಗದೀಶ್ ಶೆಟ್ಟರ್