ಕೋವಿಡ್ ಲಾಕ್ಡೌನ್ಗೆ 2 ವರ್ಷ ಪೂರ್ತಿ
Team Udayavani, Mar 23, 2022, 8:20 AM IST
ಮಾ. 24ಕ್ಕೆ ಸರಿಯಾಗಿ ಎರಡು ವರ್ಷಗಳ ಹಿಂದೆ, ಪ್ರಧಾನಿ ನರೇಂದ್ರ ಮೋದಿಯವರು ಟೆಲಿವಿಷನ್ ಮೂಲಕ ದೇಶದ ಜನರನ್ನುದ್ದೇಶಿಸಿ ಮಾತನಾಡಿ ಕೊರೊನಾ ಹರಡುವಿಕೆಯನ್ನು ತಡೆಗಟ್ಟಲು ಕೊರೊನಾ ಲಾಕ್ಡೌನ್ ಘೋಷಿಸಿದರು. ಈ ನಿರ್ಧಾರಕ್ಕೆ ಈಗ 2 ವರ್ಷ ಸಂದಿದೆ. ಆ ಹಿನ್ನೆಲೆಯಲ್ಲಿ ಅದರ ಒಂದು ಹಿನ್ನೋಟ ಇಲ್ಲಿದೆ.
ಭಾರತದಲ್ಲಿ 1,581 ಹೊಸ ಪ್ರಕರಣ
ದೇಶದಲ್ಲಿ ಸೋಮವಾರ ಬೆಳಗ್ಗೆಯಿಂದ ಮಂಗಳವಾರ ಬೆಳಗಿನವರೆಗಿನ 24 ಗಂಟೆಗಳಲ್ಲಿ 1,581 ಕೊರೊನಾ ಹೊಸ ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟಾರೆ ಕೊರೊನಾ ಸೋಂಕಿತರ ಸಂಖ್ಯೆ 4,30,10,971 ಆಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ. ಇದೇ ಅವಧಿಯಲ್ಲಿ 33 ಜನರು ಕೊರೊನಾದಿಂದಾಗಿ ಸಾವಿಗೀಡಾಗಿದ್ದು, ಈವರೆಗೆ ಸಾವಿಗೀಡಾದವರ ಸಂಖ್ಯೆ 5,16,543 ಕ್ಕೇರಿದೆ. ಇನ್ನು, ಸಕ್ರಿಯ ಪ್ರಕರಣಗಳ ಸಂಖ್ಯೆ 23,913ರಷ್ಟಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಪ್ರಮುಖ ಸ್ಥಿತ್ಯಂತರಗಳೇನು?
1. ಬೇರೆ ರಾಜ್ಯಗಳಿಗೆ ಕೂಲಿಗಾಗಿ ವಲಸೆ ಹೋದ ಹಲ ವಾರು ಮಂದಿಯ ಮೇಲೆ ದುಷ್ಪರಿಣಾಮ ಬೀರಿತು.
2. ದೇಶದ ನಾನಾ ರಾಜ್ಯಗಳಲ್ಲಿನ ವಿದ್ಯುತ್ ಬೇಡಿಕೆಯ ಪ್ರಮಾಣ ಗಣನೀಯವಾಗಿ ಕುಸಿಯಿತು.
3. ಲಕ್ಷಾಂತರ ಜನರು ನಿರುದ್ಯೋಗಿಗಳಾದರು.
4. ಜನತಾ ಕರ್ಫ್ಯೂ ಆರಂಭದಲ್ಲಿ ನಿಷೇಧಕ್ಕೀಡಾಗಿದ್ದ ಮದ್ಯ ಮಾರಾಟಕ್ಕೆ ಮೇ 4ರಿಂದ ಅವಕಾಶ ನೀಡಲಾಯಿತು.
5. ಹಸಿವು, ಆತ್ಮಹತ್ಯೆ, ಬಳಲಿಕೆ, ರಸ್ತೆ ಹಾಗೂ ರೈಲು ಅಪಘಾತಗಳು ಇತ್ಯಾದಿಗಳಿಂದಾಗಿ ಮೇ 10ರ ಹೊತ್ತಿಗೆ ದೇಶಾದ್ಯಂತ 350 ಸಾವು ಸಂಭವಿಸಿದವು.
6. ದೇಶದ ಆರ್ಥಿಕತೆ ಕುಸಿತ. 2018ರ ಜನವರಿಯಲ್ಲಿ ಶೇ. 8.2ರಷ್ಟಿದ್ದ ಒಟ್ಟು ದೇಶೀಯ ಉತ್ಪನ್ನದ (ಜಿಡಿಪಿ) ಪ್ರಮಾಣ ಶೇ. 3.1ಕ್ಕೆ ಇಳಿಯಿತು.
ಆದ ಪ್ರಮುಖ ಬದಲಾವಣೆಗಳು
1. ಸಾಮಾಜಿಕ ಅಂತರ, ಮಾಸ್ಕ್ ಧಾರಣೆ ಬಗ್ಗೆ ಜಾಗೃತಿ.
2. ಓವರ್ ದಿ ಟಾಪ್ (ಒಟಿಟಿ) ಹೆಚ್ಚು ಜನಪ್ರಿಯ.
3. “ವರ್ಕ್ ಫ್ರಂ ಹೋಂ’ಗೆ ಹೆಚ್ಚಿನ ಕಂಪೆನಿಗಳ ಆಸಕ್ತಿ.
4. ಗೂಗಲ್ ಮೀಟ್ ರೀತಿಯ ಹಲವು ಆ್ಯಪ್ ಲಗ್ಗೆ.
5. ಮೋದಿ ಸರಕಾರದ ಕ್ಯಾಶ್ಲೆಸ್ ಇಂಡಿಯಾಕ್ಕೆ ಹೊಸ ಅರ್ಥ. ಡಿಜಿಟಲ್ ಪಾವತಿ ಉತ್ತುಂಗಕ್ಕೆ.
ಮತ್ತೊಂದು ನಗರ ಲಾಕ್ಡೌನ್
ಚೀನದ ಈಶಾನ್ಯ ವಲಯದ ಜಿಲಿನ್ ಪ್ರಾಂತ್ಯದಲ್ಲಿರುವ ಶೆನ್ಯಂಗ್ ನಗರದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ 4 ಸಾವಿರ ದಾಟಿದ (4,770) ಹಿನ್ನೆಲೆಯಲ್ಲಿ ಆ ನಗರದಲ್ಲಿ ಚೀನ ಸರಕಾರ ಲಾಕ್ಡೌನ್ ಜಾರಿಗೊಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ex-IPS officer ಸಂಜೀವ್ ಭಟ್ಗೆ 1996 ರ ಡ್ರಗ್ಸ್ ಕೇಸ್ ನಲ್ಲಿ 20 ವರ್ಷ ಜೈಲು ಶಿಕ್ಷೆ
Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ
Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ
Mangaluru;ಮನೆಯಲ್ಲೇ ಅಕ್ರಮ ಕಸಾಯಿಖಾನೆ:ಗೋಮಾಂಸ ಸಹಿತ ಮೂವರ ಬಂಧನ
Kolkata ವಿಮಾನ ನಿಲ್ದಾಣದಲ್ಲಿ ಸ್ವಯಂ ಗುಂಡಿಟ್ಟುಕೊಂಡು ಯೋಧ ಆತ್ಮಹತ್ಯೆ
MUST WATCH
ಹೊಸ ಸೇರ್ಪಡೆ
Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್ಗಳು: ಪ್ರವಾಸಿಗರಿಗೆ ಭಯ
IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್ಗಳ ಜಯ
Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು
Politics: ಚಿತ್ರದುರ್ಗ ರಾಜಕೀಯ ನಿರಾಶ್ರಿತರ ಕೇಂದ್ರವೇ?: ರಘುಚಂದನ್
PSI re-examination: ಪಿಎಸ್ಐ ಮರು ಪರೀಕ್ಷೆ, ಅಂತಿಮ ಅಂಕಪಟ್ಟಿ ಬಿಡುಗಡೆ