ವಿಮಾನದಿಂದ ಇಳಿಯುವವರು ಕೊರೊನಾ ವರದಿ ತೋರಿಸಬೇಕಿಲ್ಲ
Team Udayavani, Nov 27, 2021, 10:30 PM IST
ಮುಂಬಯಿ: ಮಹಾರಾಷ್ಟ್ರದ ಪುಣೆ ವಿಮಾನ ನಿಲ್ದಾಣಕ್ಕೆ ವಿಮಾಣದಲ್ಲಿ ಬಂದಿಳಿಯುವ ಪ್ರಯಾಣಿಕರಿಗೆ ಕೊರೊನಾ ಪರೀಕ್ಷಾ ವರದಿ ಕೇಳದಿರಲು ಮಹಾ ಸರಕಾರ ನಿರ್ಧರಿಸಿದೆ.
ದೇಶದಲ್ಲಿ ವಿಮಾನದ ಟಿಕೆಟ್ ಖರೀದಿಸುವ ವೇಳೆ ಕೊರೊನಾ ಆರ್ಟಿಪಿಸಿಆರ್ ವರದಿ ಕೇಳಲಾಗುತ್ತಿದೆ. ಹಾಗೆಯೇ ಬೋರ್ಡಿಂಗ್ ಸಮಯದಲ್ಲೂ ಆರ್ಟಿಪಿಸಿಆರ್ ವರದಿ ಪರಿಶೀಲನೆ ಮಾಡಲಾಗುತ್ತಿದೆ. ಆ ಹಿನ್ನೆಲೆಯಲ್ಲಿ ವಿಮಾನದಿಂದ ಇಳಿಯುವ ಪ್ರಯಾಣಿಕರಿಗೆ ಕೊರೊನಾ ಪರೀಕ್ಷಾ ವರದಿ ಕೇಳದಿರಲು ನಿರ್ಧರಿಸಲಾಗಿದೆ.
ಇದರಿಂದಾಗಿ ದೇಶೀಯ ಪ್ರಯಾಣಿಕರ ಸಮಯ ವ್ಯರ್ಥವಾಗುವುದು ತಪ್ಪಲಿದೆ. ವಿದೇಶಗಳಿಂದ ಬರುವ ಪ್ರಯಾಣಿಕರಿಗೆ ಕೇಂದ್ರ ಸರಕಾರ ಹೊರಡಿಸಿರುವ ಎಲ್ಲ ಮಾರ್ಗಸೂಚಿಯನ್ನು ಅನುಸರಿಸಲಾಗುವುದು ಎಂದು ಉಪ ಮುಖ್ಯಮಂತ್ರಿ ಅಜಿತ್ ಪವಾರ್ ತಿಳಿಸಿದ್ದಾರೆ.