
ಸಗಣಿ ಚಿಪ್ನಿಂದ ತಗ್ಗುತ್ತದೆ ಮೊಬೈಲ್ ರೇಡಿಯೇಷನ್
Team Udayavani, Oct 14, 2020, 6:30 AM IST

ಹೊಸದಿಲ್ಲಿ: ಸಗಣಿಯಿಂದ ಸಿದ್ಧಪಡಿಸಿದ ಚಿಪ್ ಮೊಬೈಲ್ ರೇಡಿಯೇಷನ್ ತಡೆಯುತ್ತದೆ. ವೈಜ್ಞಾನಿಕವಾಗಿಯೂ ಇದು ಸಾಬೀತಾಗಿದೆ ಎಂದು ರಾಷ್ಟ್ರೀಯ ಗೋ ಆಯೋಗದ ಅಧ್ಯಕ್ಷ ವಲ್ಲಭಭಾಯ್ ಕಥಿರಿಯಾ ಹೇಳಿದ್ದಾರೆ. ಹೊಸದಿಲ್ಲಿಯಲ್ಲಿ ಮಾತನಾಡಿದ ಅವರು, ಸಗಣಿಗೆ ರೇಡಿಯೇಷನ್ ಅನ್ನು ತಡೆಯಲು ಮತ್ತು ಪ್ರಭಾವ ತಗ್ಗಿಸುವ ಸಾಮರ್ಥ್ಯವಿದೆ ಎಂದರು. ಜತೆಗೆ ಸುದ್ದಿಗೊಷ್ಠಿಯಲ್ಲಿ ನೂತನವಾಗಿ ತಯಾರಿಸ ಲಾದ ಚಿಪ್ ಅನ್ನು ಪ್ರದರ್ಶಿಸಿದರು. ಮೊಬೈಲ್ಗಳಲ್ಲಿ ಈ ಚಿಪ್ ಅಳವಡಿಸಿದರೆ, ರೇಡಿಯೇಷನ್ ಪ್ರಮಾಣ ತಗ್ಗಿಸುತ್ತದೆ ಮತ್ತು ಕಾಯಿಲೆಗಳಿಂದ ರಕ್ಷಣೆ ನೀಡುತ್ತದೆ ಎಂದು ಹೇಳಿದ್ದಾರೆ.
ಇತ್ತೀಚೆಗೆ ಬಾಲಿವುಡ್ ನಟ ಅಕ್ಷಯ ಕುಮಾರ್ ಆರೋಗ್ಯ ಕಾರಣಕ್ಕೆ ಗೋ ಮೂತ್ರ ಸೇವಿಸುವುದಾಗಿ ಹೇಳಿದ್ದರು. ಅದರಿಂದ ಅವರಿಗೆ ಧನಾತ್ಮಕ ಪರಿಣಾಮಗಳು ಉಂಟಾದ ಬಗ್ಗೆ ಮಾತುಕತೆ ನಡೆಸಲಾಗುತ್ತಿದೆ ಎಂದರು.
33 ಕೋಟಿ ದೀಪಗಳು: ಗೋ ಮೂತ್ರದಿಂದ ಸ್ಯಾನಿಟೈಸರ್ ಸಿದ್ಧಪಡಿಸುವಲ್ಲಿ ಯಶಸ್ವಿಯಾಗಿರುವ ಆಯೋಗ ಸಗಣಿಯಿಂದ ಸಿದ್ಧಪಡಿಸುವ 33 ಕೋಟಿ ದೀಪಗಳ ಬಳಕೆಗೆ ಪ್ರೋತ್ಸಾಹ ನೀಡಲು ಮುಂದಾಗಿದೆ. ಈ ಮೂಲಕ ದೀಪಾವಳಿ ಅವಧಿಯಲ್ಲಿ ಚೀನ ನಿರ್ಮಿತ ಹಣತೆ ಬಳಕೆ ತಗ್ಗಿಸಲು ಪ್ರಯತ್ನ ನಡೆಸುತ್ತಿದೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Odisha ಭೀಕರ ರೈಲು ಅವಘಡ; ಕನಿಷ್ಠ 50 ಮೃತ್ಯು, 350ಕ್ಕೂ ಹೆಚ್ಚು ಮಂದಿಗೆ ಗಾಯ

WFI ಬ್ರಿಜ್ ಭೂಷಣ್ ಬಂಧಿಸಲು ಗಡುವು ವಿಧಿಸಿದ ಖಾಪ್ ಮಹಾಪಂಚಾಯತ್

Manish Sisodia ರಿಗೆ ಮಧ್ಯಂತರ ಪರಿಹಾರ; ಪತ್ನಿ ಭೇಟಿಗೆ ಕೋರ್ಟ್ ಅನುಮತಿ

UP; ಅಯೋಧ್ಯೆಯಲ್ಲಿ ಬ್ರಿಜ್ ಭೂಷಣ್ ‘ಮಹಾ ರ್ಯಾಲಿ’ಗೆ ಅನುಮತಿ ನಿರಾಕಾರ

ಕಾಲೇಜು ವಿದ್ಯಾರ್ಥಿನಿಗೆ ಮಾದಕ ದ್ರವ್ಯ ನೀಡಿ ಅತ್ಯಾಚಾರ! ಕೇರಳದಲ್ಲಿ ನಡೆದ ಘಟನೆ
MUST WATCH

ಗ್ಯಾರಂಟಿ ಖಚಿತ, ಪ್ರಯಾಣ ಉಚಿತ, ಷರತ್ತು ನಿಯಮಿತ… | ಗ್ಯಾರಂಟಿ ಯೋಜನೆಗಳ ನಿಯಮಗಳು ಇಲ್ಲಿದೆ

Yellur: ಗೋಶಾಲೆ ನಿರ್ಮಾಣಕ್ಕೆ ಮೀಸಲಿಟ್ಟ ಜಾಗದಲ್ಲಿ ಅದಮಾರು ಶ್ರೀಗಳಿಂದ ಗೋಪೂಜೆ

ಕಪ್ಪು ಬಣ್ಣದ ತುಟಿ…ಕೆಂಪು ಬಣ್ಣವಾಗಿ ಕಾಣಲು ಇಲ್ಲಿದೆ ಸರಳ ಮನೆಮದ್ದು

ಜಾನಪದ ಕಲೆಯನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದ ಸೋಲಿಗರು
