ಆಸ್ಪತ್ರೆಯ ಐಸಿಯು ವಾರ್ಡ್ಗೆ ಬಂದು ಮೆಡಿಕಲ್ ತ್ಯಾಜ್ಯ ತಿಂದ ದನ.! ವಿಡಿಯೋ ವೈರಲ್
Team Udayavani, Nov 20, 2022, 11:59 AM IST
ಮಧ್ಯ ಪ್ರದೇಶ: ಸಾಮಾನ್ಯವಾಗಿ ಆಸ್ಪತ್ರೆಯ ಐಸಿಯು ವಾರ್ಡ್ ಗೆ ವೈದ್ಯರು, ನರ್ಸಗಳು ಬಿಟ್ಟರೆ ರೋಗಿಯ ಸಂಬಂಧಿಕರಿಗೂ ಒಳ ಹೋಗಲು ಅವಕಾಶ ಕೊಡುವುದು ಕಡಿಮೆ. ಆದರೆ ಇಲ್ಲೊಂದು ಆಸ್ಪತ್ರೆಗೆ, ಅದು ಕೂಡ ಐಸಿಯು ವಾರ್ಡ್ ಗೆ ವಿಶೇಷ ಅತಿಥಿ ಬಂದಿದೆ.!
ಮಧ್ಯ ಪ್ರದೇಶದ ರಾಜ್ಗಢ ಜಿಲ್ಲೆಯ ಆಸ್ಪತ್ರೆಯ ಐಸಿಯು ವಾರ್ಡ್ ಗೆ ದನವೊಂದು ನುಗ್ಗಿದ್ದು, ಹಾಯಾಗಿ ಅತ್ತಿತ್ತ ಓಡುತ್ತಾ, ಕಸದ ಬುಟ್ಟಿಯಲ್ಲಿರುವ ಮೆಡಿಕಲ್ ತ್ಯಾಜ್ಯವನ್ನು ತಿಂದಿದೆ. ಆಸ್ಪತ್ರೆಯಲ್ಲಿ ಭದ್ರತಾ ಸಿಬ್ಬಂದಿ ಇದ್ದರೂ ಇಡೀ ದಿನ ದನವನ್ನು ಆಸ್ಪತ್ರೆಯ ಹೊರ ಹಾಕಲು ಯಾರಿಂದಲೂ ಸಾಧ್ಯವಾಗಲಿಲ್ಲ. ರಸ್ತೆ ಬದಿಯೇ ಆಸ್ಪತ್ರೆ ಇರುವುದಿಂದ ಆಸ್ಪತ್ರೆಯಲ್ಲಿ ದನ ಹಿಡಿಯಲು ಇಬ್ಬರನ್ನು ಈ ಹಿಂದೆಯೇ ನೇಮಿಸಲಾಗಿದೆ. ಆದರೆ ಘಟನೆ ನಡೆದಾಗ ಅವರೂ ಕೂಡ ಅಲ್ಲಿ ಇರಲಿಲ್ಲ ಎಂದು ವರದಿ ತಿಳಿಸಿದೆ.
ದನ ಐಸಿಯು ವಾರ್ಡ್ ನ ಮುಂದೆ ಇರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಡಿಯೋ ವೈರಲ್ ಆದ ಬೆನ್ನಲ್ಲೇ ಭದ್ರತಾ ಸಿಬ್ಬಂದಿ ಹಾಗೂ ಇತರ ಎರಡು ಎರಡು ಸಿಬ್ಬಂದಿಗಳನ್ನು ಕೆಲಸದಿಂದ ಅಮಾನತು ಮಾಡಲಿದೆ.
ಜಿಲ್ಲಾ ಆಸ್ಪತ್ರೆಯ ಸಿವಿಲ್ ಸರ್ಜನ್ ಡಾ. ರಾಜೇಂದ್ರ ಕಟಾರಿಯಾ ಈ ಬಗ್ಗೆ ಮಾತಾನಾಡಿ, ಪರಿಸ್ಥಿತಿಯನ್ನು ಗಮನಿಸಿ ವಾರ್ಡ್ ಬಾಯ್ ಹಾಗೂ ಸೆಕ್ಯುರಿಟಿ ಗಾರ್ಡ್ ವಿರುದ್ಧ ಕ್ರಮ ಕೈಗೊಂಡಿದ್ದೇನೆ. ಈ ಘಟನೆ ನಮ್ಮ ಹಳೆಯ ಕೋವಿಡ್ ಐಸಿಯು ವಾರ್ಡ್ನಿಂದ ಆಗಿದೆ ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ
MUST WATCH
ಹೊಸ ಸೇರ್ಪಡೆ
2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್ಯಾಂಕ್ ಪಡೆದ ತೀರ್ಥಹಳ್ಳಿಯ ಸುಚಿಂತ್
Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ
Vijaypura:ರಾಹುಲ್ ಗಾಂಧಿ ನಿರ್ಗಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ
ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್.ವರಲಕ್ಷ್ಮೀ
CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ