ಜೋಶಿಮಠದ ಸುರಕ್ಷಿತ ವಲಯದ ಮನೆಗಳಲ್ಲೂ ಬಿರುಕು!
Team Udayavani, May 10, 2023, 7:40 AM IST
ಜೋಶಿಮಠ: ಉತ್ತರಾಖಂಡದ ಜೋಶಿಮಠದಲ್ಲಿ ಕೆಲವು ತಿಂಗಳ ಹಿಂದೆ ಭಾರೀ ಬಿರುಕುಗಳು ಕಾಣಿಸಿಕೊಂಡು, ಹಲವು ಮನೆಗಳು ಧ್ವಂಸಗೊಂಡಿದ್ದವು. ನೂರಾರು ಮಂದಿ ತಾಪತ್ರಯಕ್ಕೊಳಗಾಗಿದ್ದರು.
ಇದೀಗ ಸುರಕ್ಷಿತ ವಲಯ ಎಂದು ಕರೆಸಿಕೊಂಡಿದ್ದ ಜಾಗಗಳಲ್ಲೂ ಬಿರುಕುಗಳು ಕಂಡು ಬಂದಿರು ವುದರಿಂದ ನಿವಾಸಿಗಳು ಆತಂಕಕ್ಕೊಳ ಗಾಗಿದ್ದಾರೆ.ಸದ್ಯದಲ್ಲೇ ಮುಂಗಾರು ಪ್ರವೇಶವಾಗುವ ಕಾರಣ ಭಾರೀ ಮಳೆಯನ್ನು ನಿರೀಕ್ಷಿಸಲಾಗಿದೆ.
ಈ ಹಿಂದೆ ಮಳೆ ಬಿದ್ದಾಗಲೇ ಮನೆಗಳಲ್ಲಿ ದೊಡ್ಡದೊಡ್ಡ ಬಿರುಕುಗಳು ಕಾಣಿಸಿಕೊಂಡಿದ್ದವು. ಆದಿ ಶಂಕರಾಚಾರ್ಯರಿಂದ ಸ್ಥಾಪಿಸಲ್ಪಟ್ಟಿದ್ದ ಜ್ಯೋತಿರ್ಮಠದಲ್ಲೂ ಬಿರುಕುಗಳುಂಟಾಗಿದ್ದವು.
ವಿಚಿತ್ರವೆಂದರೆ ಹಳದಿ ವಲಯ (ಯೆಲ್ಲೋ ಜೋನ್) ಪರವಾಗಿಲ್ಲ, ಸುರಕ್ಷಿತ ಎನ್ನಲಾಗಿತ್ತು. ಆದರೆ ಈಗ ಇಲ್ಲಿನ ಮನೆಗಳಲ್ಲೂ ಸಣ್ಣಸಣ್ಣ ಬಿರುಕುಗಳು ಕಂಡುಬಂದಿವೆ. ಜೋಶಿಮಠದ ಗಾಂಧಿನಗರ ವ್ಯಾಪ್ತಿಯಲ್ಲಿ ಈ ಮನೆಗಳು ಬರುತ್ತವೆ. ಸದ್ಯ ಅಧಿಕಾರಿಗಳು ಈ ಪ್ರದೇಶವನ್ನು ನಿಗಾದಲ್ಲಿಟ್ಟಿದ್ದು ಸೂಕ್ತ ವ್ಯವಸ್ಥೆಗೆ ಮುಂದಾಗಿದ್ದಾರೆ. ಆದರೆ ಜನ ಮಾತ್ರ ತಮ್ಮ ಮನೆಗಳ ಕಥೆ ಏನಾಗುತ್ತದೋ, ಏನೋ ಆತಂಕದಲ್ಲಿ ದಿನ ದೂಡುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
UGC;ಉಪನ್ಯಾಸಕರ ಅರ್ಹತಾ ಪರೀಕ್ಷೆ ಜೂ.18ಕ್ಕೆ
ಬಂಗಾಲ ಶಿಕ್ಷಕರ ನೇಮಕ ಸಿಬಿಐ ತನಿಖೆಗೆ ಮಾತ್ರ ತಡೆ: ಸುಪ್ರೀಂ ಕೋರ್ಟ್
NEET; ಕೋಟಾದಲ್ಲಿ ಮತ್ತೊಬ್ಬ ಆಕಾಂಕ್ಷಿ ಆತ್ಮಹತ್ಯೆ: ಇದು 8ನೇ ಪ್ರಕರಣ
Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು
Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು