ದಿಲ್ಲಿ ಸಾಮೂಹಿಕ ಸಾವು; ಮರಣೋತ್ತರ ವರದಿ; ಆತ್ಮಹತ್ಯೆಯೇ ಕಾರಣ
Team Udayavani, Jul 2, 2018, 7:11 PM IST
ಹೊಸದಿಲ್ಲಿ : ದಿಲ್ಲಿಯ ಬುರಾರಿ ಪ್ರದೇಶದ ಮನೆಯೊಂದರಲ್ಲಿ ನೇಣು ಹಾಕಿಕೊಂಡ ಒಂದೇ ಕುಟುಂಬದ 11 ಸದಸ್ಯರ ಪೈಕಿ ಎಂಟು ಮಂದಿ ತಾವು ಸಾಯುವಾಗ ಯಾವುದೇ ರೀತಿಯ ಪ್ರತಿರೋಧ ತೋರಿದ ಕುರುಹುಗಳು ಕಂಡು ಬಂದಿಲ್ಲ; ಅಂತೆಯೇ ಅವರ ಸಾವು ನೇಣು ಬಿಗಿದು ಮಾಡಿಕೊಂಡಿರುವ ಆತ್ಮಹತ್ಯೆಯದ್ದಾಗಿದೆ ಎಂದು ಆತ್ಮಹತ್ಯೆಗೆ ಶರಣಾದ ಎಲ್ಲರ ಮರಣೋತ್ತರ ಪರೀಕ್ಷೆಯ ಬಳಿಕ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ನೇಣಿಗೆ ಶರಣಾಗಿರುವವರ ಪೈಕಿ 8 ಮಂದಿಯ ಪ್ರಾಥಮಿಕ ಮರಣೋತ್ತರ ವರದಿ ಸಿದ್ಧವಾಗಿದ್ದು ಉಳಿದ ಮೂವರ ಅಟಾಪ್ಸಿ ವಿವರಗಳು ಇನ್ನಷ್ಟೇ ಸಿಗಬೇಕಾಗಿದೆ.
ಭಾಟಿಯಾ ಕುಟುಂಬದ 11 ಮಂದಿಯ ಶವ ಮನೆಯ ಕಬ್ಬಿಣದ ಮೆಶ್ಗೆ ನೇಣು ಬಿಗಿಯಲ್ಪಟ್ಟ ಸ್ಥಿತಿಯಲ್ಲಿ ನಿನ್ನೆ ಪತ್ತೆಯಾಗಿತ್ತು. ಮನೆಯ ಮುಖ್ಯಸ್ಥೆಯಾಗಿರುವ 77ರ ಹರೆಯದ ನಾರಾಯಣೀ ದೇವಿ ಅವರ ಶವವು ಮನೆಯ ಇನ್ನೊಂದು ಕೋಣೆಯ ನೆಲದಲ್ಲಿ ಬಿದ್ದಿರುವುದು ಪತ್ತೆಯಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಸಿರಿಯಾದ ಮೇಲೆ ಇಸ್ರೇಲ್ ವೈಮಾನಿಕ ದಾಳಿ… 5 ಹಿಜ್ಬುಲ್ ಸದಸ್ಯರು ಸೇರಿ 38 ಮಂದಿ ಹತ
Crime: ಗುದದ್ವಾರಕ್ಕೆ ಗಾಳಿ: ಸ್ನೇಹಿತನ ದುರ್ಮರಣ: ಕೃತ್ಯವೆಸಗಿದಾತನ ಬಂಧನ
Bidar; ಪತ್ನಿಯ ಅನೈತಿಕ ಸಂಬಂಧಕ್ಕೆ ಮನನೊಂದು ನೀರಿನ ಟ್ಯಾಂಕ್ ಗೆ ಬಿದ್ದು ಪತಿ ಆತ್ಮಹತ್ಯೆ
Gobi Manchurian ಬ್ಯಾನ್ ಎಫೆಕ್ಟ್: ಚಾಟ್ಸ್ ಮಾರಾಟ ಕುಸಿತ
Book Brahma ಸ್ವಾತಂತ್ರ್ಯೋತ್ಸವ ಕಥಾ ಸ್ಪರ್ಧೆ, ಕಾದಂಬರಿ ಪುರಸ್ಕಾರ- 2024: ವಿವರಗಳು