ದೇವೇಂದ್ರ ಫಡ್ನವೀಸ್ಗೆ ಮಹಾ ಗೃಹ, ಆರ್ಥಿಕ ಹೊಣೆ
Team Udayavani, Aug 15, 2022, 7:15 AM IST
ಮುಂಬಯಿ: ಸಚಿವ ಸಂಪುಟ ವಿಸ್ತರಣೆ ಮಾಡಿ ಐದು ದಿನಗಳ ಅನಂತರ, ರವಿವಾರ ಮಹಾರಾಷ್ಟ್ರ ಸಿಎಂ ಏಕನಾಥ ಶಿಂಧೆ ಅವರು ಸಚಿವರಿಗೆ ಖಾತೆ ಹಂಚಿಕೆ ಮಾಡಿದ್ದಾರೆ. ಉಪ ಮುಖ್ಯಮಂತ್ರಿ, ಬಿಜೆಪಿ ನಾಯಕ ದೇವೇಂದ್ರ ಫಡ್ನವೀಸ್ ಅವರಿಗೆ ಮಹತ್ವದ ಇಲಾಖೆಗಳಾದ ಗೃಹ ಇಲಾಖೆ, ಆರ್ಥಿಕ ಇಲಾಖೆ ಜತೆಗೆ ಯೋಜನಾ ಸಚಿವಾಲಯದ ಜವಾಬ್ದಾರಿ ಕೊಡಲಾಗಿದೆ.
ಬಿಜೆಪಿಯ ನಾಯಕ ರಾಧಾಕೃಷ್ಣ ವಿಖೆ ಪಾಟೀಲ್ಗೆ ಕಂದಾಯ ಇಲಾಖೆಯನ್ನು ಕೊಡಲಾಗಿದೆ. ಉಳಿದಂತೆ ಬಿಜೆಪಿಯ ಸುಧೀರ್ ಮುಂಗಂಟಿವಾರ್ಗೆ ಅರಣ್ಯ ಇಲಾಖೆ, ಚಂದ್ರಕಾಂತ್ ಪಾಟೀಲ್ಗೆ ಉನ್ನತ-ತಾಂತ್ರಿಕ ಶಿಕ್ಷಣ ಇಲಾಖೆಯ ಜವಾಬ್ದಾರಿ ನೀಡಲಾಗಿದೆ. ಏಕನಾಥ ಶಿಂಧೆ ಬಣದ ದೀಪಕ್ ಕೇಸರ್ಕರ್ ಅವರಿಗೆ ಶಿಕ್ಷಣ ಇಲಾಖೆ, ಅಬ್ದುಲ್ ಸತ್ತಾರ್ ಅವರಿಗೆ ಕೃಷಿ ಇಲಾಖೆ ನೀಡಲಾಗಿದೆ. ನಗರಾಭಿವೃದ್ಧಿ ಮತ್ತು 11 ಇಲಾಖೆಗಳನ್ನು ಸಿಎಂ ಶಿಂಧೆ ಅವರು ತಮ್ಮ ಬಳಿಯೇ ಇರಿಸಿಕೊಂಡಿದ್ದಾರೆ.
ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ ಅನಂತರ ಶಿಂಧೆ ಅವರು 41 ದಿನಗಳ ಕಾಲ ಡಿಸಿಎಂ ಫಡ್ನವೀಸ್ ಅವರೊಂದಿಗೆ ದ್ವಿಸದಸ್ಯ ಸರಕಾರ ನಡೆಸಿದ್ದು, ಆ.9ರಂದು 18 ಸಚಿವರನ್ನು ಸೇರಿಸಿಕೊಂಡಿದ್ದಾರೆ.