ಮುಂಗಾರು ಅಧಿವೇಶನಕ್ಕೆ ಅಭೂತಪೂರ್ವ ಸಿದ್ಧತೆ
ಆಗಸ್ಟ್ ಕೊನೆಯ ವಾರ, ಸೆಪ್ಟಂಬರ್ ಮೊದಲ ವಾರ ಸಾಧ್ಯತೆ
Team Udayavani, Aug 17, 2020, 6:37 AM IST
ಹೊಸದಿಲ್ಲಿ: ಕೋವಿಡ್ 19 ಕಾಟದ ನಡುವೆಯೇ ಪ್ರಸಕ್ತ ವರ್ಷದ ಮುಂಗಾರು ಅಧಿವೇಶನಕ್ಕೆ ಸಂಸತ್ತು ಸಿದ್ಧಗೊಳ್ಳುತ್ತಿದೆ.
ಆಗಸ್ಟ್ ಕೊನೆಯ ವಾರ ಅಥವಾ ಸೆಪ್ಟಂಬರ್ ಮೊದಲ ವಾರದಲ್ಲಿ ಅಧಿವೇಶನ ಆರಂಭವಾಗುವ ಸಾಧ್ಯತೆಯಿದೆ.
ಅದಕ್ಕಾಗಿ 68 ವರ್ಷಗಳ ಇತಿಹಾಸವಿರುವ ಸಂಸತ್ ಭವನದಲ್ಲಿ ಇದೇ ಮೊದಲ ಬಾರಿಗೆ ವಿನೂತನ ಕಟ್ಟುಪಾಡುಗಳು ಮತ್ತು ಮುನ್ನೆಚ್ಚರಿಕೆಯ ವ್ಯವಸ್ಥೆಗಳನ್ನು ಕಲ್ಪಿಸಲಾಗುತ್ತಿದೆ.
ಇದರನ್ವಯ ಲೋಕಸಭೆ ಮತ್ತು ರಾಜ್ಯಸಭೆಯ ಕಲಾಪ ಅವಧಿ ಬದಲಾಗಲಿದ್ದು, ದಿನದ ಬೇರೆ ಬೇರೆ ಅವಧಿಗಳಲ್ಲಿ ನಡೆಸಲು ನಿರ್ಧರಿಸಲಾಗಿದೆ. ಸಂಸತ್ತಿನ ಅಲ್ಲಲ್ಲಿ ಥರ್ಮಲ್ ಸ್ಕ್ಯಾನಿಂಗ್, ಸ್ಯಾನಿಟೈಸಿಂಗ್ ಮತ್ತು ಮಾಸ್ಕ್ ವ್ಯವಸ್ಥೆ ಕಲ್ಪಿಸಲಾಗಿದೆ.
ಸದಸ್ಯರಿಗೂ ಗ್ಯಾಲರಿ ವ್ಯವಸ್ಥೆ
ಮುಖ್ಯ ಚೇಂಬರ್ನಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳುವ ದೃಷ್ಟಿಯಿಂದ ಸೀಮಿತ ಸಂಖ್ಯೆಯ ಪ್ರಮುಖ ಸದಸ್ಯರಿಗಷ್ಟೇ ಆಸೀನರಾಗಲು ಅವಕಾಶ ಕಲ್ಪಿಸಲಾಗಿದ್ದು, ಮಿಕ್ಕವರು ಗ್ಯಾಲರಿಯಿಂದ ಕಲಾಪವನ್ನು ವೀಕ್ಷಿಸಬೇಕಿದೆ. ಪ್ರತಿಯೊಂದು ಆಸನಕ್ಕೂ ಆಡಿಯೋ ಕನ್ಸೋಲ್ಗಳನ್ನು ಅಳವಡಿಸಲಾಗಿದ್ದು, ಸದಸ್ಯರು ಕುಳಿತೇ ಮಾತನಾಡಬಹುದು.
ಅಧಿಕಾರಿಗಳ ಚೇಂಬರ್ ಮತ್ತು ಸದನವನ್ನು ಪ್ರತ್ಯೇಕಿಸಲು ಅವರಿಗೂ ವಿಭಾಗಗಳ ನಡುವೆ ಪಾಲಿಕಾಬೊìನೇಟ್ ಶೀಟ್ ಅಳವಡಿಸಲಾಗಿದೆ. ರಾಜ್ಯಸಭೆಯ ಏರ್ ಕಂಡೀಷನ್ ವ್ಯವಸ್ಥೆಯಲ್ಲಿ ಸೂಕ್ಷ್ಮಾಣು ನಿರ್ಮೂಲನೆ ಮಾಡುವಂಥ ಅಲ್ಟ್ರಾವಯಲೇಟ್ ಜರ್ಮಿಸೈಡ್ ಇರ್ಯಾಡಿಯೇಶನ್ ಸಿಸ್ಟಂ ಅಳವಡಿಸಲಾಗಿದೆ.
ಗ್ಯಾಲರಿ ಮತ್ತು ಪ್ರಸ್ ಗ್ಯಾಲರಿಗಳಲ್ಲಿ ಸಾಮಾಜಿಕ ಅಂತರಕ್ಕೆ ಒತ್ತು ನೀಡಲಾಗಿದೆ. ಸೀಮಿತ ಸಂಖ್ಯೆಯ ಅಧಿಕಾರಿಗಳು ಮತ್ತು ವರದಿಗಾರರಿಗೆ ಮಾತ್ರ ಸದನದೊಳಕ್ಕೆ ಅವಕಾಶ ಕಲ್ಪಿಸಲಾಗುತ್ತದೆ.
ಎಲ್ಲ ಸಿದ್ಧತೆಗಳನ್ನು ಆಗಸ್ಟ್ ಮೂರನೇ ವಾರದೊಳಗೆ ಪೂರ್ಣ ಗೊಳಿಸುವಂತೆ ರಾಜ್ಯಸಭೆಯ ಸಭಾಪತಿ ವೆಂಕಯ್ಯ ನಾಯ್ಡು ಹಾಗೂ ಲೋಕಸಭೆಯ ಸಭಾಪತಿ ಓಂ ಬಿರ್ಲಾ ಅವರು ಸಮಿತಿ ಅಧಿಕಾರಿಗಳಿಗೆ ಸೂಚಿಸಿದ್ದು, ಸಿದ್ಧತೆಗಳು ಭರದಿಂದ ಸಾಗುತ್ತಿವೆ.
ರಾಜ್ಯಸಭಾ ಟಿವಿ, ಲೋಕಸಭಾ ಟಿವಿಗಳು ಸದನದಲ್ಲಿ ತಾವು ಹೊಂದಿರುವ ಸೌಕರ್ಯಗಳ ಮೂಲಕವೇ ಎಲ್ಲ ಕಲಾಪಗಳನ್ನು ನೇರವಾಗಿ ಪ್ರಸಾರ ಮಾಡಲಿವೆ.
ಲೋಕಸಭೆಯ ಸಿದ್ಧತೆಗಳು
– ಆಯಾ ಪಕ್ಷಗಳ ಸದಸ್ಯ ಬಲಕ್ಕೆ ಅನುಗುಣವಾಗಿ ಆಸನ ಮೀಸಲಿರಿಸಲಾಗಿದೆ. ಹೆಚ್ಚು ಸ್ಥಾನಗಳನ್ನು ಪಡೆದಿರುವ ಪಕ್ಷಗಳು ಮುಖ್ಯ ಸದನದಲ್ಲಿ ಸ್ಥಾನ ಪಡೆಯಲಿದ್ದು, ಕಡಿಮೆ ಸ್ಥಾನಗಳನ್ನು ಹೊಂದಿರುವ ಪಕ್ಷಗಳ ಸದಸ್ಯರು ಗ್ಯಾಲರಿಯಲ್ಲಿ ಆಸೀನರಾಗಬೇಕಾಗುತ್ತದೆ.
– ಮುಖ್ಯ ಚೇಂಬರಿನಲ್ಲಿ ಪ್ರಧಾನಿ ಮತ್ತು ಅವರ ಸಂಪುಟ ದರ್ಜೆ ಸಚಿವರು ಹಾಗೂ ವಿಪಕ್ಷಗಳ ಪ್ರಮುಖ ಸದಸ್ಯರಿಗಷ್ಟೇ ಅವಕಾಶ ಕಲ್ಪಿಸಲಾಗುತ್ತದೆ.
– ಲೋಕಸಭೆ ಅಧಿಕಾರಿಗಳ ವಿಭಾಗ ಮತ್ತು ಮುಖ್ಯ ಚೇಂಬರನ್ನು ಪಾಲಿ ಕಾರ್ಬೊನೇಟ್ ಶೀಟ್ಗಳಿಂದ ಪ್ರತ್ಯೇಕಿಸಲಾಗುತ್ತದೆ.
ರಾಜ್ಯಸಭೆಯ ಸಿದ್ಧತೆಗಳು
– 60 ಸದಸ್ಯರು ಮುಖ್ಯ ಚೇಂಬರ್ನಲ್ಲಿ, 51 ಸದಸ್ಯರು ಗ್ಯಾಲರಿಯಲ್ಲಿ, ಉಳಿದ 132 ಸದಸ್ಯರು ಲೋಕಸಭೆಯಲ್ಲಿ ಆಸೀನ.
– ಲೋಕಸಭಾ ಚೇಂಬರ್ನಲ್ಲಿ ಕುಳಿತ ರಾಜ್ಯಸಭಾ ಸದಸ್ಯರಿಗೆ ವರ್ಚ್ಯುವಲ್ ಆಗಿ ಭಾಗವಹಿಸಲು ಅನುಕೂಲವಾಗುವಂತೆ ಎಲ್ಸಿಡಿ ಪರದೆ, ಕೆಮರಾ, ಆಡಿಯೋ-ವಿಡಿಯೋ ಸಂಪರ್ಕ ಕಲ್ಪಿಸಲಾಗಿದೆ. ಇದಕ್ಕಾಗಿ ಹೈ ಕ್ವಾಲಿಟಿ ಕೇಬಲ್ಗಳನ್ನು ಅಳವಡಿಸಲಾಗಿದೆ.
– ಹಿರಿಯರಾದ ಡಾ| ಮನಮೋಹನ್ ಸಿಂಗ್, ಎಚ್.ಡಿ. ದೇವೇಗೌಡ, ರಾಮ್ ವಿಲಾಸ್ ಪಾಸ್ವಾನ್, ರಾಮದಾಸ್ ಅಠಾವಳೆ ಮುಂತಾದ ಪ್ರಮುಖ ಸಂಸದರ ಆಸನಗಳನ್ನು ಅವರ ಹೆಸರು ಗಳಿಂದ ಗುರುತು ಮಾಡಲಾಗಿದೆ.
– ಪ್ರತಿಯೊಬ್ಬ ಸದಸ್ಯರ ಕುರ್ಚಿಯ ಬಳಿಯೇ ಆಡಿಯೋ ಕನ್ಸೋಲ್ಗಳನ್ನು ಅಳವಡಿಸಲಾಗಿದ್ದು, ಅವರು ಕುಳಿತೇ ಮಾತನಾಡಲು ಅವಕಾಶ ಕಲ್ಪಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Stones Pelted: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ
Gujarat Lok Sabha Constituency: ಗುಜರಾತ್ ಎಂಬ ಕೇಸರಿ ಕೋಟೆಗೆ ಲಗ್ಗೆ ಸಾಧ್ಯವೇ?
Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ
Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ
Loksabha Election; ದೇಶದಲ್ಲಿ ಹಂತ-1: ಮತ ಇಂದು
MUST WATCH
ಹೊಸ ಸೇರ್ಪಡೆ
Hubli; ಕಾನೂನು ವ್ಯವಸ್ಥೆ ಹೀಗೆ ಮುಂದುವರಿದರೆ ರಾಜ್ಯ ಬಿಹಾರವಾಗುತ್ತದೆ: ಬಸವರಾಜ ಬೊಮ್ಮಾಯಿ
O2: ತೆರೆಗೆ ಬಂತು ಓ2; ಚಿತ್ರದ ಮೇಲೆ ಆಶಿಕಾ ನಿರೀಕ್ಷೆ
Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ
Stones Pelted: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ
Gadag Incident; ದರೋಡೆಯ ಉದ್ದೇಶವಿಲ್ಲ; ಕೊಲೆ ಮಾಡಲೆಂದೆ ಬಂದಿದ್ದಾರೆ; ಐಜಿಪಿ ಹೇಳಿಕೆ