ದೆಹಲಿ ಅಬಕಾರಿ ನೀತಿ: ಮತ್ತೂಬ್ಬನ ಬಂಧನ
Team Udayavani, Feb 9, 2023, 6:48 PM IST
ನವದಹೆಲಿ: ದೆಹಲಿ ಅಬಕಾರಿ ನೀತಿ ಹಗರಣದ ಅಕ್ರಮ ಹಣವರ್ಗಾವಣೆ ಪ್ರಕರಣ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು ಜಾಹೀರಾತು ಸಂಸ್ಥೆಯ ವ್ಯಕ್ತಿಯನ್ನು ಬಂಧಿಸಲಾಗಿದೆ.
ಆತನನ್ನು ರಾಜೇಶ್ ಜೋಶಿ ಎಂದು ಗುರುತಿಸಲಾಗಿದೆ. ಅಬಕಾರಿ ನೀತಿಯಿಂದ ಪಡೆದ 100 ಕೋಟಿ ರೂ. ಲಂಚದ ಒಂದು ಭಾಗವನ್ನು 2022ರಲ್ಲಿ ನಡೆದ ಗೋವಾ ಚುನಾವಣೆಯಲ್ಲಿ ಆಪ್ ಪಕ್ಷದ ಪ್ರಚಾರಕ್ಕಾಗಿ ಬಳಕೆ ಮಾಡಲಾಗಿದೆ ಎಂದು ಆರೋಪಿಸಲಾದೆ. ಅದನ್ನು ನಡೆಸಿದ್ದೇ ರಾಜೇಶ್ ಜೋಶಿ ಎಂದು ಇಡಿ ತಿಳಿಸಿದೆ.
ಬುಧವಾರ ಟಿಆರ್ಎಸ್ ಶಾಸಕಿ ಕೆ.ಕವಿತಾ ನಿಕಟವರ್ತಿ ಲೆಕ್ಕಪರಿಶೋಧಕನೊಬ್ಬನನ್ನು ಬಂಧಿಸಲಾಗಿತ್ತು.