ಆ.25 ರಂದು ಸಾಂವಿಧಾನಿಕ ಪೀಠದಲ್ಲಿ ಶಿವಸೇನೆ ಬಣ ಅರ್ಜಿ ವಿಚಾರಣೆ
ಐವರು ಸದಸ್ಯರ ನ್ಯಾಯಪೀಠ ರಚಿಸಿದ ಸಿಜೆಐ ರಮಣ
Team Udayavani, Aug 23, 2022, 10:00 PM IST
ನವದೆಹಲಿ: ನಿಜವಾದ ಶಿವಸೇನೆ ಯಾರದ್ದು ಎಂಬ ಅಂಶವನ್ನು ತೀರ್ಮಾನಿಸುವ ನಿಟ್ಟಿನಲ್ಲಿ ಸುಪ್ರೀಂಕೋರ್ಟ್ ಐವರು ನ್ಯಾಯಮೂರ್ತಿಗಳು ಇರುವ ವಿಶೇಷ ಸಾಂವಿಧಾನಿಕ ಪೀಠವನ್ನು ರಚಿಸಿದೆ.
ಈ ಪ್ರಕರಣದಲ್ಲಿ ಸಂವಿಧಾನಕ್ಕೆ ಸಂಬಂಧಿಸಿದ ಹಲವು ವಿಚಾರಗಳು ಇರುವುದರಿಂದ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ಹೇಳಿದ್ದಾರೆ. ಜತೆಗೆ ಅದನ್ನು ಗುರುವಾರ ವಿಚಾರಣೆ ಲಿಸ್ಟ್ ಮಾಡುವಂತೆಯೂ ಸೂಚಿಸಿದ್ದಾರೆ. ಇದರ ಜತೆಗೆ ಭಾರತದ ಚುನಾವಣಾ ಆಯೋಗಕ್ಕೆ ನಿಜವಾದ ಶಿವಸೇನೆ ಯಾರಿಗೆ ಸೇರಿದ್ದು ಎಂಬ ವಿಚಾರದ ಬಗ್ಗೆ ತೀರ್ಮಾನ ಪ್ರಕಟಿಸದಂತೆಯೂ ನ್ಯಾಯಪೀಠ ಆದೇಶ ನೀಡಿದೆ.
ಶಿವಸೇನೆಯ ಶಾಸಕರನ್ನು ಅನರ್ಹತೆಗೊಳಿಸಲು ನೀಡಿದ ನೋಟಿಸ್, ಸ್ಪೀಕರ್ ಅವರನ್ನು ತೆಗೆದು ಹಾಕಬೇಕು ಸೇರಿದಂತೆ ಹಲವು ಸಾಂವಿಧಾನಿಕ ವಿಚಾರಗಳ ಬಗ್ಗೆ ಪರಿಶೀಲನೆ ನಡೆಸುವಂತೆ ಹೊಸ ನ್ಯಾಯಪೀಠಕ್ಕೆ ಸೂಚನೆ ನೀಡಲಾಗಿದೆ.