ಚೀನ-ಭಾರತ ಸೇನೆ ಘರ್ಷಣೆ: ಗಡಿಯಲ್ಲಿ 1,700 ಕಿ.ಮೀ. ಹೆದ್ದಾರಿ ನಿರ್ಮಾಣ
Team Udayavani, Dec 20, 2022, 7:30 AM IST
ಇತ್ತೀಚೆಗೆ ಅರುಣಾಚಲ ಪ್ರದೇಶದ ತವಾಂಗ್ನಲ್ಲಿ ಚೀನ-ಭಾರತ ಸೇನೆ ಘರ್ಷಣೆ ಬೆನ್ನಲ್ಲೇ 1,700 ಕಿಮೀ ಉದ್ದದ ಗಡಿಪ್ರದೇಶದ ಹೆದ್ದಾರಿ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಮುಂದಾಗಿದೆ. 2018ರಲ್ಲೇ ಈ ರಸ್ತೆ ವಿನ್ಯಾಸವನ್ನು ಕೇಂದ್ರ ಗೃಹ ಇಲಾಖೆ ಅಂತಿಮಗೊಳಿಸಿದ್ದು, ಮುಂದಿನ 5 ವರ್ಷಗಳಲ್ಲಿ ಗಡಿನಾಡ ಹೆದ್ದಾರಿ ನಿರ್ಮಾಣ ಪೂರ್ಣಗೊಳ್ಳಲಿದೆ.
ಉದ್ದೇಶವೇನು?
– ಅರುಣಾಚಲ ಪ್ರದೇಶದಲ್ಲಿ ಚೀನಾಕ್ಕೆ ಹೊಂದಿಕೊಂಡಂತೆ ಇರುವ ಟಿಬೆಟ್, ಚೀನ, ಮ್ಯಾನ್ಮಾರ್ ಗಡಿ ಪ್ರದೇಶಕ್ಕೆ ಹೊಂದಿಕೊಂಡಂತೆ ರಸ್ತೆ ನಿರ್ಮಾಣ.
– ಗಡಿ ಪ್ರದೇಶದ ಮೂಲಕ ಜನರು ವಲಸೆ ಹೋಗುವುದನ್ನು ತಪ್ಪಿಸುವ ನಿಟ್ಟಿನಲ್ಲಿ ಈ ಕಾಮಗಾರಿ.
– ಗಡಿ ಪ್ರದೇಶಕ್ಕೆ ಸುಲಭವಾಗಿ ಸಶಸ್ತ್ರ ಪಡೆಗಳಿಗೆ ಅಗತ್ಯವಿರುವ ಸರಕುಗಳನ್ನು ಹಾಗೂ ಸೇನಾ ಸಿಬ್ಬಂದಿಯನ್ನು ಸಾಗಿಸಲು.
– ಚೀನ ಮೂಲಸೌಕರ್ಯ ಅಭಿವೃದ್ಧಿಪಡಿಸುತ್ತಿದೆ. ಅದಕ್ಕೆ ಪ್ರತಿಯಾಗಿ ಕೇಂದ್ರದಿಂದಲೂ ಈ ಕೆಲಸ
ಎಲ್ಲಿಂದ ಶುರು?- ಬೊಮಿಡಿಲಾ
ಮುಕ್ತಾಯ ಎಲ್ಲಿ? – ಭಾರತ-ಮ್ಯಾನ್ಮಾರ್ ಗಡಿ ಪ್ರದೇಶವಾದ ವಿಜಯನಗರ
ರಸ್ತೆ ಎಲ್ಲಿ ಹಾದು ಹೋಗಲಿದೆ?
ಸರ್ಲಿ-ಹುರಿ- ಮುನಿಗಾಂಗ್- ಜಿಡೋ-ಹುನ್ಲಿ- ಹಯುಲಿಯಾಂಗ್-ಹವಾಯಿ-ಖಸಾರ್ಸಂಗ್-ರಾಮನಗರ
ನಿರ್ಮಾಣ ಯಾರಿಂದ?
ಕೇಂದ್ರ ಸರ್ಕಾರದ ರಸ್ತೆ ಸಾರಿಗೆ ಸಚಿವಾಲಯ
27 ಸಾವಿರ ಕೋಟಿ ರೂ.- ಯೋಜನೆ ವೆಚ್ಚ
1, 748 ಕಿಮೀ- ರಸ್ತೆಯ ಉದ್ದ
2 ಲೇನ್- ಪ್ರಸ್ತಾವಿತ ರಸ್ತೆಯ ಅಗಲ
2024-25ರ- ಒಳಗಾಗಿ ಎಲ್ಲಾ 9 ಪ್ಯಾಕೇಜ್ಗಳಿಗೆ ಮಂಜೂರು.
2027- ಕಾಮಗಾರಿ ಮುಕ್ತಾಯದ ಗುರಿಯ ವರ್ಷ
ಸದ್ಯದ ಸ್ಥಿತಿ ಏನು?- ಕಳೆದ ತಿಂಗಳು ರಾಷ್ಟ್ರೀಯ ಹೆದ್ದಾರಿ ಎಂದು ಘೋಷಣೆ. 192 ಕಿಮೀ ದೂರದ ಕಾಮಗಾರಿ ಶುರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kochi; ವಿದೇಶಿ ಮಹಿಳಾ ಪ್ರವಾಸಿಗರಿಂದ ಪ್ಯಾಲೆಸ್ತೀನ್ ಪರ ಬೋರ್ಡ್ಗಳು ಧ್ವಂಸ!!
Kerala: ಸಿಪಿಐ(ಎಂ) ಪ್ರಣಾಳಿಕೆಯಲ್ಲಿನ ಭರವಸೆಗೆ ರಾಜನಾಥ್ ಸಿಂಗ್ ಆಕ್ರೋಶ.. ಏನದು ಭರವಸೆ?
Gujarat: ಹಿಂಬದಿಯಿಂದ ಟ್ರಕ್ಗೆ ಕಾರು ಢಿಕ್ಕಿ; ಭೀಕರ ಅಪಘಾತದಲ್ಲಿ 10 ಮಂದಿ ದುರ್ಮರಣ
Lok Sabha polls:’ಆಪ್ ಕಾ ರಾಮ ರಾಜ್ಯ’ ವೆಬ್ ಸೈಟ್ ಬಿಡುಗಡೆ ಮಾಡಿದ ಆಮ್ ಆದ್ಮಿ ಪಾರ್ಟಿ
Ram Navami: ಅಯೋಧ್ಯೆಯಲ್ಲಿ ಬಾಲರಾಮನ ಹಣೆಯನ್ನು ಸ್ಪರ್ಶಿಸಿದ ಸೂರ್ಯರಶ್ಮಿ!