ಪುಲ್ವಾಮಾ ದಾಳಿ ಬಗ್ಗೆ ಫಾರೂಕ್ ಅನುಮಾನ
Team Udayavani, Mar 31, 2019, 6:05 AM IST
ಜಮ್ಮು: ನಲ್ವತ್ತು ಮಂದಿ ಸಿಆರ್ಪಿಎಫ್ ಯೋಧರ ಸಾವಿಗೆ ಕಾರಣವಾದ ಫೆ. 14ರ ಪುಲ್ವಾಮಾ ದಾಳಿ ಬಗ್ಗೆ ತಮಗೆ ಅನು ಮಾನವಿದೆ ಎಂದು ಹೇಳುವ ಮೂಲಕ ಜಮ್ಮು ಮತ್ತು ಕಾಶ್ಮೀರದ ಮಾಜಿ ಸಿಎಂ ಫಾರೂಕ್ ಅಬ್ದುಲ್ಲಾ ಹೊಸ ವಿವಾದಕ್ಕೆ ನಾಂದಿ ಹಾಡಿದ್ದಾರೆ.
ನವಿಯಾ ಶುಭ್ ಸಂಕೀರ್ಣದಲ್ಲಿ ನ್ಯಾಶನಲ್ ಕಾನ್ಫರೆನ್ಸ್ ಸಮಾವೇಶ ದಲ್ಲಿ ಮಾತನಾಡಿ, ಪುಲ್ವಾಮಾ ದಾಳಿ ಯಲ್ಲಿ ಮಡಿದ ಯೋಧರಿಗೆ ಮೋದಿ ಶ್ರದ್ಧಾಂಜಲಿ ಸಲ್ಲಿಸಿದ್ದಾರೆಯೇ? ಅವರ ಕುಟುಂಬಗಳನ್ನು ಭೇಟಿ ಯಾಗಿದ್ದಾರೆಯೇ? ಅಂದಿನ ದಾಳಿಯಲ್ಲಿ ಆ 40 ಯೋಧರ ಸಾವಿನ ಕುರಿತೂ ನನಗೆ ಹಲವು ಅನುಮಾನಗಳಿವೆ’ ಎಂದಿದ್ದಾರೆ.