- Thursday 12 Dec 2019
ಜಯಪ್ರದಾ ವಿರುದ್ಧ ಲೈಂಗಿಕ ಅವಹೇಳನ: ಆಜಂ ವಿರುದ್ಧ FIR
Team Udayavani, Apr 15, 2019, 11:47 AM IST
ಲಕ್ನೋ : ಬಿಜೆಪಿ ಅಭ್ಯರ್ಥಿ, ಮಾಜಿ ಚಿತ್ರ ನಟಿ, ಜಯಪ್ರದಾ ವಿರುದ್ಧ ಅತ್ಯಂತ ಕೀಳುಮಟ್ಟದ ಲೈಂಗಿಕ ಅವಹೇಳನದ ಮಾತುಗಳನ್ನು ಆಡಿರುವ ಕಾರಣಕ್ಕೆ ಸಮಾಜವಾದಿ ಪಕ್ಷದ ನಾಯಕ ಆಜಂ ಖಾನ್ ವಿರುದ್ಧ ಎಫ್ ಐ ಆರ್ ದಾಖಲಾಗಿದೆ.
‘ಮಹಿಳೆಯರ ಬಗ್ಗೆ, ವಿಶೇಷವಾಗಿ ತನ್ನ ಬಗೆ, ಅತ್ಯಂತ ಕೀಳು ಮಟ್ಟದ ಟೀಕೆ ಮಾಡುವ ಆತನನ್ನು (ಆಜಂ ಖಾನ್) ಚುನಾವಣೆಗೆ ನಿಲ್ಲಲು ಬಿಡಬಾರದು; ಆತ ಒಂದೊಮ್ಮೆ ಗೆದ್ದು ಬಂದರೆ ಮಹಿಳೆಯರು ಮತ್ತು ದೇಶದ ಪ್ರಜಾಸತ್ತೆಯ ಗತಿ ಏನು ? ಆತನಿರುವ ಸಮಾಜದಲ್ಲಿ ಮಹಿಳೆಯರಿಗೆ ಸ್ಥಾನವೇ ಇರಲಾರದು. ಹಾಗಿರುವಾಗ ನಾವೆಲ್ಲಿಗೆ ಹೋಗಬೇಕು ? ನಾನು ಸಾಯಬೇಕೇ ? ಸತ್ತರೆ ನಿಮಗೆ (ಆಜಂ ಖಾನ್ ಗೆ) ತೃಪ್ತಿಯೇ ? ನಿಮ್ಮ ಕೀಳು ಮಟ್ಟದ ಮಾತಿಗೆ ಬೆದರಿ ನಾನು ರಾಮಪುರ ವನ್ನು ಬಿಡುವೆನೆಂದು ಭಾವಿಸುವಿರಾ ? ಇಲ್ಲ, ನಾನಂತೂ ಇಲ್ಲಿಂದ ಹೋಗುವುದಿಲ್ಲ’ ಎಂದು ಜಯಪ್ರದಾ ಹೇಳಿದ್ದಾರೆ.
‘ಆಜಂ ಖಾನ್ ಮಾತನಾಡುವ ರೀತಿ ನನಗೇನೂ ಹೊಸದಲ್ಲ; 2009ರಲ್ಲಿ ಅವರದ್ದೇ ಪಕ್ಷದ ಅಭ್ಯರ್ಥಿಯಾಗಿ ನಾನು ಸ್ಪರ್ಧಿಸಿದ್ದಾಗ ಅಗಲೂ ಅವರು ನನ್ನ ಬಗ್ಗೆ ತುಂಬಾ ಕೀಳಾಗಿ ಮಾತನಾಡಿದ್ದರು; ಆಗ ಪಕ್ಷದಲ್ಲಿ ಯಾರೂ ನನ್ನ ಬೆಂಬಲಕ್ಕೆ ಬರಲಿಲ್ಲ; ನಾನೋರ್ವ ಮಹಿಳೆ; ಆತನ ಕೀಳು ಮಾತನ್ನು ಪುನರುಚ್ಚರಿಸಲು ಕೂಡ ನನ್ನಿಂದ ಅಸಾಧ್ಯ. ನಾನು ಆತನಿಗೆ ಏನು ಮಾಡಿದ್ದೇನೆ ಎಂಬುದನ್ನು ನಾನು ಅರಿಯೆ; ಆದರೂ ಆತ ನನ್ನ ಬಗ್ಗೆ ಕೀಳಾಗಿ ಮಾತನಾಡುವುದನ್ನು ನಿಲ್ಲಿಸಿಲ್ಲ’ ಎಂದು ಜಯಪ್ರದಾ ಹೇಳಿದ್ದಾರೆ.
ಈ ವಿಭಾಗದಿಂದ ಇನ್ನಷ್ಟು
-
ಜಾಲೋರ್(ರಾಜಸ್ಥಾನ): ಮೂರು ವರ್ಷದ ಪುಟ್ಟ ಮಗುವಿನ ತಲೆ ಸ್ಟೀಲ್ ಪಾತ್ರೆಯೊಳಗೆ ಸಿಲುಕಿಕೊಂಡಿದ್ದು, ಕೊನೆಗೂ ಗ್ರಾಮಸ್ಥರ ನೆರವಿನೊಂದಿಗೆ ಪಾತ್ರೆಯನ್ನು ಕತ್ತರಿಸಿ...
-
ನವದೆಹಲಿ: ಪೌರತ್ವ ತಿದ್ದುಪಡಿ ಮಸೂದೆಗೆ ಕಾಂಗ್ರೆಸ್, ಟಿಎಂಸಿ, ಎಡಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಅಂಗೀಕಾರ ಪಡೆದಿದೆ. ಮತ್ತೊಂದೆಡೆ...
-
ನವದೆಹಲಿ:ಅಸ್ಸಾಂ ಜನರ ಅಧಿಕಾರ, ಹಕ್ಕನ್ನೂ ಯಾರಿಗೂ ಕಸಿದುಕೊಳ್ಳಲು ಸಾಧ್ಯವಿಲ್ಲ. ಅಸ್ಸಾಂ ಜನರ ಸಂಸ್ಕೃತಿ, ಹಕ್ಕು ರಕ್ಷಣೆಗೆ ಸರ್ಕಾರ ಬದ್ಧವಾಗಿದೆ. ಈ ಹಿನ್ನೆಲೆಯಲ್ಲಿ...
-
ನವದೆಹಲಿ: ಪೌರತ್ವ ತಿದ್ದುಪಡಿ ಮಸೂದೆ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಅಂಗೀಕಾರವಾಗಿರುವುದನ್ನು ಪ್ರತಿಭಟಿಸಿ ಮಹಾರಾಷ್ಟ್ರದ ಹಿರಿಯ ಐಪಿಎಸ್ ಅಧಿಕಾರಿಯೊಬ್ಬರು...
-
ರಾಂಚಿ: ಜಾರ್ಖಂಡ್ ವಿಧಾನಸಭಾ ಚುನಾವಣೆಯ ಮೂರನೇ ಹಂತದ ಮತದಾನ ಪ್ರಕ್ರಿಯೆ ಇಂದು ನಡೆಯುತ್ತಿದ್ದು , 17 ಕ್ಷೇತ್ರದ ಅಭ್ಯರ್ಥಿಗಳ ರಾಜಕೀಯ ಭವಿಷ್ಯವನ್ನು ಮತದಾರರು...
ಹೊಸ ಸೇರ್ಪಡೆ
-
ಮಂಡ್ಯ: ಸಿಎಂ ಬಿಎಸ್ ವೈ ಹುಣ್ಣಿಮೆಯಂದು ಶ್ರೀ ಕಾಲಭೈರವೇಶ್ವರನ ಪೂಜೆ ನೆರವೇರಿಸಿದರು. ಅಮಾವಾಸ್ಯೆಯಲ್ಲಿ ಕಾಲಭೈರವೇಶ್ವರನ ಪೂಜೆ ನೆರವೇರಿಸಿದರೆ ಇಷ್ಟಾರ್ಥ...
-
ಡಿ.ಬಿ. ವಡವಡಗಿ ಮುದ್ದೇಬಿಹಾಳ: ಪಟ್ಟಣದ ಹೃದಯ ಭಾಗದಲ್ಲಿನ ಪುರಸಭೆ ಅಧಿನದ 65 ವರ್ಷಗಳಷ್ಟು ಹಳೆಯದಾದ ಕಾಯಿಪಲ್ಲೆ, ಕಿರಾಣಿ ಮಾರುಕಟ್ಟೆ ಸಂಪೂರ್ಣ ಜೀರ್ಣಾವಸ್ಥೆಗೆ...
-
ಬೀದರ: ನಗರದ ವಿವಿಧೆಡೆ ಬುಧವಾರ ಜಿಲ್ಲಾಧಿಕಾರಿ ಡಾ| ಎಚ್.ಆರ್. ಮಹಾದೇವ್ ದಿಢೀರ್ ಭೇಟಿ ನೀಡಿ, ಆಯಾ ಇಲಾಖೆಗಳ ಕಾರ್ಯವೈಖರಿ ಪರಿಶೀಲನೆ ನಡೆಸಿದರು. ಚಿದ್ರಿಯ...
-
ಕಲಬುರಗಿ: ಫೆಬ್ರವರಿ 5 ರಿಂದ ಕಲಬುರಗಿಯಲ್ಲಿ ನಡೆಯಲಿರುವ ಅಖಿಲ ಭಾರತ 85 ನೇಯ ಸಮ್ಮೇಳನಕ್ಕೆ ಎಲ್ಲ ಇಲಾಖೆಗಳ ಅಧಿಕಾರಿಗಳು ಸಮ್ಮೇಳನ ಯಶಸ್ವಿಯಾಗಿ ನೆರವೇರುವ ನಿಟ್ಟಿನಲ್ಲಿ...
-
ಶಿರೂರ: ಜಿಲ್ಲಾಡಳಿತ ಆಶ್ರಯದಲ್ಲಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ಸಹಯೋಗದಲ್ಲಿ ಆಶ್ರಯಕಾಲೋನಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆಶ್ರಯದಲ್ಲಿ ವಿಶೇಷ...