ಗೋಹತ್ಯೆ ಆರೋಪಿ ರಕ್ಷಣೆಗೆ ಮುಂದಾದ ನಾಲ್ವರು ಪೊಲೀಸರು ಅಮಾನತು
Team Udayavani, Sep 11, 2021, 3:27 PM IST
ಫತೆಪುರ : ಗೋಹತ್ಯೆ ಆರೋಪಿಗಳನ್ನು ಬಚಾವ್ ಮಾಡಲು ಪ್ರಯತ್ನಿಸಿದ ಆರೋಪದ ಮೇಲೆ ನಾಲ್ವರು ಪೊಲೀಸ್ ಅಧಿಕಾರಿಗಳನ್ನು ಕರ್ತವ್ಯದಿಂದ ಅಮಾನತು ಮಾಡಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಪೊಲೀಸ್ ಸಬ್ ಇನ್ಸ್ಪೆಕ್ಟರ್ ಶಮಿ ಆಶ್ರಪ್ ಹಾಗೂ ಅನೀಶ್ ಕುಮಾರ್ ಸಿಂಗ್, ಮುಖ್ಯಪೇದೆ ಮನೋಜ್ ಕುಮಾರ್ ಹಾಗೂ ಪೇದೆ ರಾಜೇಶ್ ತಿವಾರಿ, ಅಮಾನತು ಶಿಕ್ಷೆಗೆ ಗುರಿಯಾದ ಪೊಲೀಸರು.
ಖಖೇರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಗೋಹತ್ಯೆ ಪ್ರಕರಣದ ಆರೋಪಿ ಹೈದರ್ನನ್ನು ರಕ್ಷಿಸಲು ಈ ನಾಲ್ವರು ಪ್ರಯತ್ನಿಸಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಜೇಶ್ ಕುಮಾರ್ ಸಿಂಗ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಈ ಘಟನೆ ಗುರುವಾರ ನಡೆದಿತ್ತು. ಸಿಪಿಐ ಸಂಜಯ್ ಸಿಂಗ್ ಅವರ ನೇತೃತ್ವದಲ್ಲಿ ತನಿಖೆ ನಡೆದಿದ್ದು, ಈ ನಾಲ್ವರು ಗೋಹತ್ಯೆ ಆರೋಪಿಯನ್ನು ಬಚಾವ್ ಮಾಡಲು ಯತ್ನಿಸಿದ್ದ ದೃಢವಾಗಿದೆ. ಆದ್ದರಿಂದ ಅಮಾನತು ಮಾಡಲಾಗಿದೆ ಎಂದು ಎಸ್ಪಿ ತಿಳಿಸಿದ್ದಾರೆ.