![Leopard… ಪೆರಂಪಳ್ಳಿ: ಮನೆಯ ಕಾಂಪೌಂಡ್ ಒಳಗೆ ಕಾಣಿಸಿಕೊಂಡ ಚಿರತೆ… ಭಯಭೀತರಾದ ಜನ](https://www.udayavani.com/wp-content/uploads/2024/07/chirate-1-415x250.jpg)
Wine ನಾಶಪಡಿಸಲು 1425 ಕೋಟಿ ರೂ. ಪಾವತಿ! ಫ್ರಾನ್ಸ್ಗೆ ಈ ಮೊತ್ತ ನೀಡಿದ ಐರೋಪ್ಯ ಒಕ್ಕೂಟ
ವೈನ್ ಬೆಲೆ ಕುಸಿತದ ಹಿನ್ನೆಲೆ ಈ ಕ್ರಮ
Team Udayavani, Aug 26, 2023, 8:40 PM IST
![Wine ನಾಶಪಡಿಸಲು 1425 ಕೋಟಿ ರೂ. ಪಾವತಿ! ಫ್ರಾನ್ಸ್ಗೆ ಈ ಮೊತ್ತ ನೀಡಿದ ಐರೋಪ್ಯ ಒಕ್ಕೂಟ](https://www.udayavani.com/wp-content/uploads/2023/08/Wine-620x413.jpg)
ನವದೆಹಲಿ:ಬೆಲೆ ತೀರಾ ಕುಸಿತಗೊಂಡಾಗ ರೈತರು ಪ್ರತಿಭಟನಾರ್ಥವಾಗಿ ಟೊಮೆಟೋ, ಈರುಳ್ಳಿಯಂಥ ತರಕಾರಿಗಳನ್ನು ರಸ್ತೆಗೆ ಎಸೆಯುವುದನ್ನು ನೀವು ನೋಡಿರುತ್ತೀರಿ. ಆದರೆ, ಎಲ್ಲಾದರೂ ಮದ್ಯವನ್ನು ಈ ರೀತಿ ನಾಶ ಮಾಡಿದ್ದನ್ನು ಕೇಳಿದ್ದೀರಾ?
ಫ್ರಾನ್ಸ್ನಲ್ಲಿ ವೈನ್ ಬೆಲೆ ಇಳಿಕೆಯಾಗಿದೆ ಎಂಬ ಕಾರಣಕ್ಕೆ ಹೆಚ್ಚುವರಿ ವೈನ್ ಅನ್ನು ನಾಶ ಮಾಡಲಾಗುತ್ತಿದೆ. ವಿಶೇಷವೆಂದರೆ, ವೈನ್ ನಾಶಪಡಿಸಲೆಂದೇ ಫ್ರಾನ್ಸ್ಗೆ ಐರೋಪ್ಯ ಒಕ್ಕೂಟವು ಬರೋಬ್ಬರಿ 1425.70 ಕೋಟಿ ರೂ.(160 ದಶಲಕ್ಷ ಯೂರೋ) ಗಳನ್ನು ನೀಡಿದೆ.
ಕ್ರಾಫ್ಟ್ ಬಿಯರ್ನ ಜನಪ್ರಿಯತೆ ಹೆಚ್ಚಿರುವುದು, ಜೀವನವೆಚ್ಚ ಹೆಚ್ಚಳವಾಗಿರುವುದು, ಅತಿಯಾದ ಉತ್ಪಾದನೆ ಸೇರಿದಂತೆ ಬೇರೆ ಬೇರೆ ಕಾರಣಗಳಿಂದಾಗಿ ವೈನ್ ಕುಡಿಯುವವರ ಸಂಖ್ಯೆಯೂ ಗಣನೀಯವಾಗಿ ಇಳಿಕೆಯಾಗಿದೆ. ಐರೋಪ್ಯ ಒಕ್ಕೂಟದಲ್ಲಿ ವೈನ್ ಉತ್ಪಾದನೆಯು ಶೇ.4ರಷ್ಟು ಹೆಚ್ಚಳವಾಗಿದ್ದರೂ, ಬಳಕೆ ಮಾತ್ರ ಶೇ.34ರಷ್ಟು ಕುಸಿತಗೊಂಡಿದೆ. ಹೀಗಾಗಿ, ವೈನ್ ಬೆಲೆಯೂ ಇಳಿಕೆಯಾಗಿದೆ.
ಈ ಹಿನ್ನೆಲೆಯಲ್ಲಿ ಐರೋಪ್ಯ ಒಕ್ಕೂಟವು 1,420.70 ಕೋಟಿ ರೂ.ಗಳನ್ನು ಫ್ರಾನ್ಸ್ಗೆ ಪಾವತಿಸಿದೆ. ಈ ಮೊತ್ತವನ್ನು ಬಳಸಿಕೊಂಡು ಮಾರಾಟವಾಗದೇ ಉಳಿದ ವೈನ್ ಅನ್ನು ಖರೀದಿಸಿ, ಅದರಲ್ಲಿರುವ ಆಲ್ಕೋಹಾಲ್ ಅನ್ನು ಪ್ರತ್ಯೇಕಿಸಿ ಹ್ಯಾಂಡ್ ಸ್ಯಾನಿಟೈಸರ್, ಸ್ವತ್ಛಗೊಳಿಸುವ ಉತ್ಪನ್ನಗಳು, ಸುಗಂಧದ್ರವ್ಯಗಳ ತಯಾರಿಕೆಗೆ ಬಳಸಲು ನಿರ್ಧರಿಸಲಾಗಿದೆ. ಅಲ್ಲದೇ, ಸ್ವಲ್ಪ ಮೊತ್ತವನ್ನು ವೈನ್ ಬೆಳೆಗಾರರಿಗೆ ನೀಡಿ, ಆಲಿವ್ಗಳನ್ನು ಬೆಳೆಯುವಂತೆ ಸೂಚಿಸಲಾಗುತ್ತದೆ.
ವೈನ್ ಸೇವನೆ ಇಳಿಕೆ (ಜನವರಿಯಿಂದ ಜೂನ್ವರೆಗೆ)
ಇಟಲಿ- ಶೇ.7
ಸ್ಪೇನ್- ಶೇ.10
ಫ್ರಾನ್ಸ್- ಶೇ.15
ಜರ್ಮನಿ- ಶೇ.22
ಪೋರ್ಚುಗಲ್- ಶೇ.34
ಟಾಪ್ ನ್ಯೂಸ್
![Leopard… ಪೆರಂಪಳ್ಳಿ: ಮನೆಯ ಕಾಂಪೌಂಡ್ ಒಳಗೆ ಕಾಣಿಸಿಕೊಂಡ ಚಿರತೆ… ಭಯಭೀತರಾದ ಜನ](https://www.udayavani.com/wp-content/uploads/2024/07/chirate-1-415x250.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
![Navi Mumbai: ಬೆಳ್ಳಂಬೆಳಗ್ಗೆ ಮೂರೂ ಅಂತಸ್ತಿನ ಕಟ್ಟಡ ಕುಸಿತ… ಹಲವರು ಸಿಲುಕಿರುವ ಶಂಕೆ](https://www.udayavani.com/wp-content/uploads/2024/07/BUILDING-1-150x84.jpg)
Navi Mumbai: ಬೆಳ್ಳಂಬೆಳಗ್ಗೆ ಮೂರೂ ಅಂತಸ್ತಿನ ಕಟ್ಟಡ ಕುಸಿತ… ಹಲವರು ಸಿಲುಕಿರುವ ಶಂಕೆ
![modi (4)](https://www.udayavani.com/wp-content/uploads/2024/07/modi-4-4-150x92.jpg)
NITI Aayog ಸಭೆ ಇಂದು; “ವಿಕಸಿತ ಭಾರತ’ದ ಬಗ್ಗೆ ಚರ್ಚೆ: 7 ರಾಜ್ಯಗಳಿಂದ ಬಹಿಷ್ಕಾರ!
![Exam](https://www.udayavani.com/wp-content/uploads/2024/07/Exam-8-150x84.jpg)
NEET ಟಾಪರ್ಗಳ ಸಂಖ್ಯೆ 67ರಿಂದ ಈಗ 17ಕ್ಕೆ ಇಳಿಕೆ!
![1-assam](https://www.udayavani.com/wp-content/uploads/2024/07/1-assam-150x84.jpg)
UNESCO ವಿಶ್ವ ಪಾರಂಪರಿಕ ತಾಣ ಪಟ್ಟಿಗೆ ‘ದಿಬ್ಬ ಸಮಾಧಿಗಳು’: ಏನಿದು ಮೊಯಿಡಮ್ಸ್?
![1-kanwar-msid](https://www.udayavani.com/wp-content/uploads/2024/07/1-kanwar-msid-150x84.jpg)
Uttara Khand; ಕನ್ವರ್ ಯಾತ್ರೆ: ಮಸೀದಿಗೇ ಪರದೆ ಹಾಕಿದ ಹರಿದ್ವಾರ ಆಡಳಿತ!
MUST WATCH
ಹೊಸ ಸೇರ್ಪಡೆ
![Leopard… ಪೆರಂಪಳ್ಳಿ: ಮನೆಯ ಕಾಂಪೌಂಡ್ ಒಳಗೆ ಕಾಣಿಸಿಕೊಂಡ ಚಿರತೆ… ಭಯಭೀತರಾದ ಜನ](https://www.udayavani.com/wp-content/uploads/2024/07/chirate-1-150x90.jpg)
Leopard… ಪೆರಂಪಳ್ಳಿ: ಮನೆಯ ಕಾಂಪೌಂಡ್ ಒಳಗೆ ಕಾಣಿಸಿಕೊಂಡ ಚಿರತೆ… ಭಯಭೀತರಾದ ಜನ
![Navi Mumbai: ಬೆಳ್ಳಂಬೆಳಗ್ಗೆ ಮೂರೂ ಅಂತಸ್ತಿನ ಕಟ್ಟಡ ಕುಸಿತ… ಹಲವರು ಸಿಲುಕಿರುವ ಶಂಕೆ](https://www.udayavani.com/wp-content/uploads/2024/07/BUILDING-1-150x84.jpg)
Navi Mumbai: ಬೆಳ್ಳಂಬೆಳಗ್ಗೆ ಮೂರೂ ಅಂತಸ್ತಿನ ಕಟ್ಟಡ ಕುಸಿತ… ಹಲವರು ಸಿಲುಕಿರುವ ಶಂಕೆ
![Tragedy: ಚಲಿಸುತ್ತಿದ್ದ ಬೈಕ್ ಮೇಲೆ ಬಿದ್ದ ಮರ… ಯುವಕ ಸ್ಥಳದಲ್ಲೇ ಮೃತ್ಯು](https://www.udayavani.com/wp-content/uploads/2024/07/BIKE-7-150x86.jpg)
Tragedy: ಚಲಿಸುತ್ತಿದ್ದ ಬೈಕ್ ಮೇಲೆ ಬಿದ್ದ ಮರ… ಯುವಕ ಸ್ಥಳದಲ್ಲೇ ಮೃತ್ಯು
![1-24-saturday](https://www.udayavani.com/wp-content/uploads/2024/07/1-24-saturday-2-150x90.jpg)
Daily Horoscope: ಪಾಲುದಾರಿಕೆ ವ್ಯವಹಾರದಲ್ಲಿ ಲಾಭ ಹೆಚ್ಚಳ, ಆರೋಗ್ಯ ಉತ್ತಮ
![CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್ಗೆ ವಿವರಣೆ?](https://www.udayavani.com/wp-content/uploads/2024/07/cm-7-150x91.jpg)
CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್ಗೆ ವಿವರಣೆ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.