ಫ್ರೂಟಿ, ಸಮೋಸಾ ಬೇಕಾಗಿದೆ…ಮಂಗಗಳ ಉಪಟಳದ ಬಗ್ಗೆ ಸಂಸತ್ ನಲ್ಲಿ ಹೇಮಾಮಾಲಿನಿ ಚರ್ಚೆ
ಮಥುರಾದಲ್ಲಿ ಮಂಗಗಳ ರಕ್ಷಣೆಗಾಗಿಯೇ ಸಫಾರಿ ನಿರ್ಮಿಸಬೇಕು
Team Udayavani, Nov 21, 2019, 7:20 PM IST
ನವದೆಹಲಿ:ಮಥುರಾ ಕ್ಷೇತ್ರದಲ್ಲಿ ಬೀದಿ ಮಂಗಗಳ ಕಾಟ ಹೆಚ್ಚಾಗಿದ್ದು, ಈ ಹಿನ್ನೆಲೆಯಲ್ಲಿ ಮಂಗಗಳಿಗಾಗಿಯೇ ಸಫಾರಿಯನ್ನು ನಿರ್ಮಿಸಬೇಕು ಎಂದು ಗುರುವಾರ ಸಂಸದೆ ಹೇಮಾ ಮಾಲಿನಿ ಲೋಕಸಭೆಯಲ್ಲಿ ಸಮಸ್ಯೆಯನ್ನು ಪ್ರಸ್ತಾಪಿಸಿದ್ದರು.
ಮಥುರಾಕ್ಕೆ ಆಗಮಿಸುವ ಪ್ರವಾಸಿಗರು ಮಂಗಗಳಿಗೆ ಫ್ರೂಟಿಯನ್ನು ನೀಡುತ್ತಿದ್ದಾರೆ. ಅಲ್ಲದೇ ಸಮೋಸಾ, ಕಚೋರಿಯನ್ನು ತಿನ್ನಲು ಕೊಡುತ್ತಿದ್ದಾರೆ. ಇದರಿಂದ ಕೇವಲ ಮಂಗಗಳ ಆರೋಗ್ಯ ಮಾತ್ರ ಪರಿಣಾಮ ಬೀರುತ್ತಿಲ್ಲ. ಸ್ಥಳೀಯ ಜನರಿಗೂ ತೊಂದರೆಯಾಗುತ್ತಿದೆ ಎಂದು ಹೇಮಾಮಾಲಿನಿ ಹೇಳಿದರು.
ಮಂಗಗಳು ನೈಸರ್ಗಿಕ ಅಭ್ಯಾಸಗಳನ್ನು ಮರೆತು ಬಿಟ್ಟಿವೆ. ಆಹಾರ ಹುಡುಕುತ್ತ ಜನವಸತಿ ಪ್ರದೇಶಗಳಿಗೆ ಮಂಗಗಳು ನುಗ್ಗಿದಾಗ ಮಥುರಾದ ಜನರು ಅವುಗಳನ್ನು ಓಡಿಸಲು ಹರಸಾಹಸ ಪಡುತ್ತಿದ್ದಾರೆ. ಮಂಗಗಳ ಉಪಟಳಕ್ಕೆ ಕಠಿವಾಣ ಹಾಕಲು ಅಧಿಕಾರಿಗಳು ಸಾಕಷ್ಟು ಪ್ರಯತ್ನ ನಡೆಸಿದ್ದಾರೆ. ಆದರೆ ಕೆಲವೊಮ್ಮೆ ಅವುಗಳು ವ್ಯಗ್ರವಾಗಿ ದಾಳಿ ನಡೆಸುತ್ತವೆ. ಮಂಗಗಳ ದಾಳಿಯಲ್ಲಿ ಜನರು ಸಾವನ್ನಪ್ಪುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಮಥುರಾದಲ್ಲಿ ಮಂಗಗಳ ರಕ್ಷಣೆಗಾಗಿಯೇ ಸಫಾರಿ ನಿರ್ಮಿಸಬೇಕೆಂಬ ಬೇಡಿಕೆ ನನ್ನದಾಗಿದೆ. ಅಲ್ಲದೇ ಆ ಕಾಡಿನಲ್ಲಿ ಹಣ್ಣುಗಳ ಮರಗಳನ್ನು ಬೆಳೆಸಬೇಕು. ಮಂಗಗಳು ಜನರಿಂದ ಆಹಾರ ಕಸಿದು ತಿನ್ನುವುದು ಅವುಗಳ ಆರೋಗ್ಯಕ್ಕೆ ಒಳ್ಳೆಯದಲ್ಲ.ಈಗ ಮಂಗಗಳಿಗೆ ಹಣ್ಣು ಬೇಕಾಗಿಲ್ಲ, ಆದರೆ ಸಮೋಸಾ ಮತ್ತು ಫ್ರೂಟಿ ಬೇಕಾಗಿದೆ ಎಂದು ಹೇಮಾಮಾಲಿನಿ ಸಂಸತ್ ಹೊರಗೆ ಮಾತನಾಡುತ್ತ ತಿಳಿಸಿರುವುದಾಗಿ ಎಎನ್ ಐ ವರದಿ ಮಾಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
AMU: ಇತಿಹಾಸದಲ್ಲೇ ಮೊದಲು… ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯಕ್ಕೆ ಮಹಿಳಾ ಉಪಕುಲಪತಿ ನೇಮಕ
Telangana Election 2024: ಕಳೆಗುಂದಿದ ಬಿಆರ್ಎಸ್: ಕಾಂಗ್ರೆಸ್-ಬಿಜೆಪಿ ಕಾದಾಟ
Insulin: ಶುಗರ್ ಲೆವೆಲ್ ಏರಿಕೆ… ಜೈಲಿನಲ್ಲಿರುವ ಕೇಜ್ರಿವಾಲ್ ಗೆ ಇನ್ಸುಲಿನ್ ನೀಡಿಕೆ
Viral Video: ಕುಟುಂಬಸ್ಥರಿಂದಲೇ ವಧುವಿನ ಅಪಹರಣಕ್ಕೆ ಯತ್ನ; ರಾದ್ಧಾಂತವಾದ ಮದುವೆ ಮಂಟಪ
Netizens; 10ನೇ ತರಗತಿ ಪರೀಕ್ಷೆ ಟಾಪರ್ ಟ್ರೋಲ್: ನೆಟ್ಟಿಗರಿಂದ ತರಾಟೆ
MUST WATCH
ಹೊಸ ಸೇರ್ಪಡೆ
ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ: ಜೈಲಿನಿಂದ ಬಿಡುಗಡೆಯಾದ ಆರೋಪಿಗಳಿಗೆ ಹೂಮಾಲೆ ಹಾಕಿ ಸ್ವಾಗತ
Lok Sabha Election: ಏಪ್ರಿಲ್ 28 ರಂದು ಬೆಳಗಾವಿಗೆ ಪ್ರಧಾನಿ ಮೋದಿ
Editorial: ಗುಕೇಶ್ ಗೆಲುವು- ಭಾರತದ ಯುವಶಕ್ತಿಯ ಸಂಕೇತ
AMU: ಇತಿಹಾಸದಲ್ಲೇ ಮೊದಲು… ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯಕ್ಕೆ ಮಹಿಳಾ ಉಪಕುಲಪತಿ ನೇಮಕ
Bengaluru: ಕದಂಬ ಹೋಟೆಲ್ ಸ್ಫೋಟ ಮಾಡುವುದಾಗಿ ಬೆದರಿಕೆ