ಗಂಗಾನದಿಯಲ್ಲಿ ಸಿಲುಕಿಕೊಂಡ ಗಂಗಾ ವಿಲಾಸ್ ಕ್ರೂಸ್ ; ಪ್ರವಾಸಿಗರ ರಕ್ಷಣೆ
Team Udayavani, Jan 16, 2023, 6:53 PM IST
ಛಾಪ್ರಾ: ಪ್ರಧಾನಿ ನರೇಂದ್ರ ಮೋದಿ ಅವರು ಜನವರಿ 13 ರಂದು ವಾರಾಣಸಿಯಲ್ಲಿ ಚಾಲನೆ ನೀಡಿದ ಬಹು ನಿರೀಕ್ಷಿತ ಫ್ಲ್ಯಾಗ್ಶಿಪ್ ಗಂಗಾ ವಿಲಾಸ್ ಕ್ರೂಸ್ ಬಿಹಾರದ ಛಪ್ರಾದಲ್ಲಿ ಗಂಗಾನದಿಯಲ್ಲಿ ನೀರಿನ ಕೊರತೆಯಿಂದಾಗಿ ಸಿಲುಕಿಕೊಂಡಿದೆ.
51 ದಿನಗಳ ಪ್ರಯಾಣಕ್ಕೆ ಹೊರಟ ಐಷಾರಾಮಿ ಕ್ರೂಸ್ ದೋರಿಗಂಜ್ ಪ್ರದೇಶದಲ್ಲಿ ನೀರಿನ ಕೊರತೆಯಿಂದಾಗಿ ಸಿಲುಕಿಕೊಂಡಿದೆ. ಮಾಹಿತಿ ಪಡೆದ ತತ್ ಕ್ಷಣ ಎಸ್ಡಿಆರ್ಎಫ್ ತಂಡವು ಸ್ಥಳಕ್ಕಾಗಮಿಸಿ ಪ್ರವಾಸಿಗರನ್ನು ರಕ್ಷಿಸಿದ್ದಾರೆ. ಚಿರಂದ್ ಸರನ್ ತಲುಪಲು ಪ್ರವಾಸಿಗರಿಗೆ ತೊಂದರೆಯಾಗದಂತೆ ತಂಡವು ಚಿಕ್ಕ ದೋಣಿಗಳಲ್ಲಿ ತಲುಪಿತು. ಚಿರಾಂದ್ನಲ್ಲಿ ಪ್ರವಾಸಿಗರಿಗೆ ಸಾಕಷ್ಟು ವ್ಯವಸ್ಥೆ ಮಾಡಲಾಗಿದೆ ಎಂದು ವ್ಯವಸ್ಥೆ ಮಾಡುವ ತಂಡದ ಭಾಗವಾಗಿರುವ ಛಪ್ರಾದ ಸಿಒ ಸತೇಂದ್ರ ಸಿಂಗ್ ಹೇಳಿದ್ದಾರೆ.
“ಎಸ್ಡಿಆರ್ಎಫ್ ತಂಡವು ಘಾಟ್ನಲ್ಲಿದ್ದು,ನೀರು ಕಡಿಮೆ ಇರುವ ಕಾರಣ ಕ್ರೂಸ್ ದಡಕ್ಕೆ ತರಲು ತೊಂದರೆಯಾಗಿದೆ. ಹೀಗಾಗಿ ಸಣ್ಣ ದೋಣಿಗಳ ಮೂಲಕ ಪ್ರವಾಸಿಗರನ್ನು ಕರೆತರುವ ಪ್ರಯತ್ನ ಮಾಡಲಾಗುತ್ತಿದೆ’ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mumbai 26/11 ದಾಳಿಯ ವಕೀಲ ಉಜ್ವಲ್ ನಿಕಮ್ ಗೆ ಬಿಜೆಪಿ ಟಿಕೆಟ್, ಪೂನಮ್ ಗೆ ಕೊಕ್
Interim Bail: ಹೇಮಂತ್ ಸೋರೆನ್ ಗೆ ಮಧ್ಯಂತರ ಜಾಮೀನು ನಿರಾಕರಿಸಿದ ನ್ಯಾಯಾಲಯ
Mamata Banerjee: ಮತ್ತೆ ಎಡವಿ ಬಿದ್ದ ಮಮತಾ ಬ್ಯಾನರ್ಜಿ… ಕಾಲಿಗೆ ಸಣ್ಣ ಗಾಯ
‘ತಾರಕ್ ಮೆಹ್ತಾ ಕಾ ಉಲ್ಟಾ ಚಶ್ಮಾ’ ನಟ ಗುರುಚರಣ್ ಸಿಂಗ್ ನಾಪತ್ತೆ… ಮೊಬೈಲ್ ಸ್ವಿಚ್ ಆಫ್
W.Bengal; ಟಿಎಂಸಿ ಪಕ್ಷವನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿ: ಸುವೇಂದು ಅಧಿಕಾರಿ