ಗಂಗಾ ನದಿಗೆ ಗಾಜಿನ ಸೇತುವೆ ; ಪ್ರಸ್ತಾವನೆಗೆ ಉತ್ತರ ಪ್ರದೇಶ ಸರಕಾರ ಒಪ್ಪಿಗೆ
Team Udayavani, Feb 7, 2020, 8:30 AM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಹೃಷಿಕೇಶ : ಪವಿತ್ರ ತೀರ್ಥಸ್ಥಳವಾದ ಹೃಷಿಕೇಶದಲ್ಲಿ ಗಂಗಾ ನದಿಗೆ ಅಡ್ಡವಾಗಿ ಗಾಜಿನ ರಸ್ತೆಯಿರುವ ತೂಗು ಸೇತುವೆಯೊಂದನ್ನು ನಿರ್ಮಾಣ ಮಾಡುವ ಪ್ರಸ್ತಾವನೆಗೆ ಉತ್ತರಾಖಂಡ ಸರಕಾರ ಹಸುರು ನಿಶಾನೆ ನೀಡಿದೆ. ಇದು ಸಾಧ್ಯವಾದಲ್ಲಿ, ದೇಶದಲ್ಲೇ ಮೊದಲ ಬಾರಿಗೆ ಗಾಜಿನ ರಸ್ತೆಯಿರುವ ಸೇತುವೆಯೊಂದನ್ನು ನಿರ್ಮಿಸಿದ ಹೆಗ್ಗಳಿಕೆ ಉತ್ತರಾಖಂಡಕ್ಕೆ ಸಿಗಲಿದೆ.
434 ಅಡಿ ಉದ್ದದ ಹೊಸ ಸೇತುವೆ ನಿರ್ಮಾಣಕ್ಕೆ ಪೂರ್ವಭಾವಿಯಾಗಿ, ಹೃಷಿಕೇಶದಲ್ಲಿ ಗಂಗಾನದಿಗೆ ಕಟ್ಟಲಾಗಿದ್ದ ಲಕ್ಷ್ಮಣ್ ಝೂಲಾ ಸೇತುವೆ ಮುಚ್ಚಲಾಗಿದೆ. ಉತ್ತರಾಖಂಡದ ಲೋಕೋಪಯೋಗಿ ಇಲಾಖೆಯು ಈ ಸೇತುವೆ ನಿರ್ಮಾಣದ ಜವಾಬ್ದಾರಿ ಹೊತ್ತಿದ್ದು, ಸೇತುವೆಯ ನೆಲಕ್ಕೆ ಪ್ರತಿ ಚದರಡಿಯಲ್ಲಿ 750 ಕೆಜಿ ತೂಕ ಸಹಿಸಿಕೊಳ್ಳುವಂಥ, 3.5 ಇಂಚಿನಷ್ಟು ದಪ್ಪ ಪಾರದರ್ಶಕ ಗಾಜನ್ನು ಅಳವಡಿಸಲಾಗುತ್ತದೆ. ಅದರಿಂದ, ಆ ಸೇತುವೆ ದಾಟುವ ಯಾತ್ರಿಕರಿಗೆ ತಾವು ಗಂಗಾ ನದಿಯ ಮೇಲೆಯೇ ನಡೆಯುವ ಅನುಭೂತಿ ಉಂಟಾಗಲಿದೆ.