
ಪಣಜಿ: ಪ್ರವಾಸಿಗರು ಪ್ರವಾಸೋದ್ಯಮ ಆನಂದಿಸುವುದರೊಂದಿಗೆ ಮುಂಜಾನೆ ಯೋಗ
Team Udayavani, Jan 23, 2023, 3:04 PM IST

ಪಣಜಿ: ದೇಶ-ವಿದೇಶಗಳಿಂದ ಪ್ರವಾಸಿಗರು ಗೋವಾದ ಕರಾವಳಿ ಪ್ರದೇಶಗಳಿಗೆ ಪ್ರವಾಸೋದ್ಯಮವನ್ನು ಆನಂದಿಸಲು ಬರುತ್ತಾರೆ. ಆದರೆ ಕೆಲವು ಪ್ರವಾಸಿಗರು ಪ್ರವಾಸೋದ್ಯಮವನ್ನು ಆನಂದಿಸುವುದರೊಂದಿಗೆ ತಮ್ಮ ಜೀವನ, ಆರೋಗ್ಯವನ್ನು ಆರೋಗ್ಯಕರ ಮತ್ತು ಮುಕ್ತವಾಗಿಡಲು ಕರಾವಳಿ ಪ್ರದೇಶಗಳಲ್ಲಿ ಮುಂಜಾನೆ ಯೋಗ ಮಾಡುವುದನ್ನು ಕಾಣಬಹುದು.
ಈ ದೃಶ್ಯ ಸದ್ಯ ಗೋವಾದ ಮಾಂದ್ರೆ ಕ್ಷೇತ್ರದ ಮೊರ್ಜಿ, ಅಶ್ವೆ, ಮಾಂದ್ರೆ, ಹರ್ಮಲ್ ಕರಾವಳಿ ಭಾಗಗಳಲ್ಲಿ ಕಂಡು ಬರುತ್ತಿದೆ. ‘ಯೋಗ’ ಭಾರತವು ಜಗತ್ತಿಗೆ ನೀಡಿದ ಕೊಡುಗೆಯಾಗಿದೆ. ಈ ಕುರಿತು ಮಾತನಾಡಿರುವ ರಷ್ಯಾದ ಪ್ರಜೆ ಟಿಟು ಅಲೆಕ್ಸಾಂಡರ್- ಸದಾ ಯೋಗ ಮಾಡಿ ನಿಮ್ಮ ಜೀವನವನ್ನು ಆರೋಗ್ಯಕರವಾಗಿ ಮತ್ತು ಸಂತೋಷದಿಂದ ಇಟ್ಟುಕೊಳ್ಳಿ. ಅಲ್ಲದೆ ವಿವಿಧ ರೋಗಗಳಿಂದ ದೂರವಿರಿ ಎಂದು ಹೇಳಿದ್ದಾರೆ.
ನಿಯಮಿತವಾಗಿ ಯೋಗಾಭ್ಯಾಸ ಮಾಡುವ ವ್ಯಕ್ತಿಯು ಸದೃಢವಾದ ದೇಹ ಮತ್ತು ಸಂತೋಷದ ಮನಸ್ಸನ್ನು ಹೊಂದಿರುತ್ತಾನೆ. ಯೋಗವು ನಮ್ಮ ದೇಹ, ಮನಸ್ಸು ಮತ್ತು ಆತ್ಮವನ್ನು ಒಟ್ಟಿಗೆ ಸಮತೋಲನಗೊಳಿಸುವ ವಿಜ್ಞಾನವಾಗಿದೆ. ಯೋಗವು ಪ್ರಾಚೀನ ಭಾರತದಲ್ಲಿ ಹುಟ್ಟಿಕೊಂಡ ಆಧ್ಯಾತ್ಮಿಕ ಮತ್ತು ಭೌತಿಕ ವಿಜ್ಞಾನವಾಗಿದೆ. ಪ್ರಪಂಚದಾದ್ಯಂತ ಯೋಗಕ್ಕೆ ಪ್ರಾಮುಖ್ಯತೆ ನೀಡಲಾಗಿದೆ. ಅದಕ್ಕಾಗಿಯೇ ಎಲ್ಲರೂ ಬೆಳಿಗ್ಗೆ ಯೋಗ, ಸೂರ್ಯ ನಮಸ್ಕಾರ ಮಾಡುವುದನ್ನು ಕಾಣಬಹುದು.
ಮಾಂದ್ರೆ ಕ್ಷೇತ್ರದ ಕರಾವಳಿ ಪ್ರದೇಶದಲ್ಲಿ ಪ್ರತಿದಿನ ಬೆಳಿಗ್ಗೆ ಜನರು ವಾಕ್ ಮಾಡಲು ಬರುತ್ತಾರೆ. ಕೆಲವರು ಓಡುತ್ತಿರುವುದನ್ನು ಕಂಡರೆ ಇನ್ನು ಕೆಲವರು ವಿವಿಧ ರೀತಿಯ ವ್ಯಾಯಾಮಗಳನ್ನು ಮಾಡುತ್ತಿರುವುದು ಕಂಡುಬರುತ್ತದೆ. ಗೋವಾಕ್ಕೆ ಬಂದ ವಿದೇಶಿ ಪ್ರವಾಸಿಗರು ಯೋಗದಲ್ಲಿ ಮಗ್ನರಾಗಿದ್ದಾರೆ. ಅವರು ಮರಳಿನ ಮೇಲೆ ಚಾಪೆ ಹಾಕಿಕೊಂಡು ಯೋಗ ಮಾಡುತ್ತಾರೆ. ನಿರ್ದಿಷ್ಟವಾಗಿ ಹೇಳುವುದಾದರೆ, ಈ ಪ್ರತಿಯೊಬ್ಬ ಪ್ರವಾಸಿಗರ ಆರೋಗ್ಯ ಮತ್ತು ದೈಹಿಕ ಸ್ಥಿತಿಯು ಬಲವಾಗಿರುವುದು ಕಂಡುಬರುತ್ತದೆ. ಮಹಿಳಾ ಪ್ರವಾಸಿಗರೂ ಯೋಗ ಮಾಡುವ ಮೂಲಕ ಆರೋಗ್ಯಕ್ಕೆ ಆದ್ಯತೆ ನೀಡುವುದು ಕಂಡುಬರುತ್ತಿದೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅವಧೇಶ್ ರೈ ಹತ್ಯೆ ಪ್ರಕರಣ: ಮಾಜಿ ಶಾಸಕ- ಮಾಫಿಯಾ ಡಾನ್ ಮುಕ್ತಾರ್ ಅನ್ಸಾರಿ ದೋಷಿ ಸಾಬೀತು

Video: ಸಿಗರೇಟ್ ವಿಚಾರ; ಕ್ಯಾಂಪಸ್ನಲ್ಲೇ ವಿದ್ಯಾರ್ಥಿಗಳು– ಭದ್ರತಾ ಸಿಬ್ಬಂದಿಗಳ ಮಾರಾಮಾರಿ

ಒಡಿಶಾದಲ್ಲಿ ಮತ್ತೊಂದು ದುರಂತ: ಬರ್ಗಢ್ ನಲ್ಲಿ ಹಳಿ ತಪ್ಪಿದ ರೈಲು

ಅಮಿತ್ ಶಾ ಭೇಟಿಯಾಗಿ ಚರ್ಚೆ ನಡೆಸಿದ ಪ್ರತಿಭಟನಾ ನಿರತ ಕುಸ್ತಿಪಟುಗಳು

LOVE: ಮದುವೆಯಾದ 20 ದಿನದಲ್ಲೇ ಓಡಿಹೋದ ಪತ್ನಿ; ಹಳೆ ಪ್ರೇಮ್ ಕಹಾನಿಗೆ ಸಾಥ್ ಕೊಟ್ಟ ಪತಿ.!
MUST WATCH

Balasore Train Tragedy; ಎರಡೂ ರೈಲುಗಳನ್ನು ದುರಸ್ತಿ ಮಾಡಲಾಗಿದೆ: ಅಶ್ವಿನಿ ವೈಷ್ಣವ್

ಶುಚಿ ರುಚಿಗೆ ಹೆಸರುವಾಸಿ ಅರ್ಚನಾ ಹೋಟೆಲ್ ಇನ್ನಂಜೆ

ಗ್ಯಾರಂಟಿ ಖಚಿತ, ಪ್ರಯಾಣ ಉಚಿತ, ಷರತ್ತು ನಿಯಮಿತ… | ಗ್ಯಾರಂಟಿ ಯೋಜನೆಗಳ ನಿಯಮಗಳು ಇಲ್ಲಿದೆ

Yellur: ಗೋಶಾಲೆ ನಿರ್ಮಾಣಕ್ಕೆ ಮೀಸಲಿಟ್ಟ ಜಾಗದಲ್ಲಿ ಅದಮಾರು ಶ್ರೀಗಳಿಂದ ಗೋಪೂಜೆ

ಕಪ್ಪು ಬಣ್ಣದ ತುಟಿ…ಕೆಂಪು ಬಣ್ಣವಾಗಿ ಕಾಣಲು ಇಲ್ಲಿದೆ ಸರಳ ಮನೆಮದ್ದು
ಹೊಸ ಸೇರ್ಪಡೆ

Radha Searching Ramana Missing review: ಹುಡುಕಾಟದ ಹಿಂದೊಂದು ನೋವು!

ಅವಧೇಶ್ ರೈ ಹತ್ಯೆ ಪ್ರಕರಣ: ಮಾಜಿ ಶಾಸಕ- ಮಾಫಿಯಾ ಡಾನ್ ಮುಕ್ತಾರ್ ಅನ್ಸಾರಿ ದೋಷಿ ಸಾಬೀತು

Video: ಸಿಗರೇಟ್ ವಿಚಾರ; ಕ್ಯಾಂಪಸ್ನಲ್ಲೇ ವಿದ್ಯಾರ್ಥಿಗಳು– ಭದ್ರತಾ ಸಿಬ್ಬಂದಿಗಳ ಮಾರಾಮಾರಿ

Gangavathi: ಪರಿಸರ ಸಮತೋಲನದಿಂದ ಜೀವಿ ಸಂಕುಲಕ್ಕೆ ಸಂರಕ್ಷಣೆ

ಅಗತ್ಯಕ್ಕೆ ತಕ್ಕಂತೆ ವಿದ್ಯುತ್ ಬಳಸಿ: ಜನತೆಗೆ ಸಿದ್ದರಾಮಯ್ಯ ಕರೆ