6 ಕೋಟಿ ರೂ. ಮೌಲ್ಯದ ನೋಟುಗಳು, ಬಂಗಾರದಿಂದ ದೇವಿಗೆ ಅಲಂಕಾರ!
20 ವರ್ಷದಿಂದ ನಡೆದು ಬರುತ್ತಿರುವ ಪದ್ಧತಿ
Team Udayavani, Oct 1, 2022, 6:16 PM IST
ವಿಶಾಖಪಟ್ಟಣ: ದೇಗುಲಗಳಲ್ಲಿ ಚಿನ್ನದಿಂದ, ಹಣದಿಂದ ಅಲಂಕಾರ ಮಾಡುವುದು ಇತ್ತೀಚೆಗೆ ಮಾಮೂಲಿ. ಅಂತಹದ್ದೇ ಒಂದು ಅಲಂಕಾರದ ಕಾರಣದಿಂದ ಆಂಧ್ರಪ್ರದೇಶದ ದೇಗುಲವೊಂದು ಭಾರೀ ಸದ್ದು ಮಾಡಿದೆ.
ಪಶ್ಚಿಮ ಗೋದಾವರಿ ಜಿಲ್ಲೆಯ, ಪೆನುಗೊಂಡದಲ್ಲಿನ ವಾಸವಿ ಕನ್ನಿಕಾ ಪರಮೇಶ್ವರಿ ದೇಗುಲಕ್ಕೆ 135 ವರ್ಷದ ಇತಿಹಾಸ. ಆ ದೇಗುಲಕ್ಕೆ ಈಗ ನವರಾತ್ರಿ ಪ್ರಯುಕ್ತ ಹಣದಿಂದ, ಬಂಗಾರದಿಂದ ಅಲಂಕಾರ ಮಾಡಲಾಗಿದೆ.
ಇದರ ಒಟ್ಟು ಮೌಲ್ಯ 6 ಕೋಟಿ ರೂ.! ವಾಸವಿ ದೇವಿಯ ಮೂರ್ತಿಗೆ 6 ಕೆಜಿ ಬಂಗಾರ, 3 ಕೆಜಿ ಬೆಳ್ಳಿಯಿಂದ ಅಲಂಕಾರ ಮಾಡಲಾಗಿದೆ. ಹಾಗೆಯೇ ಗರ್ಭಗುಡಿಯ ಒಳಗೋಡೆಗಳ ಮೇಲೆ, ನೆಲದ ಮೇಲೆ ನೋಟುಗಳನ್ನು ಅಂಟಿಸಲಾಗಿದೆ.
Visakhapatnam, Andhra | A 135-yr-old temple of Goddess Vasavi Kanyaka Parameswari decorated with currency notes & gold ornaments worth Rs 8 cr for Navratri
“It’s public contribution & will be returned once the puja is over. It won’t go to temple trust,” says the Temple committee pic.twitter.com/1nWfXQwW7c
— ANI (@ANI) September 30, 2022
20 ವರ್ಷದಿಂದ ಈ ಪದ್ಧತಿ ಅನುಸರಿಸಲಾಗುತ್ತದೆ. ಉತ್ಸವ ಮುಗಿದ ಮೇಲೆ ಅಷ್ಟನ್ನೂ ಅದನ್ನು ಕೊಟ್ಟ ಜನರಿಗೆ ಮರಳಿಸಲಾಗುತ್ತದೆ.
ಹೀಗೆ ನೋಟುಗಳನ್ನು ಉತ್ಸವದ ವೇಳೆ ನೀಡುವುದರಿಂದ ಸಂಪತ್ತು ಸಮೃದ್ಧಿಯಾಗುತ್ತದೆ ಎನ್ನುವುದು ಜನರ ನಂಬಿಕೆಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Rajveer Diler: ಹೃದಯಾಘಾತದಿಂದ ಬಿಜೆಪಿ ಸಂಸದ ರಾಜ್ವೀರ್ ದಿಲೇರ್ ನಿಧನ
Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್
LS Polls: ವೇದಿಕೆಯಲ್ಲಿ ಭಾಷಣ ಮಾಡುತ್ತಲೇ ಅಸ್ವಸ್ಥಗೊಂಡ ಕೇಂದ್ರ ಸಚಿವ ನಿತಿನ್ ಗಡ್ಕರಿ
Lok Sabha Election: ಗೋವಾದ ಎರಡೂ ಕ್ಷೇತ್ರದಲ್ಲಿ 16 ಅಭ್ಯರ್ಥಿಗಳು ಕಣಕ್ಕೆ, ಇಲ್ಲಿದೆ ವಿವರ
ಹಳದಿ ಶಾಸ್ತ್ರದ ವೇಳೆ ವಿದ್ಯುತ್ ಸ್ಪರ್ಶ… ಆಸ್ಪತ್ರೆ ದಾರಿ ಮಧ್ಯೆ ಕೊನೆಯುಸಿರೆಳೆದ ವರ
MUST WATCH
ಹೊಸ ಸೇರ್ಪಡೆ
Sagara: ಮಹಿಳೆಯ ಗರ್ಭಕೋಶದಲ್ಲಿದ್ದ 7 ಕೆಜಿ ಗಡ್ಡೆ ಹೊರತೆಗೆದ ವೈದ್ಯರು
Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ
ಮೂಲಭೂತ ಸೌಕರ್ಯ ಕೊಡಿ ಎಂದಿದ್ದೇನೆ ಹೊರತು, ಒಕ್ಕಲೆಬ್ಬಿಸಿ ಎಂದಿಲ್ಲ; ಬೇಳೂರು ಸ್ಪಷ್ಟನೆ
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ