ಕಂಪೆನಿಗಳ ವಿರುದ್ಧ ದೂರು ಕೊಡಲು ಸರಕಾರದ ನೆರವು
Team Udayavani, May 6, 2019, 6:15 AM IST
ಸಾಂದರ್ಭಿಕ ಚಿತ್ರ
ಹೊಸದಿಲ್ಲಿ: ದೊಡ್ಡ ಕಂಪೆನಿಗಳು ಅವ್ಯವಹಾರಗಳಿಂದ ಮೋಸ ಹೋಗುವ ಸಣ್ಣ ಹೂಡಿಕೆದಾರರಿಗೆ ನ್ಯಾಯ ಒದಗಿಸಿ ಕೊಡುವ ನಿಟ್ಟಿನಲ್ಲಿ ನೆರವಾಗಲು ಕೇಂದ್ರ ಸರಕಾರವು ನಿರ್ಧರಿಸಿದೆ.
ಕಂಪೆನಿಗಳ ಕಾಯ್ದೆ ಅಡಿಯಲ್ಲಿ ಕಂಪೆನಿಗಳ ವಿರುದ್ಧ ದಾವೆ ಹೂಡಲು ಅವಕಾಶವಿದೆ.ಆದರೆ ಈ ಕಾನೂನು ಸಮರದ ವೆಚ್ಚವೇ ಮೋಸದ ಮೊತ್ತಕ್ಕಿಂತ ಹೆಚ್ಚಾಗುವಂತಿದ್ದರೆ ಸಾಮಾನ್ಯವಾಗಿ ಹೂಡಿಕೆದಾರರು ದಾವೆ ಹೂಡದೇ ಸುಮ್ಮನಾಗುತ್ತಾರೆ. ಇದಕ್ಕಾಗಿ ಕೇಂದ್ರ ಸರಕಾರವು ಹೂಡಿಕೆದಾರರ ಶಿಕ್ಷಣ, ರಕ್ಷಣೆ ನಿಧಿ ಅಡಿಯಲ್ಲಿ ಸಣ್ಣ ಹೂಡಿಕೆದಾರರಿಗೆ ಹಣಕಾಸು ನೆರವು ನೀಡಲು ನಿರ್ಧರಿಸಿದೆ.
ಶೀಘ್ರದಲ್ಲೇ ಈ ಬಗ್ಗೆ ಸ್ಕೀಮ್ ಜಾರಿಗೊಳಿಸಲಾಗುತ್ತದೆ ಎಂದು ಕಾರ್ಪೊರೇಟ್ ವ್ಯವ ಹಾರಗಳ ಕಾರ್ಯದರ್ಶಿ ಇಂಜೆಟಿ ಶ್ರೀನಿವಾಸ್ ಹೇಳಿದ್ದಾರೆ. ವಿದೇಶ ಗಳಲ್ಲಿ ಕ್ಲಾಸ್ ಆಕ್ಷನ್ ದಾವೆ ಎಂದು ಕರೆಯಲಾಗುವ ಇಂತಹ ದಾವೆಯನ್ನು ಮೋಸ ಹೋದ ಹಲವು ಸಣ್ಣ ಹೂಡಿಕೆದಾರರು ಒಟ್ಟಾಗಿ ದಾಖಲಿಸುತ್ತಾರೆ. ಶೀಘ್ರದಲ್ಲೇ ಗುಂಪಿನ ಸದಸ್ಯರ ಸಂಖ್ಯೆ, ಕಂಪೆನಿಯಲ್ಲಿ ಈ ಗುಂಪು ಹೊಂದಿ ರಬೇಕಾದ ಪಾಲು ದಾರಿಕೆ ಪ್ರಮಾಣವನ್ನು ನಿಗದಿಸಲಾಗುತ್ತದೆ ಎಂದು ಅವರು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕಾಂಗ್ರೆಸ್ ಗೆ ಆಘಾತ; ರಾಜೀನಾಮೆ ನೀಡಿದ ದೆಹಲಿ ಕಾಂಗ್ರೆಸ್ ಮುಖ್ಯಸ್ಥ
Mahadev Betting App Case; ಮುಂಬೈ ಪೊಲೀಸರಿಂದ ನಟ ಸಾಹಿಲ್ ಖಾನ್ ಬಂಧನ
Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ
Congress ಗೆದ್ದರೆ ದೇಶದಲ್ಲಿ ಗೋ ಹತ್ಯೆ ಖಚಿತ: ಯೋಗಿ ಆದಿತ್ಯನಾಥ್
Goa; ದಿನಕ್ಕೆ ಒಂದೇ ಖರ್ಜೂರ ತಿನ್ನುತ್ತಿದ್ದ ಇಬ್ಬರು ಸಹೋದರರು ನಿಧನ