ಪ್ರವಾಸಿ ವಾಹನಗಳ ಶುಲ್ಕ ಇಳಿಕೆಗೆ ಪ್ರಸ್ತಾಪ; ಕೇಂದ್ರದಿಂದ ಹೊಸ ಕರಡು ನಿಯಮಗಳ ಬಿಡುಗಡೆ
Team Udayavani, Nov 16, 2022, 6:30 AM IST
ನವದೆಹಲಿ: ಹೆಚ್ಚು ವರ್ಗೀಕರಣ ಇರುವ ಪ್ರವಾಸಿ ವಾಹನಗಳು, ಕಡಿಮೆ ಪ್ರಯಾಣಿಕರ ಸಾಗಿಸುವ ವಾಹನಗಳಿಗೆ ಪರವಾನಗಿ ಶುಲ್ಕ ಇಳಿಕೆ ಸೇರಿದಂತೆ ಹಲವಾರು ಸುಧಾರಣಾವಾದಿ ಕರಡು ನಿಯಮಗಳನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ.
ದೇಶದ ಪ್ರವಾಸೋದ್ಯಮ ಕ್ಷೇತ್ರಕ್ಕೆ ಹೆಚ್ಚು ಒತ್ತು ನೀಡುವ ನಿಟ್ಟಿನಲ್ಲಿ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ ಕರಡು ನಿಯಮಗಳನ್ನು ಪ್ರಕಟಿಸಿದೆ.
ಹೊಸ ನಿಯಮಗಳಿಗೆ ಅಂಗೀಕಾರ ದೊರಕಿದಲ್ಲಿ ಅಖಿಲ ಭಾರತ ಪ್ರವಾಸಿ ವಾಹನ (ಪರವಾನಗಿ )ನಿಯಮಗಳು 2021ರ ಬದಲಾಗಿ ಜಾರಿಯಾಗಲಿದೆ ಎಂದು ಸಾರಿಗೆ ಸಚಿವಾಲಯ ತಿಳಿಸಿದೆ.
ಪ್ರವಾಸಿ ಕ್ಷೇತ್ರದ ಉದ್ದಿಮೆದಾರರು ಮತ್ತು ಇತರರು ಕೇಂದ್ರ ಸರ್ಕಾರದ ಹೊಸ ಪ್ರಸ್ತಾಪಕ್ಕೆ ಆಕ್ಷೇಪಗಳು ಅಥವಾ ಸಲಹೆಗಳನ್ನು ಆಹ್ವಾನಿಸಲಾಗಿದೆ. ಅದನ್ನು Joint Secretary (MVL), Ministry of Road Transport and Highways, Transport Bhawan, Parliament Street, New Delhi- 110001 ಅಂಚೆ ಮೂಲಕ, ಇ-ಮೇಲ್ [email protected].ಗೆ ಕಳುಹಿಸಬೇಕು ಎಂದೂ ತಿಳಿಸಿದೆ.
ಉದ್ದೇಶಿತ ಬದಲಾವಣೆಗಳು ಹೀಗಿವೆ:
– ಪ್ರವಾಸಿ ವಾಹನಗಳಿಗೆ ಅಖಿಲ ಭಾರತ ವ್ಯಾಪ್ತಿಯಲ್ಲಿ ಪರವಾನಗಿ ನೀಡುವ ವಿಧಾನದಲ್ಲಿ ಸರಳತೆ ಅನುಸರಿಸಲು ಒತ್ತು. ದೇಶಕ್ಕೆ ಅನ್ವಯವಾಗುವಂತೆ ಪ್ರವಾಸಿ ವಾಹನಗಳಿಗೆ ಪರವಾನಗಿ ನೀಡುವ ನೀಡುವ ಅಂಶ ಸ್ವತಂತ್ರವಾಗಿ ಇರಿಸಲಾಗಿದೆ.
– ಹತ್ತಕ್ಕಿಂತ ಕಡಿಮೆ ಮಂದಿ ಪ್ರಯಾಣಿಸುವ ವಾಹನಗಳಿಗೆ ಪರವಾನಗಿ ನೀಡುವಾಗ ಪರವಾನಗಿ ಶುಲ್ಕ ಇಳಿಕೆ ಮಾಡುವ ಪ್ರಸ್ತಾಪ. ಇದರಿಂದಾಗಿ ಸಣ್ಣ ಪ್ರಮಾಣದ ಪ್ರವಾಸಿ ವಾಹನಗಳನ್ನು ನಿರ್ವಹಿಸುವವರಿಗೆ ಆರ್ಥಿಕವಾಗಿ ನೆಮ್ಮದಿ ಸಿಗಲಿದೆ.
– ಹೆಚ್ಚಿನ ಪ್ರಮಾಣದಲ್ಲಿ ವಿದ್ಯುತ್ ಚಾಲಿತ ವಾಹನಗಳ ಬಳಕೆಗೆ ಉತ್ತೇಜನ. ಇದರಿಂದ ಪ್ರವಾಸಿ ವಾಹನಗಳನ್ನು ನಿರ್ವಹಿಸುವವರಿಗೆ ಹೆಚ್ಚಿನ ವೆಚ್ಚ ಇಲ್ಲದೆ ನಿರ್ವಹಣೆಗೆ ಅನುಕೂಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು
ಕಾಂಗ್ರೆಸ್ಗೆ ಶಾಕ್: ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಭ್ಯರ್ಥಿ
Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು
ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು
ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ
MUST WATCH
ಹೊಸ ಸೇರ್ಪಡೆ
Chitradurga; ನ್ಯಾಯಾಲಯಕ್ಕೆ ಶರಣಾದ ಮುರುಘಾ ಶ್ರೀ
Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು
Manvita Kamath; ಮದುವೆ ನಂತರವೂ ಸಿನಿಮಾ ಮಾಡ್ತೀನಿ ಎಂದ ಟಗರುಪುಟ್ಟಿ
Hubli; ರಾಜಕಾರಣಕ್ಕಾಗಿ ರಾಜ್ಯವನ್ನು ಬಳಸಿಕೊಂಡಿದ್ದೆ ಜೋಶಿ ಸಾಧನೆ: ವಿನಯ ಕುಮಾರ್ ಸೊರಕೆ
Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ