ನಕ್ಸಲ್ ಪಿಡುಗು ಮಟ್ಟ ಹಾಕಲು ಹೊಸ ನೀತಿ: ಕೇಂದ್ರಕ್ಕೆ ಕಾಂಗ್ರೆಸ್ ಆಗ್ರಹ
Team Udayavani, Jun 15, 2019, 3:46 PM IST
ಹೊಸದಿಲ್ಲಿ : ಜಾರ್ಖಂಡ್ ನಲ್ಲಿ ಈಚೆಗೆ ಐವರು ಪೊಲೀಸರನ್ನು ಬಲಿಪಡೆದಿರುವ ನಕ್ಸಲ್ ಪಿಡುಗನ್ನು ಪರಿಣಾಮಕಾರಿಯಾಗಿ ಕೊನೆಗೊಳಿಸಲು ಕೇಂದ್ರ ಸರಕಾರ ಹೊಸ ಕರಡು ನೀತಿಯನ್ನು ಸಿದ್ಧಪಡಿಸುವ ಅಗತ್ಯವಿದೆ ಎಂದು ಕಾಂಗ್ರೆಸ್ ಹೇಳಿದೆ.
ಜಾರ್ಖಂಡ್-ಬಂಗಾಲ ಗಡಿ ಸಮೀಪದ ಸೆರಾಯ್ಕೇಲಾ-ಖರ್ಸವಾನ್ ನಿನ್ನೆ ಶುಕ್ರವಾರ ಮಾವೋ ಉಗ್ರರು ಹೊಂಚು ದಾಳಿ ನಡೆಸಿ ಐವರು ಪೊಲೀಸರನ್ನು ಬಲಿಪಡೆದ ಕೃತ್ಯ ಖಂಡನಾರ್ಹ ಎಂದು ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೇವಾಲಾ ಇಂದು ಶನಿವಾರ ಹೇಳಿದರು.
ನಕ್ಸಲ್ವಾದದ ಹೇಡಿತನದ ಮುಖ ಜಾರ್ಖಂಡ್ನಲ್ಲೀಗ ವ್ಯಾಪಿಸುತ್ತಿದೆ; ದೇಶದ ಸರಕಾರ ನಕ್ಸಲ್ ಪಿಡುಗನ್ನು ಮಟ್ಟ ಹಾಕಲು ಹೊಸ ಕರಡು ನೀತಿಯನ್ನು ಸಿದ್ಧಪಡಿಸಬೇಕಿದೆ ಎಂದು ಸುರ್ಜೇವಾಲ ಟ್ವೀಟ್ ಮಾಡಿದ್ದಾರೆ.