ಪತ್ರಕರ್ತರ ಖರೀದಿ ಸಾಧ್ಯವಾಗದಿದ್ದಾಗ ಚಾನೆಲ್ಗಳನ್ನೇ ಖರೀದಿಸುತ್ತಾರೆ: ಕನ್ಹಯ್ಯ ಕುಮಾರ್
Team Udayavani, Dec 3, 2022, 4:45 PM IST
ವಡ್ಗಾಮ್: ಪತ್ರಕರ್ತರ ಖರೀದಿ ಸಾಧ್ಯವಾಗದಿದ್ದಾಗ ಚಾನೆಲ್ಗಳನ್ನೇ ಖರೀದಿಸುತ್ತಾರೆ ಎಂದು ಕಾಂಗ್ರೆಸ್ ನಾಯಕ ಕನ್ಹಯ್ಯ ಕುಮಾರ್ ಗುಜರಾತ್ನಲ್ಲಿ ಕೇಂದ್ರ ಸರಕಾರದ ವಿರುದ್ದ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಗುಜರಾತ್ ವಿಧಾನಸಭಾ ಚುನಾವಣೆಯ ವಡ್ಗಾಮ್ ಕ್ಷೇತ್ರದ ಅಭ್ಯರ್ಥಿ ಜಿಗ್ನೇಶ್ ಮೇವಾನಿ ಪರ ಪ್ರಚಾರದ ವೇಳೆ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ನಾಯಕ ಕನ್ಹಯ್ಯ ಕುಮಾರ್ ಬಿಜೆಪಿ ವಿರುದ್ಧ ಹಲವು ವಿಷಯಗಳ ಕುರಿತು ತೀವ್ರ ವಾಗ್ದಾಳಿ ನಡೆಸಿದರು. ನನಗೆ ಗುಜರಾತಿ ಗೊತ್ತಿಲ್ಲ ಆದರೆ ಜನರನ್ನು ಅರ್ಥ ಮಾಡಿಕೊಳ್ಳುವಷ್ಟು ಅರ್ಥವಾಗಿದೆ. ನಾನು ಏನನ್ನೂ ಮಾರಲು ಗುಜರಾತ್ಗೆ ಬಂದಿಲ್ಲ’ ಎಂದರು.
”ರಾಷ್ಟ್ರೀಯ ಸುದ್ದಿ ಮಾಧ್ಯಮವೊಂದು ಮಾರಾಟಕ್ಕಿದೆ ಎಂದರೆ ಏನು?,ಪತ್ರಕರ್ತರ ಖರೀದಿ ಸಾಧ್ಯವಾಗದಿದ್ದಾಗ ಚಾನೆಲ್ಗಳನ್ನೇ ಖರೀದಿಸುತ್ತಾರೆ. ಉದಾಹರಣೆಗೆ, ಶಾಸಕರು ಪಕ್ಷಗಳನ್ನು ಬದಲಾಯಿಸಿದಾಗ, ಜನರು ಖರೀದಿದಾರ ಮತ್ತು ಮಾರಾಟಗಾರ ಇಬ್ಬರನ್ನೂ ಖಂಡಿಸುತ್ತಾರೆ. ಇದರಲ್ಲೂ ಅದೇ ರೀತಿ ಇರಬೇಕು” ಎಂದರು.
‘ಜಿಗ್ನೇಶ್ ಮೇವಾನಿ ಮೇಲೆ ಅಸ್ಸಾಂ ಪೊಲೀಸರು ಕೈಗೊಂಡಿರುವ ಕ್ರಮವನ್ನು ಉಲ್ಲೇಖಿಸಿದ ಕನ್ಹಯ್ಯಾ ಕುಮಾರ್, ಗುಜರಾತ್ ಮಾತ್ರವಲ್ಲ, ಅಸ್ಸಾಂ ಪೊಲೀಸರು ಕೂಡ ನಮ್ಮನ್ನು ಕರೆಯುತ್ತಿದ್ದಾರೆ. ಗೌರವಾನ್ವಿತ ಪ್ರಧಾನಿ ಮೋದಿ ಜಿ ಅವರ ಆಶೀರ್ವಾದ ಮತ್ತು ಜೈ ಶಾ ಅವರ ತಂದೆಯ ಪ್ರೀತಿ ಮುಂದುವರಿದರೆ ಅಸ್ಸಾಂ ಏನು 60 ದೇಶಗಳ ಪೊಲೀಸರು ಕೂಡ ನಮ್ಮನ್ನು ಹುಡುಕುತ್ತಾರೆ’ ಎಂದರು.
ಕಳೆದ ಬಾರಿ ಮೇವಾನಿ ಅವರು ಕಾಂಗ್ರೆಸ್ ಬೆಂಬಲದಿಂದ ಗೆದ್ದಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ex-IPS officer ಸಂಜೀವ್ ಭಟ್ಗೆ 1996 ರ ಡ್ರಗ್ಸ್ ಕೇಸ್ ನಲ್ಲಿ 20 ವರ್ಷ ಜೈಲು ಶಿಕ್ಷೆ
Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ
Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ
Mangaluru;ಮನೆಯಲ್ಲೇ ಅಕ್ರಮ ಕಸಾಯಿಖಾನೆ:ಗೋಮಾಂಸ ಸಹಿತ ಮೂವರ ಬಂಧನ
Kolkata ವಿಮಾನ ನಿಲ್ದಾಣದಲ್ಲಿ ಸ್ವಯಂ ಗುಂಡಿಟ್ಟುಕೊಂಡು ಯೋಧ ಆತ್ಮಹತ್ಯೆ
MUST WATCH
ಹೊಸ ಸೇರ್ಪಡೆ
Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್, ಸ್ಟೋಯಿನಿಸ್, ಅಗರ್ ಹೊರಕ್ಕೆ
ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್
Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್
Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್ಗಳು: ಪ್ರವಾಸಿಗರಿಗೆ ಭಯ
IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್ಗಳ ಜಯ