Hyderabad: 1.25 ಕೋಟಿ ರೂ. ಗೆ ಹರಾಜಾಯಿತು ಗಣಪತಿಯ ಲಡ್ಡು ಪ್ರಸಾದ
Team Udayavani, Sep 28, 2023, 3:43 PM IST
ಹೈದರಾಬಾದ್: ಪ್ರಸಿದ್ಧ ಬಾಲಾಪುರ ಲಡ್ಡು ಗುರುವಾರ ದಾಖಲೆಯ 27 ಲಕ್ಷ ರೂ.ಗೆ ಹರಾಜಾಗಿದ್ದರೆ, ಸ್ಯಾಟಲೈಟ್ ಟೌನ್ ಬಂಡ್ಲಗುಡ ಜಾಗೀರ್ 1.25 ಕೋಟಿ ರೂ. ಗೆ ಲಡ್ಡು ಪ್ರಸಾದ ಹರಾಜಾಗಿದೆ.
21 ಕೆಜಿ ತೂಕದ ಬಾಲಾಪುರ ಲಡ್ಡುವನ್ನು ಈ ವರ್ಷ ತುರ್ಕಯಂಜಾಲ್ನ ದಾಸರಿ ದಯಾನಂದ ರೆಡ್ಡಿ ಪಡೆದುಕೊಂಡಿದ್ದಾರೆ. ವಿಎಲ್ಆರ್ ಬಿಲ್ಡರ್ಸ್ನ ವೆಂಗೇಟಿ ಲಕ್ಷ್ಮ ರೆಡ್ಡಿ ಅವರು ಕಳೆದ ವರ್ಷಕ್ಕೆ 24.6 ಲಕ್ಷಕ್ಕೆ ಲಡ್ಡು ಪಡೆದುಕೊಂಡಿದ್ದರು.
ಹರಾಜಿನಲ್ಲಿ 29 ಮಂದಿ ಭಾಗವಹಿಸಿದ್ದರು. ಕಳೆದ ವರ್ಷದ ಹರಾಜಿನಲ್ಲಿ ಎರಡನೇ ಅತಿ ಹೆಚ್ಚು ಬಿಡ್ ಮಾಡಿದ ದಾಸರಿ ದಯಾನಂದ ರೆಡ್ಡಿ, ಲಡ್ಡು ಗೆದ್ದಿರುವುದು ಹೆಮ್ಮೆ ಮತ್ತು ಸಂತೋಷದ ಕ್ಷಣ ಮತ್ತು ಆಶೀರ್ವಾದ ಎಂದು ಬಣ್ಣಿಸಿದರು. ಲಡ್ಡುವನ್ನು ಪೋಷಕರಿಗೆ ಅರ್ಪಿಸುವುದಾಗಿ ತಿಳಿಸಿದರು.
ಇದನ್ನೂ ಓದಿ:Animal teaser ರಿಲೀಸ್: ʼಡಾರ್ಲಿಂಗ್ʼ ಎಂದು ರಶ್ಮಿಕಾಗೆ ಶುಭಕೋರಿದ ದೇವರಕೊಂಡ
ಚಿನ್ನದ ಲಡ್ಡು ಅಥವಾ ಲಡ್ಡು ಪ್ರಸಾದ ಹರಾಜನ್ನು ಬಾಲಾಪುರ ಗಣೇಶ ಉತ್ಸವ ಸಮಿತಿ ನಡೆಸಿತು. ಹುಸೇನಸಾಗರ ಕೆರೆಯ ಕಡೆಗೆ 19 ಕಿಮೀ ಉದ್ದದ ಗಣೇಶ ಶೋಭಾ ಯಾತ್ರೆ ನಡೆಸಲಾಯಿತು.
1994ರಿಂದ ಈ ಲಡ್ಡು ಪ್ರಸಾದ ಹರಾಜು ನಡೆಯುತ್ತಿದೆ. ಮೊದಲ ಹರಾಜಿನಲ್ಲಿ ಲಡ್ಡು 450 ರೂ ಗೆ ಬಿಕರಿಯಾಗಿತ್ತು. 2021ರಲ್ಲಿ 18.9 ಲಕ್ಷ ರೂ ಗೆ ಲಡ್ಡು ಹರಾಜಾಗಿತ್ತು. ಲಡ್ಡು ಪ್ರಸಾದವು ಉತ್ತಮ ಆರೋಗ್ಯ, ಸಂಪತ್ತು ಮತ್ತು ಸಮೃದ್ಧಿಯನ್ನು ತರುತ್ತದೆ ಎಂದು ನಂಬಲಾಗಿದೆ. ಹೀಗಾಗಿ ಪ್ರತೀ ವರ್ಷ ಕಳೆದಂತೆ ಸಂಪ್ರದಾಯವು ಜನಪ್ರಿಯವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mahadev Betting App Case; ಮುಂಬೈ ಪೊಲೀಸರಿಂದ ನಟ ಸಾಹಿಲ್ ಖಾನ್ ಬಂಧನ
Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ
Congress ಗೆದ್ದರೆ ದೇಶದಲ್ಲಿ ಗೋ ಹತ್ಯೆ ಖಚಿತ: ಯೋಗಿ ಆದಿತ್ಯನಾಥ್
Goa; ದಿನಕ್ಕೆ ಒಂದೇ ಖರ್ಜೂರ ತಿನ್ನುತ್ತಿದ್ದ ಇಬ್ಬರು ಸಹೋದರರು ನಿಧನ
Ban; ಎಂಡಿಎಚ್, ಎವರೆಸ್ಟ್ ಮಸಾಲೆಗಳ ಮೇಲೆ ಅಮೆರಿಕ ಕೂಡ ನಿಷೇಧ?