ಮೊಬೈಲ್‌ ಬಳಸಿ ದೃಷ್ಟಿ ಕಳೆದುಕೊಂಡ ಮಹಿಳೆ:ಏನಿದು‌ ಸ್ಮಾರ್ಟ್ ಫೋನ್ ವಿಷನ್ ಸಿಂಡ್ರೋಮ್

ಹೆಚ್ಚು ಹೊತ್ತು ಮೊಬೈಲ್‌ ಬಳಸಿದರೆ ಕಣ್ಣಿಗೆ ಎಷ್ಟು ಹಾನಿಯಾಗುತ್ತದೆ ಎಂಬುದನ್ನು ಎಂದಾದರೂ ಯೋಚಿಸಿದ್ದೀರಾ?

Team Udayavani, Feb 9, 2023, 4:52 PM IST

tdy-1

ಹೈದರಾಬಾದ್: ನಮಗೆ ತಿಳಿದೋ ಅಥವಾ ತಿಳಿಯದೆಯೋ ನಾವು ದಿನ ನಿತ್ಯ ಹೆಚ್ಚು ಹೊತ್ತು ಮೊಬೈಲ್‌ ಸ್ಕ್ರೋಲ್‌ ಮಾಡಿಯೇ ಸಮಯ ಕಳೆಯುತ್ತೇವೆ. ಇತ್ತೀಚೆಗಿನ ಯುವ ಜನರು ರಾತ್ರಿ ಹೊತ್ತು ಮೊಬೈಲ್‌ ಬಳಸುವ ಹವ್ಯಾಸವನ್ನು ಹೆಚ್ಚಾಗಿಸಿಕೊಂಡಿದ್ದಾರೆ.

ರಾತ್ರಿ ಕೋಣೆಯ ಲೈಟ್‌ ಆಫ್‌ ಮಾಡಿದರೂ ಹೊದಿಕೆಯ ಒಳಗೆ ಇಂಟರ್‌ ನೆಟ್‌ ಜಗತ್ತಿನ ಕೌತುಕವನ್ನು ಬ್ರೌಸ್‌ ಮಾಡುತ್ತಾ ಮಧ್ಯರಾತ್ರಿಯನ್ನು ಕಳೆಯುತ್ತೇವೆ. ಹೀಗೆ ಹೆಚ್ಚು ಹೊತ್ತು ಮೊಬೈಲ್‌ ಬಳಸಿದರೆ ಕಣ್ಣಿಗೆ ಎಷ್ಟು ಹಾನಿಯಾಗುತ್ತದೆ ಎಂಬುದನ್ನು ಎಂದಾದರೂ ಯೋಚಿಸಿದ್ದೀರಾ?

ಹೈದಾರಾಬಾದ್‌ ಮೂಲದ ವೈದ್ಯ ಡಾ.ಸುಧೀರ್‌ ಮಾಡಿರುವ ಟ್ವೀಟ್‌ ವೈರಲ್‌ ಆಗಿದೆ. ಕೋಣೆಯ ಲೈಟ್‌ ಆಫ್‌ ಮಾಡಿದ ಬಳಿಕವೂ ಮಹಿಳೆಯೊಬ್ಬರು ಹೆಚ್ಚು ಹೊತ್ತು ರಾತ್ರಿ ಮೊಬೈಲ್‌ ಬಳಸಿದ ಪರಿಣಾಮ ಕಣ್ಣಿನ ದೃಷ್ಟಿಗೆ ಹಾನಿ ಮಾಡಿಕೊಂಡಿದ್ದಾರೆ ಎಂದು ಸುಧೀರ್‌ ಟ್ವೀಟ್‌ ನಲ್ಲಿ ಹೇಳಿದ್ದಾರೆ.

ಮಂಜು ಎಂಬ ಮಹಿಳೆ ಕಣ್ಣಿನಲ್ಲಿ ಫ್ಲೋಟರ್ಸ್‌ ಇರುವ ಲಕ್ಷಣ (ಕಣ್ಣು ಮಂಜಾದಂತೆ ಆಗುವುದು ಅಥವಾ ಕಣ್ಣಿನಲ್ಲಿ ಏನೋ ಚಲಿಸದಂತಹ ಅನುಭವವಾಗುವುದು) ಕಂಡು ಬಂದಿದೆ. ಇದನ್ನು ಪರೀಕ್ಷಿಸಿದ ಬಳಿಕ ಆಕೆ ಸ್ಮಾರ್ಟ್ ಫೋನ್ ವಿಷನ್ ಸಿಂಡ್ರೋಮ್ (smartphone vision syndrom) ನಿಂದ ಬಳಲುತ್ತಿರುವುದು ತಿಳಿಯಿತು. ಇದು ಹೆಚ್ಚಾದರೆ ಕುರುಡುತನ ಸೇರಿದಂತೆ ಕಣ್ಣಿನ ಸಂಬಂಧಿತ ಸಮಸ್ಯೆಗಳಿಗೆ ಕಾರಣವಾಗಲಿದೆ.

ಇದಕ್ಕೆ ಕಾರಣವನ್ನು ತಿಳಿಸಿರುವ ವೈದ್ಯ ಡಾ.ಸುಧೀರ್‌ , ರಾತ್ರಿ ವೇಳೆಯಲ್ಲಿ ಹೆಚ್ಚು ಹೊತ್ತು ಮೊಬೈಲ್‌ ಬಳಸಿದರೆ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಮಂಜು ಕಳೆದ ಒಂದೂವರೆ ವರ್ಷದಿಂದ ರಾತ್ರಿ ಹೊತ್ತು ಮೊಬೈಲ್‌ ಬ್ರೌಸ್‌ ಮಾಡುವ ಹವ್ಯಾಸವನ್ನು ಇಟ್ಟುಕೊಂಡಿದ್ದರು. ಬ್ಯೂಟಿಷಿಯನ್‌ ಕೆಲಸವನ್ನು ಬಿಟ್ಟ ಬಳಿಕ ಅವರ ವಿಶೇಷ ಚೇತನ ಮಗುವನ್ನು ನೋಡಿಕೊಳ್ಳುವ ಸಲುವಾಗಿ ರಾತ್ರಿ ಹೊತ್ತು ಮೊಬೈಲ್‌ ಬಳಸುತ್ತಿದ್ದರು. ಲೈಟ್‌ ಆಫ್ ಮಾಡಿದ ಬಳಿಕವೂ ಸುಮಾರು 2 ಗಂಟೆ ಕಾಲ ಮೊಬೈಲ್‌ ಬಳಸುತ್ತಿದ್ದರು ಎಂದು ಡಾ.ಸುಧೀರ್‌ ಹೇಳಿದ್ದಾರೆ.

ಅದೃಷ್ಟಕ್ಕೆ ಸರಿಯಾದ ಸಮಯಕ್ಕೆ ವೈದ್ಯರ ಬಳಿ ಬಂದ ಕಾರಣ, ಮಂದವಾಗಿದ್ದ ಮಂಜು ಅವರ ದೃಷ್ಟಿ ಮತ್ತೆ ಸರಿಯಾಗಿದೆ. ಮೊಬೈಲ್‌ ಬಳಕೆಯ ಹೊತ್ತನ್ನು ಕಡಿಮೆ ಮಾಡಿದ್ದಾರೆ. ವೈದ್ಯರು ಹೇಳಿದಂತೆ ಅವರು ನಿಯಮವನ್ನು ಪಾಲಿಸಿದ್ದಾರೆ ಎಂದು ಡಾ. ಸುಧೀರ್‌ ಹೇಳಿದ್ದಾರೆ.

2021 ರಲ್ಲಿ ಮೊಬೈಲ್ ಅನಾಲಿಟಿಕ್ಸ್ ಸಂಸ್ಥೆ, ಡಾಟಾ.ಎಐ ನಡೆಸಿರುವ ಅಧ್ಯಯನದ ಪ್ರಕಾರ ಒಬ್ಬ ವ್ಯಕ್ತಿ ಪ್ರತಿನಿತ್ಯ 4.7 ಗಂಟೆ ಮೊಬೈಲ್‌ ಬಳಸುತ್ತಾನೆ. ಇದು 2020 ರಲ್ಲಿ 4.5 ಗಂಟೆಯಿತ್ತು. 2019 ರಲ್ಲಿ 3.7 ಗಂಟೆಯಿತ್ತು.

ಟಾಪ್ ನ್ಯೂಸ್

1-sadadasdasd

ನೂತನ ಸಂಸತ್ ಭವನಕ್ಕೆ ಪ್ರಧಾನಿ ದಿಢೀರ್ ಭೇಟಿ; ಕಾಮಗಾರಿಗಳ ಪರಿಶೀಲನೆ

ಬಾಲಾಜಿ ಸಕ್ಕರೆ ಕಾರ್ಖಾನೆ ಮೇಲೆ 2ನೇ ಬಾರಿ ಅಧಿಕಾರಿಗಳ ದಾಳಿ: ಲಕ್ಷಾಂತರ ಮೌಲ್ಯದ ಸೊತ್ತು ವಶ

ಬಾಲಾಜಿ ಸಕ್ಕರೆ ಕಾರ್ಖಾನೆ ಮೇಲೆ 2ನೇ ಬಾರಿ ಅಧಿಕಾರಿಗಳ ದಾಳಿ: ಲಕ್ಷಾಂತರ ಮೌಲ್ಯದ ಸೊತ್ತು ವಶ

ದೆಹಲಿಯಲ್ಲಿ ಗುಡುಗು ಸಹಿತ ಮಳೆ: 17 ವಿಮಾನಗಳ ಮಾರ್ಗ ಬದಲಾವಣೆ

ದೆಹಲಿಯಲ್ಲಿ ಗುಡುಗು ಸಹಿತ ಮಳೆ: 17 ವಿಮಾನಗಳ ಮಾರ್ಗ ಬದಲಾವಣೆ

1-wwqeq3

ಮೇರು ಗಾಯಕ; ಕಿರಾಣಾ ಘರಾಣಾ ಶೈಲಿಯ ಕೊಂಡಿ ಜಯತೀರ್ಥ ಮೇವುಂಡಿ

ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ: ಅಪರಾಧಿಗೆ 20 ವರ್ಷ ಕಠಿಣ ಜೈಲು ಶಿಕ್ಷೆ

ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ: ಅಪರಾಧಿಗೆ 20 ವರ್ಷ ಕಠಿಣ ಜೈಲು ಶಿಕ್ಷೆ

shashikala-jolle

ನೀತಿ ಸಂಹಿತೆ ಉಲ್ಲಂಘನೆ: ಸಚಿವೆ ಶಶಿಕಲಾ ಜೊಲ್ಲೆ ವಿರುದ್ಧ ಎಫ್ ಐಆರ್

ಉಡುಪಿ: ನಕಲಿ ಪತ್ರಕರ್ತರ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹಿಸಿ ಎಸ್ಪಿಗೆ ಮನವಿ

ಉಡುಪಿ: ನಕಲಿ ಪತ್ರಕರ್ತರ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹಿಸಿ ಎಸ್ಪಿಗೆ ಮನವಿ



ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-sadadasdasd

ನೂತನ ಸಂಸತ್ ಭವನಕ್ಕೆ ಪ್ರಧಾನಿ ದಿಢೀರ್ ಭೇಟಿ; ಕಾಮಗಾರಿಗಳ ಪರಿಶೀಲನೆ

ದೆಹಲಿಯಲ್ಲಿ ಗುಡುಗು ಸಹಿತ ಮಳೆ: 17 ವಿಮಾನಗಳ ಮಾರ್ಗ ಬದಲಾವಣೆ

ದೆಹಲಿಯಲ್ಲಿ ಗುಡುಗು ಸಹಿತ ಮಳೆ: 17 ವಿಮಾನಗಳ ಮಾರ್ಗ ಬದಲಾವಣೆ

1-qwqe-wqewqe

ರಾಮನವಮಿ: ದೇವಾಲಯದ ಬಾವಿಯ ಸಿಮೆಂಟ್ ಹಾಸು ಕುಸಿದು 13 ಭಕ್ತರ ಮೃತ್ಯು

arrest 3

ಹೆತ್ತವರನ್ನೇ ಹತ್ಯೆಗೈದಿದ್ದ 15ರ ಬಾಲಕಿ ಖಾಕಿ ಬಲೆಗೆ

1-asd-adas-d

ರಾಜಕೀಯ ವಿವಾದ; ಮೊಸರು ಪ್ಯಾಕೆಟ್‌ಗಳ ಮೇಲೆ ಪ್ರಾದೇಶಿಕ ಹೆಸರು!

MUST WATCH

udayavani youtube

ಸ್ನೇಕ್ ಶಾಮ್ ಹಾವುಗಳ ರಕ್ಷಣೆಗೆ ಮುಂದಾಗಲು ಇದೇ ಕಾರಣ | ಸ್ನೇಕ್ ಶ್ಯಾಮ್ ಮನದಾಳದ ಮಾತು

udayavani youtube

ಎವರೆಸ್ಟ್ ಹತ್ತುವವರ ಊಟ ತಿಂಡಿ ಕ್ರಮ ಹೇಗಿರುತ್ತೆ ನೋಡಿ !

udayavani youtube

ಮೈಸೂರಿಗೆ ಬಂದವರು ಇಲ್ಲಿಗೊಮ್ಮೆ ಭೇಟಿ ಕೊಡಲೇಬೇಕು

udayavani youtube

ಜಗತ್ತಿನ ಅಳಿವಿನಂಚಿನಲ್ಲಿರುವ ಪ್ರಾಣಿಗಳನ್ನೊಮ್ಮೆ ನೋಡಿಬಿಡಿ | Udayavani

udayavani youtube

ಎವರೆಸ್ಟ್ ತುದಿಯಲ್ಲಿ 14 ವರ್ಷಗಳಿಂದಲೂ ಇದೇ ಆ ಒಂದು ಮೃತ ದೇಹ

ಹೊಸ ಸೇರ್ಪಡೆ

1a-wasa

ವಿಜಯಪುರ: ಮಹಾರಾಷ್ಟ್ರ ಮೂಲದ ವ್ಯಕ್ತಿಯಿಂದ 6 ಲಕ್ಷ ರೂ.,480 ಗ್ರಾಂ ಚಿನ್ನ ವಶ

1-sadadasdasd

ನೂತನ ಸಂಸತ್ ಭವನಕ್ಕೆ ಪ್ರಧಾನಿ ದಿಢೀರ್ ಭೇಟಿ; ಕಾಮಗಾರಿಗಳ ಪರಿಶೀಲನೆ

ಬಾಲಾಜಿ ಸಕ್ಕರೆ ಕಾರ್ಖಾನೆ ಮೇಲೆ 2ನೇ ಬಾರಿ ಅಧಿಕಾರಿಗಳ ದಾಳಿ: ಲಕ್ಷಾಂತರ ಮೌಲ್ಯದ ಸೊತ್ತು ವಶ

ಬಾಲಾಜಿ ಸಕ್ಕರೆ ಕಾರ್ಖಾನೆ ಮೇಲೆ 2ನೇ ಬಾರಿ ಅಧಿಕಾರಿಗಳ ದಾಳಿ: ಲಕ್ಷಾಂತರ ಮೌಲ್ಯದ ಸೊತ್ತು ವಶ

ದೆಹಲಿಯಲ್ಲಿ ಗುಡುಗು ಸಹಿತ ಮಳೆ: 17 ವಿಮಾನಗಳ ಮಾರ್ಗ ಬದಲಾವಣೆ

ದೆಹಲಿಯಲ್ಲಿ ಗುಡುಗು ಸಹಿತ ಮಳೆ: 17 ವಿಮಾನಗಳ ಮಾರ್ಗ ಬದಲಾವಣೆ

1-sadsasd

ಹುಣಸೂರು: ರೌಡಿ ಶೀಟರ್ ತನ್ವೀರ್ ಬೇಗ್ ಗಡಿಪಾರು