ದೇವಸ್ಥಾನದ ವಸ್ತುಗಳನ್ನು ಕದ್ದು ಪಶ್ಚಾತ್ತಾಪ: ಮರಳಿ ಇಟ್ಟು ಪತ್ರ ಬರೆದ ಕಳ್ಳ.!
Team Udayavani, Oct 31, 2022, 5:44 PM IST
ಮಧ್ಯಪ್ರದೇಶ: ದೇವಸ್ಥಾನದಿಂದ ಅಮೂಲ್ಯವಾದ ಸಾಮಗ್ರಿಗಳನ್ನು ಕದ್ದೊಯ್ದ ಕಳ್ಳನೊಬ್ಬ ಮನ ಪರಿವರ್ತನೆಯಾಗಿ ಕದ್ದ ವಸ್ತುಗಳನ್ನು ಮತ್ತೆ ತಂದಿಟ್ಟ ಘಟನೆ ಮಧ್ಯಪ್ರದೇಶದ ಬಾಲಘಾಟ್ ನಲ್ಲಿ ನಡೆದಿದೆ.
ಅ.24 ರಂದು ಬಾಲಘಾಟ್ ನ ಲ್ಯಾಮ್ಟಾ ಪ್ರದೇಶದ ಜೈನ ದೇವಸ್ಥಾನದಿಂದ ಅಮೂಲ್ಯ ವಸ್ತುಗಳು ಕಾಣೆಯಾಗಿರುವುದು ಬೆಳಕಿಗೆ ಬಂದಿತ್ತು. ಸ್ಥಳೀಯರು ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.
ಇದಾದ ನಾಲ್ಕು ದಿನಗಳ ಬಳಿಕ ಯಾವುದೇ ಆರೋಪಿ ಪತ್ತೆಯಾಗದೆ, ದೇವಸ್ಥಾನದ ಬಳಿಯಿರುವ ಹೊಂಡವೊಂದರಲ್ಲಿ ಬ್ಯಾಗ್ ನಲ್ಲಿ ಸುತ್ತಿಟ್ಟ ಹಾಗೆ ಕಾಣೆಯಾದ ದೇವಸ್ಥಾನದ ಅಮೂಲ್ಯವಾದ ಸಾಮಾಗ್ರಿಗಳು ಪತ್ತೆಯಾಗಿವೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಪೊಲೀಸರಿಗೆ ಬ್ಯಾಗ್ ನಲ್ಲಿದ್ದ ದೇವಸ್ಥಾನದಿಂದ ಕಳ್ಳತನವಾದ ಬೆಳ್ಳಿ ಹಾಗೂ ತಾಮ್ರದ ಸಾಮಾಗ್ರಿಗಳೊಂದಿಗೆ ಕಳ್ಳ ಬರೆದಿಟ್ಟ ಪತ್ರ ಸಿಕ್ಕಿದೆ.
“ಅಪರಾಧವನ್ನು ಮಾಡಿದ ನಂತರ ನಾನು ತುಂಬಾ ಕಷ್ಟವನ್ನು ಅನುಭವಿಸಿದೆ ಮತ್ತು ಅದಕ್ಕಾಗಿಯೇ ನಾನು ಈ ವಸ್ತುಗಳನ್ನು ಹಿಂದಿರುಗಿಸುತ್ತಿದ್ದೇನೆ. ಈ ವಸ್ತುಗಳನ್ನು ಕದ್ದಿದ್ದಕ್ಕಾಗಿ ನಾನು ಕ್ಷಮೆಯಾಚಿಸುತ್ತೇನೆ.” ಎಂದು ಪತ್ರದಲ್ಲಿ ಬರೆದ ಬರಹವನ್ನು ಕಂಡು ಪೊಲೀಸರು ಅಚ್ಚರಿಗೊಂಡಿದ್ದಾರೆ.
ಸ್ಥಳೀಯರು ದೇವಸ್ಥಾನದ ಸಾಮಗ್ರಿ ಮರಳಿ ಬಂದಿರುವುದಕ್ಕಾಗಿ ಸಂತಸಗೊಂಡಿದ್ದಾರೆ. ಪೊಲೀಸರು ಕಳ್ಳನನ್ನು ಹುಡುಕುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ
JEE; ಮಹಾರಾಷ್ಟ್ರ ರೈತನ ಮಗ ಮೇನ್ ಟಾಪರ್
MUST WATCH
ಹೊಸ ಸೇರ್ಪಡೆ
ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!
Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್
ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!
Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ