ಪಾಕ್ ಎಫ್-16 ಪ್ರಯೋಗಿಸಿದ ಕ್ಷಿಪಣಿ ಹೊಡೆದುರುಸಿದ್ದ IAF SU-30 MKI
Team Udayavani, Mar 6, 2019, 6:30 AM IST
ಹೊಸದಿಲ್ಲಿ : ಭಾರತೀಯ ವಾಯು ಪಡೆ, ಪಾಕಿಸ್ಥಾನದ ಫಕ್ತೂನ್ಖ್ವಾ ಪ್ರಾಂತ್ಯದ ಬಾಲಾಕೋಟ್ ನಲ್ಲಿನ ಜೈಶ್ ಎ ಮೊಹಮ್ಮದ್ ಸಂಘಟನೆಯ ಬೃಹತ್ ಉಗ್ರ ತರಬೇತಿ ಶಿಬಿರವನ್ನು ಧ್ವಂಸಗೊಳಿಸಿದುದನ್ನು ಅನುಸರಿಸಿ ಫೆ.27ರಂದು ಬೆಳಗ್ಗೆ ಪಾಕ್ ವಾಯು ಪಡೆ ಭಾರತದ ಮೇಲೆ ಸಮರೋಪಾದಿಯ ವೈಮಾನಿಕ ದಾಳಿ ನಡೆಸಲು ತನ್ನ ಎಫ್ 16 ಯುದ್ಧ ವಿಮಾನಗಳನ್ನು ಎಲ್ಓಸಿಯಲ್ಲಿ ಸಜ್ಜುಗೊಳಿಸಿತ್ತು. ಇದನ್ನು ಸಕಾಲದಲ್ಲಿ ಗಮನಿಸಿದ ಭಾರತೀಯ ವಾಯು ಪಡೆ, ಪಾಕಿಸ್ಥಾನ ನಡೆಸುವ ಯಾವುದೇ ಸಂಭವನೀಯ ವಾಯು ಸಮರವನ್ನು ವಿಫಲಗೊಳಿಸಲು ಪೂರ್ಣ ಪ್ರಮಾಣದ ಕಟ್ಟೆಚ್ಚರವನ್ನು ವಹಿಸಿತ್ತು ಎಂದು ತನ್ನ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.
ಪಾಕ್ ಯುದ್ಧ ವಿಮಾನಗಳು ಎಲ್ಓಸಿಯಲ್ಲಿ ಅಣಿಯಾಗುತ್ತಿದ್ದಂತೆ ಭಾರತೀಯ ವಾಯು ಪಡೆ ಈ ಗಂಭೀರ ವಿದ್ಯಮಾನವನ್ನು ರಾಡಾರ್ ಗಳ ಮೂಲಕ ಗಮನಿಸಿ ಒಡನೆಯೇ ತನ್ನ ಹೆಚ್ಚುವರಿ ಯುದ್ಧ ವಿಮಾನಗಳನ್ನು ಸಜ್ಜುಗೊಳಿಸಿತು ಎಂದು ಐಎಎಫ್ ಹೇಳಿದೆ.
ಆ್ಯಮ್ರಾಮ್ಎಐಎಂ-120 ಕ್ಷಿಪಣಿಗಳನ್ನು ಪ್ರಯೋಗಿಸುವ ಸಲುವಾಗಿ ಎಫ್ 16 ಯುದ್ಧ ವಿಮಾನಗಳನ್ನು ಪಾಕ್ ವಾಯು ಪಡೆ ಸಜ್ಜು ಗೊಳಿಸುತ್ತಿದ್ದಂತೆಯೇ ಭಾರತೀಯ ವಾಯು ಪಡೆ ಇತ್ತ ತನ್ನ ಮಿರಾಜ್ 2000, ಎಸ್ಯು 30 ಮತ್ತು ಮಿಗ್ 21 ಬೈಸನ್ ಯುದ್ಧ ವಿಮಾನಗಳನ್ನು ಸಜ್ಜುಗೊಳಿಸಿತು. ಪಾಕಿಸ್ಥಾನದ ಆ್ಯಮ್ರಾಮ್ಎಐಎಂ-120 ಕ್ಷಿಪಣಿಗಳನ್ನು IAF SU-30 MKI ಯುದ್ಧ ವಿಮಾನ ಯಶಸ್ವಿಯಾಗಿ ಹೊಡೆದುರುಳಿಸಿತು.
ಭಾರತದತ್ತ ಪಾಕ್ ಎಫ್ 16 ಯುದ್ಧ ವಿಮಾನಗಳು ಹಾರಿ ಬರುತ್ತಿದ್ದಂತೆಯೇ ಭಾರತೀಯ ಯುದ್ಧ ವಿಮಾನಗಳು ಅವುಗಳನ್ನು ಆಗಸ ಮಾರ್ಗದಲ್ಲಿ ಅಡ್ಡಗಟ್ಟಿದ ಪರಿಣಾಮ ಅವು ಅವಸರವಸರದಲ್ಲಿ ಹಿಂದಿರುಗಿ ಹೋಗುವಾಗ ಜಮ್ಮು ಕಾಶ್ಮೀರದ ರಜೌರಿಯ ಪೂರ್ವ ಭಾಗದಲ್ಲಿ ಕೆಲವು ಬಾಂಬ್ ಗಳನ್ನು ಉದುರಿಸಿ ಮರಳಿದವು. ಆದರೆ ಆ ಬಾಂಬ್ಗಳು ಸಿಡಿಯದಿದ್ದುದರಿಂದ ಸಂಭವನೀಯ ಅಪಾಯ ತಪ್ಪಿತ್ತು ಎಂದು ಐಎಎಫ್ ತನ್ನ ಹೇಳಿಕೆಯಯಲ್ಲಿ ತಿಳಿಸಿದೆ.
ಪಾಕ್ ವಾಯು ಪಡೆ ಅಕ್ರಮವಾಗಿ ಬಳಸಿದ್ದ ಎಫ್ 16 ಯುದ್ಧ ವಿಮಾನಗಳಲ್ಲಿ ಒಂದನ್ನು ನಮ್ಮ ಮಿಗ್ ಫೈಟರ್ ಜೆಟ್ ಧ್ವಂಸಗೈದು ಉರುಳಿಸಿತು ಎಂದು ಐಎಎಫ್ ಹೇಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chattisgarh: ಕಳೆದ 4 ತಿಂಗಳಲ್ಲಿ 80 ನಕ್ಸಲೀಯರ ಸಾವು, 125 ಮಂದಿ ಬಂಧನ; 150 ಶರಣಾಗತಿ!
ದ. ಭಾರತದಲ್ಲಿ ಬಿಜೆಪಿ ಎಷ್ಟು ಸ್ಥಾನಗಳಲ್ಲಿ ಜಯಗಳಿಸಬಹುದು? ರೇವಂತ್ ರೆಡ್ಡಿ ಲೆಕ್ಕಚಾರವೇನು!
Delhi ; ಬಿಕಿನಿಯಲ್ಲೇ ಬಸ್ ಹತ್ತಿದ ಮಹಿಳೆ; ವಿಡಿಯೋ ವೈರಲ್
EVM VVPAT case: ಚುನಾವಣಾ ಪ್ರಕ್ರಿಯೆಯಲ್ಲಿ ಪಾವಿತ್ರ್ಯತೆ ಇರಬೇಕು: ಆಯೋಗಕ್ಕೆ ಸುಪ್ರೀಂ
Diabetes ಇದ್ದರೂ ಕೇಜ್ರಿವಾಲ್ ಸಿಹಿ ಹೆಚ್ಚೆಚ್ಚು ತಿನ್ನುತ್ತಿದ್ದಾರೆ!: ಕೋರ್ಟ್ ಗೆ ಇಡಿ
MUST WATCH
ಹೊಸ ಸೇರ್ಪಡೆ
Beltangady: ಮನೆ ಮಾಲಕಿ ಮೇಲೆ ಸಾಕು ನಾಯಿ ದಾಳಿ
ಸೂಪರ್ ಸ್ಟಾರ್ ಮೋಹನ್ ಲಾಲ್ ಭೇಟಿಯಾದ ರಿಷಬ್: ʼಕಾಂತಾರʼ ಕ್ಕೆ ಸ್ವಾಗತ ಎಂದ ನೆಟ್ಟಿಗರು.!
Cricket; ಪಾಕ್ ವಿರುದ್ಧದ ಟೆಸ್ಟ್ ಸರಣಿ ಆಡಲು ರೋಹಿತ್ ಇಂಗಿತ; ಕ್ಯಾಪ್ಟನ್ ಹೇಳಿದ್ದೇನು?
Chattisgarh: ಕಳೆದ 4 ತಿಂಗಳಲ್ಲಿ 80 ನಕ್ಸಲೀಯರ ಸಾವು, 125 ಮಂದಿ ಬಂಧನ; 150 ಶರಣಾಗತಿ!
Election; ಡಿ.ಕೆ.ಶಿವಕುಮಾರ್, ಪ್ರಿಯಾಂಕ್ ಖರ್ಗೆ ವಿರುದ್ಧ ಬಿಜೆಪಿ ದೂರು