ಶಿಸ್ತಿನ ಜೀವನದಿಂದ ಫಿಟ್ನೆಸ್‌ ಸಾಧನೆ: ‘Fit India Dialogue’ ಹೆಸರಲ್ಲಿ ಮೋದಿ ಸಂವಾದ


Team Udayavani, Sep 25, 2020, 6:01 AM IST

ಶಿಸ್ತಿನ ಜೀವನದಿಂದ ಫಿಟ್ನೆಸ್‌ ಸಾಧನೆ: ‘Fit India Dialogue’ ಹೆಸರಲ್ಲಿ ಮೋದಿ ಸಂವಾದ

ಹೊಸದಿಲ್ಲಿ: ‘ಫಿಟ್ನೆಸ್‌ ಸಾಧಿಸುವುದು ಕಬ್ಬಿಣದ ಕಡಲೆಯೇನಲ್ಲ. ಅದಕ್ಕೆ ಕೊಂಚ ಶಿಸ್ತಿನ ಜೀವನವಿದ್ದರೆ ಸಾಕು’ ಎಂದು ಪ್ರಧಾನಿ ಮೋದಿ ದೇಶದ ಜನತೆಗೆ ಕಿವಿಮಾತು ಹೇಳಿದ್ದಾರೆ.

ಫಿಟ್‌ ಇಂಡಿಯಾ ಅಭಿಯಾನಕ್ಕೆ ಒಂದು ವರ್ಷ ಸಂದ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ, ‘ಫಿಟ್‌ ಇಂಡಿಯಾ ಡಯಲಾಗ್‌’ ಹೆಸರಿನಲ್ಲಿ ನಡೆದ ಈ ವೀಡಿಯೋ ಸಂವಾದದಲ್ಲಿ ದೇಶಬಾಂಧವರಿಗೆ ‘ಫಿಟ್ನೆಸ್‌ ಕಿ ಡೋಸ್‌, ಆಧಾ ಘಂಟಾ ರೋಜ್‌’ ಎಂಬ ಘೋಷವಾಕ್ಯವನ್ನೂ ನೀಡಿದರು.

ನರೇಂದ್ರ ಮೋದಿ, ಪ್ರಧಾನಿ
ಫಿಟ್‌ ಆಗಿರಬೇಕು ಅಂದರೆ ಕ್ರಿಕೆಟ್‌, ಟೆನಿಸ್‌, ಬ್ಯಾಡ್ಮಿಂಟನ್‌, ಕಬಡ್ಡಿಯಂಥ ಯಾವುದಾದರೂ ಒಂದರಲ್ಲಿ ಭಾಗಿಯಾಗಿ. ಪ್ರತಿದಿನ ಅರ್ಧ ಗಂಟೆ ಆಡಿದರೂ ಸಾಕು ಫಿಟ್ನೆಸ್‌ ಮೈಗೂಡುತ್ತದೆ.

ವಿರಾಟ್‌ ಕೊಹ್ಲಿ, ಕ್ರಿಕೆಟಿಗ
ನಿತ್ಯ ಕ್ರಿಕೆಟ್‌ ಅಭ್ಯಾಸದ ಜತೆಗೆ ನಿಯಮಿತ ವ್ಯಾಯಾಮ ಹಾಗೂ ಸಮತೋಲಿತ ಆಹಾರವೇ ನನ್ನ ಫಿಟ್ನೆಸ್‌ನ ಗುಟ್ಟು. ಫಿಟ್ನೆಸ್‌ ಸಾಧಿಸಬೇಕಾದರೆ ನಾಲಗೆ ಚಪಲದಿಂದ ಕೊಂಚ ದೂರ ಉಳಿಯಲೇಬೇಕು. ನನಗೆ ಕ್ರಿಕೆಟ್‌ ಅಭ್ಯಾಸ ಒಮ್ಮೊಮ್ಮೆ ತಪ್ಪಿದರೆ ಬೇಸರವಾಗುವುದಿಲ್ಲ. ಆದರೆ ವ್ಯಾಯಾಮ ತಪ್ಪಿಹೋದರೆ ತುಂಬಾ ಬೇಸರವಾಗುತ್ತದೆ. ಹಾಗಾಗಿ ಫಿಟ್ನೆಸ್‌ ಸಾಧನೆಗೆ ವ್ಯಾಯಾಮವನ್ನು ತಪ್ಪದೇ ಕೈಗೊಳ್ಳುತ್ತೇನೆ.

ಮಿಲಿಂದ್‌ ಸೋಮನ್‌, ಮಾಡೆಲ್‌
ನನ್ನಲ್ಲಿ ತುಂಬಾ ಜನ ಕೇಳುತ್ತಾರೆ. ಪ್ರತಿದಿನ 500 ಕಿ.ಮೀ.ವರೆಗೆ ನೀವು ಓಡುತ್ತೀರಿ. 55 ವರ್ಷ ವಯಸ್ಸಿನವರಿಂದ ಇದು ಸಾಧ್ಯವೇ ಎಂದು ಕೇಳುತ್ತಾರೆ. ಆಗ ನಾನು ಅವರಿಗೆ ನನ್ನ 81 ವರ್ಷದ ಅಮ್ಮ ದಿನನಿತ್ಯ ವ್ಯಾಯಾಮ ಮಾಡುವುದರ ವೀಡಿಯೋ ತೋರಿಸುತ್ತೇನೆ. ಆರೋಗ್ಯವಂತ ವ್ಯಕ್ತಿ ದಿನಕ್ಕೆ 100 ಕಿ.ಮೀ. ನಡೆಯಬಹುದು. ಅಷ್ಟೇ ಅಲ್ಲ, ಫಿಟ್ನೆಸ್‌ಗೆ ಮನೆಯಲ್ಲಿ ಜಿಮ್‌, ಯಾಂತ್ರಿಕ ಪರಿಕರಗಳು ಬೇಕು ಎಂದೇನಿಲ್ಲ. ಮಾನಸಿಕವಾಗಿ ಫಿಟ್‌ ಆಗಿ, ಸಾಮಾನ್ಯ ವ್ಯಾಯಾಮ ಮಾಡಿದರೆ ಸಾಕು.

ರುಜುತಾ ದಿವಾಕರ್‌, ಪೌಷ್ಟಿಕ ಆಹಾರ ತಜ್ಞೆ
ಪ್ಯಾಕೇಜ್‌ ಆಹಾರ ತಿನ್ನುವುದಕ್ಕಿಂತ, ಸರಳವಾದ ಮತ್ತು ಸಂಪ್ರದಾಯ ಶೈಲಿಯ ಆಹಾರ ಸೇವಿಸಿದರೆ ಸಾಕು. ಫಿಟ್ನೆಸ್‌ ಸಾಧಿಸಬಹುದು.

ಅಫ್ಯಾನ್‌ ಆಶಿಕ್‌, ಜಮ್ಮು ಕಾಶ್ಮೀರದ ಫ‌ುಟ್ಬಾಲ್‌ ಆಟಗಾರ್ತಿ
ಮನೆಗಳಲ್ಲಿ ಇರುವ ಮಹಿಳೆಯರಿಗೂ ಫಿಟೆ°ಸ್‌ ತುಂಬಾ ಮುಖ್ಯ. ಪ್ರತಿ ದಿನ ಬೆಳಗ್ಗೆ ಧ್ಯಾನ ಮಾಡುತ್ತೇನೆ. ನನಗೆ ಎಂ.ಎಸ್‌. ಧೋನಿ ಅವರೇ ಸ್ಫೂರ್ತಿ. ಅವರ ಶಾಂತ ಸ್ವಭಾವ ನನಗಿಷ್ಟ.

ಮೋದಿ ಕೈ ಅಡುಗೆ
ಬಿಡುವಿದ್ದಾಗ ತಮ್ಮ ಸಮತೋಲಿತ ಆಹಾರವನ್ನು ತಾವೇ ತಯಾರಿಸುವುದಾಗಿ ಮೋದಿ ತಿಳಿಸಿದರು. ನನಗೆ ನುಗ್ಗೇಕಾಯಿಯಿಂದ ಪರೋಟ ಮಾಡಲು ಗೊತ್ತಿದೆ. ಸ್ವತಃ ನಾನೇ ತಯಾರಿಸಿ ವಾರಕ್ಕೆ ಒಂದು ಅಥವಾ ಎರಡು ಬಾರಿ ಸೇವಿಸುತ್ತೇನೆ ಎಂದರು.

ಚೆನ್ನಾ ಬತೂರ ಮತ್ತು ಕೊಹ್ಲಿ
ಕೊಹ್ಲಿ ಫಿಟ್ನೆಸ್‌ ಮಂತ್ರ ಕೇಳಿದ ಮೋದಿ, ಅವರ ಕಾಲೆಳೆಯಲು ಮರೆಯಲಿಲ್ಲ. ನೀವು ದಿಲ್ಲಿಯ ಖ್ಯಾತ ತಿನಿಸು ಚೆನ್ನಾ ಬತೂರದಿಂದ ತುಂಬಾ ದೂರ ಉಳಿದಿದ್ದೀರಿ ಎಂದರು. ಇದಕ್ಕೆ ನಗುತ್ತಲೇ ಉತ್ತರಿಸಿದ ಕೊಹ್ಲಿ, ಫಿಟೆ°ಸ್‌ ಬೇಕಾದರೆ ನಾಲಗೆ ಚಪಲದಿಂದ ದೂರ ಉಳಿಯಲೇಬೇಕು ಎಂದರು.

ಪಾಲ್ಗೊಂಡವರು
– ವಿರಾಟ್‌ ಕೊಹ್ಲಿ: ಕ್ರಿಕೆಟಿಗ

– ಮಿಲಿಂದ್‌ ಸೊಮನ್‌: ರೂಪದರ್ಶಿ

– ದೇವೇಂದ್ರ ಝಜಾರಿಯಾ: ಜ್ಯಾವೆಲಿನ್‌ ತ್ರೋ ಚಿನ್ನದ ಪದಕ ವಿಜೇತ

– ಅಫ್ಯಾನ್‌ ಆಶಿಕ್‌: ಜಮ್ಮು – ಕಾಶ್ಮೀರದ ಫ‌ುಟ್ಬಾಲ್‌ ಆಟಗಾರ್ತಿ

– ರುಜುತಾ ದಿವಾಕರ್‌: ಪೌಷ್ಟಿಕ ಆಹಾರ ತಜ್ಞೆ

ಟಾಪ್ ನ್ಯೂಸ್

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

1-pak

Pak ಆತ್ಮಾಹುತಿ ದಾಳಿ: ಐವರು ಜಪಾನೀಯರು ಪಾರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-wqeqweqweeqweqe

Brahmos; ಫಿಲಿಪ್ಪೀನ್ಸ್‌ಗೆ ಬ್ರಹ್ಮೋಸ್‌: ಭಾರತದ ಮೊದಲ ರಫ್ತು

mamata

EC ಚುನಾವಣ ಆಯೋಗ ಅಲ್ಲ, ಬಿಜೆಪಿ ಆಯೋಗ: ಮಮತಾ ಬ್ಯಾನರ್ಜಿ ಟೀಕಾಸ್ತ್ರ

kejriwal 2

ED; ನಾನು ತಿಂದದ್ದು ಮೂರೇ ಮಾವು: ಕೋರ್ಟ್‌ಗೆ ಕೇಜ್ರಿವಾಲ್‌ ಮಾಹಿತಿ

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

1-wqeqweqweeqweqe

Brahmos; ಫಿಲಿಪ್ಪೀನ್ಸ್‌ಗೆ ಬ್ರಹ್ಮೋಸ್‌: ಭಾರತದ ಮೊದಲ ರಫ್ತು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.