80 ವರ್ಷಗಳ ದೇಗುಲ ನಿರ್ಬಂಧಕ್ಕೆ ತೆರೆ! 200ಕ್ಕೂ ಅಧಿಕ ದಲಿತರ ಪ್ರವೇಶ


Team Udayavani, Jan 31, 2023, 7:30 AM IST

80 ವರ್ಷಗಳ ದೇಗುಲ ನಿರ್ಬಂಧಕ್ಕೆ ತೆರೆ! 200ಕ್ಕೂ ಅಧಿಕ ದಲಿತರ ಪ್ರವೇಶ

ಚೆನ್ನೈ: ಕಳೆದ 8 ದಶಕಗಳಿಂದ ಪರಿಶಿಷ್ಟ ಜಾತಿ ಮತ್ತು ಪಂಗಡದ ಜನರಿಗೆ ನಿರ್ಬಂಧವಿದ್ದ ದೇಗುಲವನ್ನು ಎಸ್‌ಸಿ/ಎಸ್‌ಟಿ ವರ್ಗದ 200ಕ್ಕೂ ಅಧಿಕ ಮಂದಿ ಪ್ರವೇಶಿಸಿದ್ದಾರೆ. ಈ ಮೂಲಕ ತಮಿಳುನಾಡಿನ ತಿರುವಣ್ಣಾ ಮಲೈ ಜಿಲ್ಲೆ ಐತಿಹಾಸಿಕ ಬದಲಾವಣೆಗೆ ಸಾಕ್ಷಿಯಾಗಿದೆ.

80 ವರ್ಷಗಳ ಇತಿಹಾಸ ಹೊಂದಿರುವ ದೇವಿ ದೇಗುಲವೊಂದಕ್ಕೆ ದಲಿತರು ಪ್ರವೇಶಿಸದಂತೆ ಮೊದಲಿನಿಂದಲೂ ನಿರ್ಬಂಧವಿತ್ತು. ಈ ವಿಚಾರ ಜಿಲ್ಲಾಡಳಿತದ ಗಮನಕ್ಕೆ ಬಂದ ಬಳಿಕ, ಸಮಾಜದಲ್ಲಿ ಸಮಾನತೆ ಮತ್ತು ಸಾಮರಸ್ಯ ಕಾಯ್ದುಕೊಳ್ಳುವ ನಿಟ್ಟಿನಲ್ಲಿ,ದೇಗುಲ ಆಡಳಿತ ಮಂಡಳಿ ಜತೆಗೆ ಸಭೆ ನಡೆಸಲಾಯಿತು. ಜಿಲ್ಲಾ ಎಸ್‌ಪಿ ಡಾ.ಕೆ. ಕಾರ್ತಿಕೇಯನ್‌ ಸ್ಥಳೀಯರ ಜತೆಗೂ ಮಾತುಕತೆ ನಡೆಸಿ, ಜ.30ರ ಹುತಾತ್ಮರ ದಿನಾಚರಣೆಯಲ್ಲಿ ಜಿಲ್ಲೆಯಲ್ಲಿ ಅಸ್ಪೃಶ್ಯತೆ ತೊಲಗಿಸುವ ಸಂಕಲ್ಪದೊಂದಿಗೆ 400 ಪೊಲೀಸರ ಭದ್ರತೆಯೊಂದಿಗೆ ದಲಿತರ ದೇಗುಲ ಪ್ರವೇಶವನ್ನು ಖಾತರಿ ಪಡಿಸಿಕೊಂಡಿದ್ದಾರೆ.

ದಲಿತರ ಸಂತಸ:
ದೇಗುಲ ಪ್ರವೇಶಿಸಿದ ದಲಿತ ಮಹಿಳೆಯೊಬ್ಬರು,ತಾನು ಇಲ್ಲಿಯೇ ಹುಟ್ಟಿ ಬೆಳೆದಿದ್ದರೂ, ದೇಗುಲದ ಒಳಗಿರುವ ದೇವಿಯ ದರ್ಶನ ಪಡೆಯಲು ಸಾಧ್ಯವಾಗಿರಲಿಲ್ಲ.ಇಂದು ಆ ಅವಕಾಶ ಸಿಕ್ಕಿದೆ. ದೇಗುಲ ಪ್ರವೇಶಿಸಿದ್ದು, ನಾನೊಂದು ಮಗುವಿಗೆ ಜನ್ಮ ನೀಡಿದೆ ಎನ್ನುವಷ್ಟು ಸಂತಸವನ್ನು ತಂದಿದೆ ಎಂದಿದ್ದಾರೆ.

ಮೇಲ್ವರ್ಗದವರ ಪ್ರತಿಭಟನೆ
ದಲಿತರು ದೇಗುಲ ಪ್ರವೇಶಿಸುವುದನ್ನು ವಿರೋಧಿಸಿ ಮೇಲ್ವರ್ಗದ 750ಕ್ಕೂ ಅಧಿಕ ಮಂದಿ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಹಿಂದೆ ಪ್ರತ್ಯೇಕ ದೇಗುಲ ಕಟ್ಟಿಸಿಕೊಳ್ಳಲು ದಲಿತರಿಗೆ ಹಣ, ಭೂಮಿಯನ್ನು ನೀಡಿದ್ದೇವೆ. ಈಗ ಅವರು ದೇಗುಲ ಪ್ರವೇಶಿಸುವ ಅಗತ್ಯವೇನಿದೆ?ಅವರ ಪ್ರವೇಶದಿಂದ ದೇಗುಲ ಅಪವಿತ್ರವಾಗಿದೆ ಎಂದಿದ್ದಾರೆ.

ಟಾಪ್ ನ್ಯೂಸ್

ಇನ್ನು ಜಿಪಿಎಸ್‌ ಮೂಲಕ ಟೋಲ್‌ ಸಂಗ್ರಹ: ಸಚಿವ ಗಡ್ಕರಿ

ಇನ್ನು ಜಿಪಿಎಸ್‌ ಮೂಲಕ ಟೋಲ್‌ ಸಂಗ್ರಹ: ಸಚಿವ ಗಡ್ಕರಿ

harman smrithi

“ಮಹಿಳಾ ದಿ ಹಂಡ್ರೆಡ್‌”ನಲ್ಲಿ ಹರ್ಮನ್‌, ಸ್ಮತಿ ಆಟ

ಶನಿವಾರದ ರಾಶಿಫಲ: ಈ ರಾಶಿ ಅವರಿಗಿಂದು ಅನಿರೀಕ್ಷಿತ ಧನ ಲಾಭ, ಆರೋಗ್ಯ ಸುದೃಢವಾಗಲಿದೆ

ಶನಿವಾರದ ರಾಶಿಫಲ: ಈ ರಾಶಿ ಅವರಿಗಿಂದು ಅನಿರೀಕ್ಷಿತ ಧನ ಲಾಭ, ಆರೋಗ್ಯ ಸುದೃಢವಾಗಲಿದೆ

bjpದಾವಣಗೆರೆಯಲ್ಲಿಂದು ವಿಜಯಸಂಕಲ್ಪ ಯಾತ್ರೆ ಸಮಾರೋಪ

ದಾವಣಗೆರೆಯಲ್ಲಿಂದು ವಿಜಯಸಂಕಲ್ಪ ಯಾತ್ರೆ ಸಮಾರೋಪ

ರಜೆಯಲ್ಲಿ ಮೌಲ್ಯಮಾಪನ: ಸಂಬಳಕ್ಕೆ ಕತ್ತರಿ

ರಜೆಯಲ್ಲಿ ಮೌಲ್ಯಮಾಪನ: ಸಂಬಳಕ್ಕೆ ಕತ್ತರಿ

ಕೇಂದ್ರ ನೌಕರರ ತುಟ್ಟಿ ಭತ್ಯೆ ಶೇ.4 ಹೆಚ್ಚಳ

ಕೇಂದ್ರ ನೌಕರರ ತುಟ್ಟಿ ಭತ್ಯೆ ಶೇ.4 ಹೆಚ್ಚಳ

ಯಾವುದೇ ಕ್ಷಣದಲ್ಲಾದರೂ ವೇಳಾಪಟ್ಟಿ ಘೋಷಣೆ; ಸನ್ನದ್ಧರಾಗಿರಲು ಸೂಚನೆ

ಯಾವುದೇ ಕ್ಷಣದಲ್ಲಾದರೂ ವೇಳಾಪಟ್ಟಿ ಘೋಷಣೆ; ಸನ್ನದ್ಧರಾಗಿರಲು ಸೂಚನೆ



ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಇನ್ನು ಜಿಪಿಎಸ್‌ ಮೂಲಕ ಟೋಲ್‌ ಸಂಗ್ರಹ: ಸಚಿವ ಗಡ್ಕರಿ

ಇನ್ನು ಜಿಪಿಎಸ್‌ ಮೂಲಕ ಟೋಲ್‌ ಸಂಗ್ರಹ: ಸಚಿವ ಗಡ್ಕರಿ

ಕೇಂದ್ರ ನೌಕರರ ತುಟ್ಟಿ ಭತ್ಯೆ ಶೇ.4 ಹೆಚ್ಚಳ

ಕೇಂದ್ರ ನೌಕರರ ತುಟ್ಟಿ ಭತ್ಯೆ ಶೇ.4 ಹೆಚ್ಚಳ

ಮಹಾರಾಷ್ಟ್ರ ಅಸೆಂಬ್ಲಿಯಲ್ಲಿ ಕೋಲಾಹಲ

ಮಹಾರಾಷ್ಟ್ರ ಅಸೆಂಬ್ಲಿಯಲ್ಲಿ ಕೋಲಾಹಲ

ಧಾರವಾಡದಲ್ಲಿ ಇಎಂಸಿ ಸ್ಥಾಪನೆಗೆ ಕೇಂದ್ರ ಸರಕಾರ ಅಸ್ತು

ಧಾರವಾಡದಲ್ಲಿ ಇಎಂಸಿ ಸ್ಥಾಪನೆಗೆ ಕೇಂದ್ರ ಸರಕಾರ ಅಸ್ತು

2025ರೊಳಗೆ ಭಾರತದಿಂದ ಕ್ಷಯ ತೊಲಗಿಸುವ ಗುರಿ: ಪ್ರಧಾನಿ ಮೋದಿ

2025ರೊಳಗೆ ಭಾರತದಿಂದ ಕ್ಷಯ ತೊಲಗಿಸುವ ಗುರಿ: ಪ್ರಧಾನಿ ಮೋದಿ

MUST WATCH

udayavani youtube

ಮೈಸೂರಿಗೆ ಬಂದವರು ಇಲ್ಲಿಗೊಮ್ಮೆ ಭೇಟಿ ಕೊಡಲೇಬೇಕು

udayavani youtube

ಜಗತ್ತಿನ ಅಳಿವಿನಂಚಿನಲ್ಲಿರುವ ಪ್ರಾಣಿಗಳನ್ನೊಮ್ಮೆ ನೋಡಿಬಿಡಿ | Udayavani

udayavani youtube

ಎವರೆಸ್ಟ್ ತುದಿಯಲ್ಲಿ 14 ವರ್ಷಗಳಿಂದಲೂ ಇದೇ ಆ ಒಂದು ಮೃತ ದೇಹ

udayavani youtube

ನಮ್ಮ ಅಪ್ಪು ಕುರಿತ ಒಂದಷ್ಟು ಸುಂದರ ವಿಚಾರಗಳು

udayavani youtube

ವಿವಿಧ ದೇಶದ 2500 ವಿಭಿನ್ನ ರೀತಿಯ ನಾಯಿಗಳ ಸ್ಟ್ಯಾಂಪ್ ಸಂಗ್ರಹ

ಹೊಸ ಸೇರ್ಪಡೆ

ಇನ್ನು ಜಿಪಿಎಸ್‌ ಮೂಲಕ ಟೋಲ್‌ ಸಂಗ್ರಹ: ಸಚಿವ ಗಡ್ಕರಿ

ಇನ್ನು ಜಿಪಿಎಸ್‌ ಮೂಲಕ ಟೋಲ್‌ ಸಂಗ್ರಹ: ಸಚಿವ ಗಡ್ಕರಿ

harman smrithi

“ಮಹಿಳಾ ದಿ ಹಂಡ್ರೆಡ್‌”ನಲ್ಲಿ ಹರ್ಮನ್‌, ಸ್ಮತಿ ಆಟ

ಶನಿವಾರದ ರಾಶಿಫಲ: ಈ ರಾಶಿ ಅವರಿಗಿಂದು ಅನಿರೀಕ್ಷಿತ ಧನ ಲಾಭ, ಆರೋಗ್ಯ ಸುದೃಢವಾಗಲಿದೆ

ಶನಿವಾರದ ರಾಶಿಫಲ: ಈ ರಾಶಿ ಅವರಿಗಿಂದು ಅನಿರೀಕ್ಷಿತ ಧನ ಲಾಭ, ಆರೋಗ್ಯ ಸುದೃಢವಾಗಲಿದೆ

bjpದಾವಣಗೆರೆಯಲ್ಲಿಂದು ವಿಜಯಸಂಕಲ್ಪ ಯಾತ್ರೆ ಸಮಾರೋಪ

ದಾವಣಗೆರೆಯಲ್ಲಿಂದು ವಿಜಯಸಂಕಲ್ಪ ಯಾತ್ರೆ ಸಮಾರೋಪ

ರಜೆಯಲ್ಲಿ ಮೌಲ್ಯಮಾಪನ: ಸಂಬಳಕ್ಕೆ ಕತ್ತರಿ

ರಜೆಯಲ್ಲಿ ಮೌಲ್ಯಮಾಪನ: ಸಂಬಳಕ್ಕೆ ಕತ್ತರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.