ಕಿಡಿಗೇಡಿಗಳ ಫೇಸ್ಗೆ ಸಾಫ್ಟ್ ವೇರ್ ಗುದ್ದು !
ಫೇಸ್ ರೆಕಗ್ನಿಶನ್ ಸಾಫ್ಟ್ ವೇರ್ ಬಳಕೆ ಹಿಂಸಾಚಾರದಲ್ಲಿ ತೊಡಗುವವರನ್ನು ಪತ್ತೆಹಚ್ಚಲು ಈ ಕ್ರಮ
Team Udayavani, Dec 29, 2019, 7:00 AM IST
ಹೊಸದಿಲ್ಲಿ: ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ ಎನ್ಆರ್ಸಿ ವಿರುದ್ಧ ದೇಶಾದ್ಯಂತ ಪ್ರತಿಭಟನೆಗಳು ನಡೆಯುತ್ತಿದ್ದು, ಕೆಲವು ಕಡೆ ಇವು ಹಿಂಸೆಯ ರೂಪ ತಾಳಿರುವ ಹಿನ್ನೆಲೆಯಲ್ಲಿ ಪೊಲೀಸರು ಈಗ “ಫೇಸ್ ರೆಕಗ್ನಿಶನ್'(ಮುಖ ಗುರುತಿಸುವಿಕೆ) ಅಸ್ತ್ರವನ್ನು ಪ್ರಯೋಗಿಸಲು ಆರಂಭಿಸಿದ್ದಾರೆ.
ಪ್ರತಿಭಟನ ರ್ಯಾಲಿಗಳಲ್ಲಿ ಸಾವಿರಾರು ಮಂದಿ ಭಾಗವಹಿಸುವ ಕಾರಣ, ಹಿಂಸಾಚಾರದಲ್ಲಿ ತೊಡಗಿ ದವರು ಯಾರು ಎಂಬುದನ್ನು ಕರಾರುವಕ್ಕಾಗಿ ಪತ್ತೆಹಚ್ಚುವುದೇ ಪೊಲೀಸರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಹೀಗಾಗಿ ಫೇಸ್ ರೆಕಗ್ನಿಶನ್ ಸಾಫ್ಟ್ವೇರ್ ಬಳಸಿಕೊಂಡು, ಅದರ ಮೂಲಕ ಕಿಡಿಗೇಡಿಗಳನ್ನು ಪತ್ತೆಹಚ್ಚುವ ಉಪಾಯವನ್ನು ಹೂಡಲಾಗಿದೆ.
ಸಾಫ್ಟ್ ವೇರ್ಗೆ ಅಪ್ಲೋಡ್
ಪ್ರಸ್ತುತ ದಿಲ್ಲಿಯಲ್ಲಿ ನಡೆಯುತ್ತಿರುವ ಪ್ರತಿಭಟನೆಗಳ ದೃಶ್ಯಾವಳಿಗಳನ್ನು ಪೊಲೀಸರು ಈ ಸಾಫ್ಟ್ ವೇರ್ಗೆ ಅಪ್ಲೋಡ್ ಮಾಡುತ್ತಿದ್ದು, ಆ ಮೂಲಕ ವೃತ್ತಿಪರ “ಪ್ರತಿಭಟನಕಾರರು’ ಹಾಗೂ “ರೌಡಿ’ಗಳನ್ನು ಪತ್ತೆಹಚ್ಚುವ ಕಾರ್ಯ ವನ್ನು ಈಗಾಗಲೇ ಆರಂಭಿಸಲಾಗಿದೆ.
ಡೇಟಾಸೆಟ್ ರೆಡಿ
ಈವರೆಗೆ ದಿಲ್ಲಿ ಪೊಲೀಸರು ಮಾಮೂಲಿ ಅಪರಾಧ ಪ್ರಕರಣ ಗಳ ತನಿಖೆಗೆ ಅನುಕೂಲವಾಗ ಲೆಂದು ಸುಮಾರು 1.5 ಲಕ್ಷ “ಹಿಸ್ಟರಿ ಶೀಟರ್’ಗಳ ಫೋಟೋಗಳನ್ನು ಒಳಗೊಂಡ ಡೇಟಾಸೆಟ್ ತಯಾರಿಸಿಕೊಂಡಿದ್ದಾರೆ. ಇನ್ನು ಅತ್ಯಂತ ಸೂಕ್ಷ್ಮವಾದ ಸಾರ್ವಜನಿಕ ಕಾರ್ಯಕ್ರಮಗಳ ಮೇಲೆ ನಿಗಾ ಇಡಲೆಂದು ಶಂಕಿತ ಉಗ್ರರು ಹಾಗೂ ದುಷ್ಕರ್ಮಿಗಳ ಸುಮಾರು 2,000 ಫೋಟೋಗಳುಳ್ಳ ಮತ್ತೂಂದು ಸೆಟ್ ಅನ್ನು ಸಿದ್ಧಪಡಿಸಿಟ್ಟು ಕೊಂಡಿದ್ದಾರೆ.
ಮೋದಿ ರ್ಯಾಲಿಯಲ್ಲೂ ಬಳಕೆ
ಡಿ. 22ರಂದು ದಿಲ್ಲಿಯ ರಾಮಲೀಲಾ ಮೈದಾನ ದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ರ್ಯಾಲಿ ನಡೆದಾಗಲೂ ಪೊಲೀಸರು ಈ ಸಾಫ್ಟ್ವೇರ್ ಅನ್ನು ಮುನ್ನೆಚ್ಚರಿಕೆಯಾಗಿ ಬಳಸಿದ್ದರು. ಈ ರ್ಯಾಲಿ ವೇಳೆ ಉಗ್ರರ ದಾಳಿ ನಡೆಯ ಬಹುದು ಅಥವಾ ಪ್ರತಿ ಭಟನೆ ಮೂಲಕ ಕೆಲವು ಶಕ್ತಿಗಳು ರ್ಯಾಲಿಗೆ ಅಡ್ಡಿ ಉಂಟು ಮಾಡ ಬಹುದು ಎಂಬ ಹಿನ್ನೆಲೆಯಲ್ಲಿಯೂ ಇದನ್ನು ಬಳಸಿಕೊಳ್ಳಲಾಗಿತ್ತು.
ಯಾವಾಗೆಲ್ಲ ಬಳಸಲಾಗಿತ್ತು?
– ನಮ್ಮ ದೇಶದಲ್ಲಿ ಈ ಸಾಫ್ಟ್ವೇರ್ ಅನ್ನು ಆರಂಭದಲ್ಲಿ ಬಳಸಿಕೊಂಡದ್ದು ನಾಪತ್ತೆ ಯಾದ ಮಕ್ಕಳನ್ನು ಪತ್ತೆಹಚ್ಚಲು. 2018ರ ಮಾರ್ಚ್ನಲ್ಲಿ ದಿಲ್ಲಿ ಹೈಕೋರ್ಟ್ ಆದೇಶದ ಅನ್ವಯ ಪೊಲೀಸರು ಈ ಸಾಫ್ಟ್ವೇರ್ ಬಳಸಿ, ಕಣ್ಮರೆಯಾದ ಮಕ್ಕಳ ಫೋಟೋ ಗಳೊಂದಿಗೆ ಹೋಲಿಕೆ ಮಾಡಿಕೊಂಡು, ಯಾರೆಲ್ಲ ನಾಪತ್ತೆ ಯಾಗಿದ್ದಾರೆ, ಯಾರು ಪತ್ತೆಯಾಗಿದ್ದಾರೆ ಎಂಬುದನ್ನು ಕಂಡುಕೊಂಡಿದ್ದರು.
– ಇದಕ್ಕೂ ಮುನ್ನ ಎರಡು ಬಾರಿ ಸ್ವಾತಂತ್ರ್ಯ ದಿನದ ಪರೇಡ್ನಲ್ಲಿ ಹಾಗೂ ಒಂದು ಬಾರಿ ಗಣರಾಜ್ಯೋತ್ಸವದ ಪರೇಡ್ನಲ್ಲಿ ದಿಲ್ಲಿ ಪೊಲೀಸರು ಮುಖ ಗುರುತಿಸುವಿಕೆ ಸಾಫ್ಟ್ ವೇರ್ನ ಪ್ರಯೋಜನ ಪಡೆದಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ex-IPS officer ಸಂಜೀವ್ ಭಟ್ಗೆ 1996 ರ ಡ್ರಗ್ಸ್ ಕೇಸ್ ನಲ್ಲಿ 20 ವರ್ಷ ಜೈಲು ಶಿಕ್ಷೆ
Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ
Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ
Mangaluru;ಮನೆಯಲ್ಲೇ ಅಕ್ರಮ ಕಸಾಯಿಖಾನೆ:ಗೋಮಾಂಸ ಸಹಿತ ಮೂವರ ಬಂಧನ
Kolkata ವಿಮಾನ ನಿಲ್ದಾಣದಲ್ಲಿ ಸ್ವಯಂ ಗುಂಡಿಟ್ಟುಕೊಂಡು ಯೋಧ ಆತ್ಮಹತ್ಯೆ
MUST WATCH
ಹೊಸ ಸೇರ್ಪಡೆ
Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್ಗಳು: ಪ್ರವಾಸಿಗರಿಗೆ ಭಯ
IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್ಗಳ ಜಯ
Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು
Politics: ಚಿತ್ರದುರ್ಗ ರಾಜಕೀಯ ನಿರಾಶ್ರಿತರ ಕೇಂದ್ರವೇ?: ರಘುಚಂದನ್
PSI re-examination: ಪಿಎಸ್ಐ ಮರು ಪರೀಕ್ಷೆ, ಅಂತಿಮ ಅಂಕಪಟ್ಟಿ ಬಿಡುಗಡೆ