1.90 ಕೋ.ರೂ. ವಿಮಾ ಮೊತ್ತಕ್ಕಾಗಿ ಅಪಘಾತದಂತೆ ಬಿಂಬಿಸಿ ಪತ್ನಿಯನ್ನೇ ಕೊಲೆಗೈದ ಪತಿ
Team Udayavani, Dec 1, 2022, 5:52 PM IST
ಜೈಪುರ: ಪತ್ನಿಯ ಹೆಸರಿನಲ್ಲಿದ್ದ 1.90 ಕೋಟಿ ರೂಪಾಯಿ ಮೌಲ್ಯದ ವಿಮಾ ಮೊತ್ತವನ್ನು ಪಡೆಯಲು ಪತಿಯೇ ತನ್ನ ಪತ್ನಿಯನ್ನು ಅಪಘಾತದಂತೆ ಬಿಂಬಿಸಿ ಕೊಲೆಗೈದ ಘಟನೆ ರಾಜಸ್ಥಾನದ ಜೈಪುರದಲ್ಲಿ ಬುಧವಾರ ನಡೆದಿದೆ.
ಮೃತ ಮಹಿಳೆಯನ್ನು ಶಾಲು ಎನ್ನಲಾಗಿದೆ. ಅಲ್ಲದೆ ಪತಿ ತನ್ನ ಪತ್ನಿಯನ್ನು ಕೊಲ್ಲಲು ಓರ್ವ ರೌಡಿ ಶೀಟರ್ ಗೆ ಗುತ್ತಿಗೆ ನೀಡಲಾಗಿದೆ ಎನ್ನಲಾಗಿದೆ.
ಅದರಂತೆ ಅಕ್ಟೋಬರ್ 5 ರಂದು ಪತಿ ಮಹೇಶ್ ಚಂದ್ ಒತ್ತಾಯದ ಮೇರೆಗೆ ಪತ್ನಿ ಶಾಲು ತನ್ನ ಸೋದರ ಸಂಬಂಧಿ ಯುವಕನ ಜೊತೆ ಮುಂಜಾನೆ 4.45 ವೇಳೆಗೆ ಬೈಕ್ ನಲ್ಲಿ ಹನುಮಂತ ದೇವಸ್ಥಾನಕ್ಕೆ ಹೊರಟಿದ್ದಾರೆ ಈ ವೇಳೆ ರೌಡಿ ಶೀಟರ್ ಹಾಗೂ ಆತನ ಇಬ್ಬರು ಸಹಚರರು ಕಾರು ಚಲಾಯಿಸಿಕೊಂಡು ಪತ್ನಿ ಶಾಲು ಪ್ರಯಾಣಿಸುತ್ತಿದ್ದ ಬೈಕ್ ಗೆ ಢಿಕ್ಕಿ ಹೊಡೆದಿದ್ದಾರೆ. ಈ ವೇಳೆ ಗಂಭೀರ ಗಾಯಗೊಂಡಿದ್ದ ಶಾಲು ಸ್ಥಳದಲ್ಲೇ ಸಾವನ್ನಪ್ಪಿದ್ದರೆ , ಸೋದರ ಸಂಬಂಧಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾನೆ.
ಮೇಲ್ನೋಟಕ್ಕೆ ಇದು ರಸ್ತೆ ಅಪಘಾತದಂತೆ ಕಂಡುಬಂದರೂ ಪೊಲೀಸರ ತನಿಖೆಯ ವೇಳೆ ಪತಿ ತಾನು ಪತ್ನಿಯ ಹೆಸರಿನಲ್ಲಿದ್ದ ವಿಮಾ ಮೊತ್ತ ಪಡೆಯಲು ಅಪಘಾತದಂತೆ ಬಿಂಬಿಸಿ ಪತ್ನಿಯನ್ನು ಕೊಲೆಗೈದಿರುವುದಾಗಿ ಹೇಳಿಕೊಂಡಿದ್ದಾನೆ, ಅಲ್ಲದೆ ಇದಕ್ಕಾಗಿ ರೌಡಿ ಶೀಟರ್ ಓರ್ವನಿಗೆ ಹತ್ತು ಲಕ್ಷಕ್ಕೆ ಗುತ್ತಿಗೆ ನೀಡಿದ್ದಾಗಿ ಒಪ್ಪಿಕೊಂಡಿದ್ದಾನೆ.
ಅದರಂತೆ ಪತ್ನಿಯನ್ನು ದೇವಸ್ಥಾನಕ್ಕೆ ಸೋದರ ಸಂಬಂಧಿ ಯುವಕನ ಜೊತೆ ಹೋಗುವಂತೆ ಒತ್ತಾಯಿಸಿ ಆಮೇಲೆ ಅವರ ಮೇಲೆ ಕಾರು ಹರಿಸಿ ಕೊಲೆಗೈದು ಆಕೆಯ ಹೆಸರಿನಲ್ಲಿದ್ದ 1.90 ಕೋ.ರೂ. ವಿಮಾ ಮೊತ್ತವನ್ನು ತನ್ನ ಹೆಸರಿಗೆ ಮಾಡಿಕೊಳ್ಳುವ ಆಲೋಚನೆ ಮಾಡಿಕೊಂಡಿದ್ದೆ ಎಂದು ಪೊಲೀಸರ ಬಳಿ ಹೇಳಿಕೊಂಡಿದ್ದ ಎನ್ನಲಾಗಿದೆ.
ಶಾಲು 2015 ರಲ್ಲಿ ಚಂದ್ ಅವರನ್ನು ಮದುವೆಯಾಗಿದ್ದು ಒಂದು ಹೆಣ್ಣು ಮಗು ಇದೆ. ಆದರೆ ಮದುವೆಯಾದ ಎರಡು ವರ್ಷಗಳ ನಂತರ ಅವರಿಬ್ಬರ ನಡುವೆ ಜಗಳ ಶುರುವಾಗಿ ಬಳಿಕ ಶಾಲು ತನ್ನ ಮಗುವಿನೊಂದಿಗೆ ತಾಯಿ ಮನೆಯಲ್ಲೇ ವಾಸವಾಗಿದ್ದರು. ಈ ನಡುವೆ ಚಾಂದ್ ಶಾಲು ಹೆಸರಿನಲ್ಲಿ ವಿಮೆ ಮಾಡಿಸಿದ್ದ ಒಂದು ವೇಳೆ ವಿಮೆ ಮಾಡಿದವರು ಅಪಘಾತದಲ್ಲಿ ಸತ್ತರೆ ಅವರ ಪತಿಗೆ 1.90 ಕೋಟಿ ಮೌಲ್ಯದ ವಿಮೆ ಸೇರುತ್ತದೆ ಎಂದು ಚಾಂದ್ ಗೆ ಗೊತ್ತಿತ್ತು ಹಾಗಾಗಿ ಹೇಗಾದರೂ ಮಾಡಿ ಪತ್ನಿಯನ್ನು ಅಪಘಾತದ ರೀತಿಯಲ್ಲಿ ಕೊಲೆಗೈದು ವಿಮೆ ಮೊತ್ತವನ್ನು ಪಡೆಯಬೇಕೆಂದು ಶಾಲು ಬಳಿ ಹೊಸ ಉಪಾಯ ಮಾಡಿದ್ದಾನೆ ಅದೇನೆಂದರೆ ತಾನೊಂದು ಕೆಲಸಕ್ಕೆ ಕೈ ಹಾಕಿದ್ದು ಅದು ಈಡೇರಬೇಕಾದರೆ ನೀನು ನಿರಂತರ ಹನ್ನೊಂದು ದಿನಗಳ ಕಾಲ ಬೈಕ್ ನಲ್ಲಿ ಹನುಮಂತ ದೇವಸ್ಥಾನಕ್ಕೆ ಹೋಗಿ ಬರಬೇಕೆಂದು ಪತ್ನಿ ಬಳಿ ಹೇಳಿಕೊಂಡಿದ್ದ, ಅದರಂತೆ ಪತ್ನಿ ಶಾಲು ಹನ್ನೊಂದು ದಿನಗಳ ವೃತ ಆಚರಿಸಲು ಬೆಳಿಗ್ಗೆ ಎದ್ದು ಸೋದರ ಸಂಬಂಧಿ ಯುವಕನ ಜೊತೆ ದೇವಸ್ಥಾನಕ್ಕೆ ಹೋಗಲು ನಿರ್ಧರಿಸಿದ್ದಾಳೆ ಹಾಗೆ ಮೊದಲ ದಿನ ಬೈಕ್ ನಲ್ಲಿ ದೇವಸ್ಥಾನಕ್ಕೆ ಹೋಗುವ ವೇಳೆ ಈ ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ, ಸದ್ಯ ಆರೋಪಿ ಪತಿ ಚಾಂದ್ ಹಾಗೂ ಹತ್ಯೆಗೆ ಗುತ್ತಿಗೆ ಪಡೆದ ಮೂವರು ಪೊಲೀಸರ ವಶದಲ್ಲಿದ್ದಾರೆ.
ಇದನ್ನೂ ಓದಿ: ‘ದಿ ಕಾಶ್ಮೀರ್ ಫೈಲ್ಸ್’ ಗೆ ಟೀಕೆ ; ಇಸ್ರೇಲಿ ನಿರ್ಮಾಪಕಗೆ ಅನುಪಮ್ ಖೇರ್ ತಿರುಗೇಟು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಆಪ್ ಕೌನ್ಸಿಲರ್ಗಳನ್ನು ಬುಟ್ಟಿಗೆ ಹಾಕಿಕೊಳ್ಳಲು ಬಿಜೆಪಿಗೆ ಸಾಧ್ಯವಿಲ್ಲ ಎಂದ ಕೇಜ್ರಿವಾಲ್
ಕೇರಳದ ಪೆಟ್ ಶಾಪ್ ನಲ್ಲಿ ನಾಯಿಮರಿ ಕಳ್ಳತನ; ಉಡುಪಿ ಮೂಲದ ಇಬ್ಬರು ವಿದ್ಯಾರ್ಥಿಗಳ ಬಂಧನ
ಏರ್ ಇಂಡಿಯಾ ವಿಮಾನದ ಇಂಜಿನ್ ನಲ್ಲಿ ಬೆಂಕಿ; ತುರ್ತು ಲ್ಯಾಂಡಿಂಗ್
ಮುಂಬಯಿಯಲ್ಲಿ ತಾಲಿಬಾನ್ ದಾಳಿ: ಎನ್ ಐಎಗೆ ಬೆದರಿಕೆ ಮೇಲ್
ಬಿಬಿಸಿ ಸಾಕ್ಷ್ಯಚಿತ್ರ ನಿಷೇಧ: ಕೇಂದ್ರ ಸರ್ಕಾರಕ್ಕೆ ನೋಟಿಸ್ ನೀಡಿದ ಸುಪ್ರೀಂ
MUST WATCH
ಮಿಸ್ಟರ್ ಬೀನ್ ಈಗ ಎಲ್ಲಿದ್ದಾರೆ? ಹೇಗಿದ್ದಾರೆ |ಯಾರು ಈ ಮಿಸ್ಟರ್ ಬೀನ್ ?
ಮಲ್ಪೆ ಮೀನಿನ ಮಾರುಕಟ್ಟೆ ಹೇಗೆದೆ ನೋಡಿ | ಯಾವ ಮೀನಿಗೆ ಎಷ್ಟು ಬೆಲೆ ?
ವಿದ್ಯಾರ್ಥಿ ಭವನ್ ವೈಟರ್ ಸಾಹಸಕ್ಕೆ ಆನಂದ್ ಮಹೀಂದ್ರ ಫುಲ್ ಖುಷ್; ಇಲ್ಲಿದೆ ವಿಡಿಯೋ
ಕಾಫಿನಾಡಲ್ಲಿ ಮುಂದುವರಿದ ಮತದಾನ ಬಹಿಷ್ಕಾರದ ಕೂಗು
ಅನುದಾನ ನೀಡಿ ವರ್ಷವಾದರೂ ಆರಂಭವಾಗದ ಕಾಮಗಾರಿ ; ಗ್ರಾಮಸ್ಥರಿಂದ ಚುನಾವಣಾ ಬಹಿಷ್ಕಾರದ ಎಚ್ಚರಿಕೆ
ಹೊಸ ಸೇರ್ಪಡೆ
ವಿಜಯಪುರ: ಶೀಲ ಸಂಕಿಸಿ ಪತ್ನಿ ಹತ್ಯೆಗೈದವನಿಗೆ ಜೀವಾವಧಿ ಶಿಕ್ಷೆ
ಸೂಕ್ತ ಸ್ಥಳಾವಕಾಶ ನೀಡಿದರೆ ರಬಕವಿ ಬನಹಟ್ಟಿಯಲ್ಲಿ ಜವಳಿ ಪಾರ್ಕ್ ನಿರ್ಮಾಣ: ಮುನೇನಕೊಪ್ಪ
ಆರ್ಹಾಳ: ಭೂಮಿ ಪೋಡಿ ಮುಕ್ತ ಮಾಡದಿದ್ದರೆ ಮತದಾನ ಬಹಿಷ್ಕಾರ
ಸಕಲೇಶಪುರ: ಅಟ್ಟಾಡಿಸಿಕೊಂಡು ಬಂದ ಕಾಡಾನೆಗಳು; ಕೂದಲೆಳೆ ಅಂತರದಲ್ಲಿ ಇಟಿಎಫ್ ಸಿಬಂದಿ ಪಾರು
ಸಾಮಾಜಿಕ ಉದ್ಯಮಕ್ಕೆ ಹುಬ್ಬಳ್ಳಿ ಮಾಡೆಲ್; ದೇಶಪಾಂಡೆ ಫೌಂಡೇಶನ್ ಅಭಿವೃದ್ಧಿ ಸಂವಾದ’ ಸಮಾವೇಶ