ಮುಂಬರುವ ಗಣತಂತ್ರ ದಿನ ಪರೇಡ್ ಸಂಪೂರ್ಣ ನಾರೀಶಕ್ತಿಮಯ?
Team Udayavani, May 8, 2023, 8:25 AM IST
ಹೊಸದಿಲ್ಲಿ: ಕೆಲವು ವರ್ಷಗಳಿಂದ ಗಣರಾಜ್ಯ ದಿನೋತ್ಸವ ಪಥ ಸಂಚಲನದಲ್ಲಿ ಹಂತಹಂತವಾಗಿ “ನಾರಿ ಶಕ್ತಿ ಪ್ರದರ್ಶನ’ವನ್ನು ಹಂತಹಂತವಾಗಿ ಅನುಷ್ಠಾನಕ್ಕೆ ತಂದಿದ್ದ ಕೇಂದ್ರ ಸರಕಾರ ಮುಂದಿನ ವರ್ಷ ದೊಡ್ಡ ದೊಂದು ಸೀಮೋಲ್ಲಂಘನ ನಡೆಸಲಿದೆ. 2024ರ ಗಣತಂತ್ರ ದಿನ ಪರೇಡ್ ಸಂದರ್ಭ ಕರ್ತವ್ಯ ಪಥದಲ್ಲಿ ಬ್ಯಾಂಡ್, ಪಥ ಸಂಚಲನ, ಸ್ತಬ್ಧಚಿತ್ರ ಸಹಿತ ಎಲ್ಲ ತಂಡಗಳಲ್ಲಿಯೂ ಮಹಿಳೆಯರೇ ಇರಲಿದ್ದಾರೆ ಎಂದು ರಕ್ಷಣ ಸಚಿವಾಲಯದ ಮೂಲಗಳು ತಿಳಿಸಿವೆ.
ಈ ಸಂಬಂಧ ರಕ್ಷಣ ಸಚಿವಾಲಯವು ಮಾರ್ಚ್ ತಿಂಗಳಿ ನಲ್ಲಿಯೇ ಸೇನೆಯ ಮೂರೂ ವಿಭಾಗಗಳು, ಸಂಬಂಧ ಪಟ್ಟ ಸಚಿವಾಲಯಗಳು ಮತ್ತು ಇಲಾಖೆಗಳಿಗೆ ಅಧಿಕೃತ ಸೂಚನೆಯನ್ನು ರವಾನಿಸಿದ್ದು, ಅಗತ್ಯ ಸಿದ್ಧತೆ ಗಳನ್ನು ಮಾಡಿಕೊಳ್ಳಲು ಆದೇಶಿಸಿದೆ ಎಂದು ಮೂಲಗಳು ಹೇಳಿವೆ. ಸರಕಾರ ಮತ್ತು ರಕ್ಷಣ ಸಚಿವಾಲಯಗಳ ಉನ್ನತ ಮಟ್ಟದಲ್ಲಿ ಈ ಬಗ್ಗೆ ಫೆಬ್ರವರಿ ತಿಂಗಳಿನಲ್ಲಿ ಸಮಾಲೋಚನೆ ನಡೆಸಲಾಗಿದ್ದು, ಮುಂದಿನ ವರ್ಷದ ಗಣತಂತ್ರ ದಿನದ ಪಥಸಂಚಲನವನ್ನು ಸಂಪೂರ್ಣ ನಾರೀಶಕ್ತಿಮಯವಾಗಿಸಲು ತೀರ್ಮಾನಿಸಲಾಗಿದೆ.
ನಾರೀಶಕ್ತಿ ಪ್ರಗತಿ
ಕಳೆದ ಕೆಲವು ವರ್ಷಗಳಿಂದ ಗಣತಂತ್ರ ದಿನದ ಪರೇಡ್ನಲ್ಲಿ ಕೆಲವು ಸಂಪೂರ್ಣ ಮಹಿಳಾ ತಂಡಗಳು, ಕೆಲವು ತಂಡಗಳಲ್ಲಿ ಪುರುಷರ ಜತೆಗೆ ಸ್ತ್ರೀಯರು, ಪುರುಷ ಮಿಲಿಟರಿ ತಂಡಗಳಿಗೆ ಮುಂದಾಳುವಾಗಿ ಮಹಿಳೆ- ಹೀಗೆ ನಾರೀ ಶಕ್ತಿಯನ್ನು ಅನಾವರಣಗೊಳಿಸುತ್ತ ಬರಲಾಗಿದೆ. ಪ್ರಸ್ತುತ ವರ್ಷದ ಜನವರಿ 26ರಂದು ನಡೆದ ಪರೇಡ್ಗೆ “ನಾರೀಶಕ್ತಿ’ಯೇ ಧ್ಯೇಯವಾಕ್ಯವಾಗಿತ್ತು ಎಂಬುದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.
ಇದಕ್ಕೂ ಹಿಂದೆ, ರಾಜಪಥವು “ಕರ್ತವ್ಯ ಪಥ’ವಾಗಿ ಮರು ನಾಮಕರಣಗೊಂಡ ವರ್ಷ, 2023ರಲ್ಲಿ 144 ಮಂದಿ ವಾಯು ಸೇನಾ ಯೋಧರ ತಂಡವನ್ನು ಮಹಿಳಾ ಅಧಿಕಾರಿ ಮುನ್ನಡೆಸಿದ್ದರು. ಅದೇ ವರ್ಷ ಕೇರಳ, ಕರ್ನಾಟಕ, ತಮಿಳುನಾಡು, ಮಹಾರಾಷ್ಟ್ರ ಮತ್ತು ತ್ರಿಪುರ ರಾಜ್ಯ ಗಳ ಸ್ತಬ್ಧಚಿತ್ರಗಳಿಗೆ “ನಾರಿಶಕ್ತಿ’ ಧ್ಯೇಯ ವಾಕ್ಯವಾಗಿತ್ತು.
ಕೇಂದ್ರ ಸರಕಾರವು ಇತ್ತೀಚೆಗಿನ ವರ್ಷಗಳಲ್ಲಿ ಸಶಸ್ತ್ರ ಪಡೆಗಳಿಗೆ ಹೆಚ್ಚು ಸಂಖ್ಯೆಯಲ್ಲಿ ಮಹಿಳಾ ಯೋಧರು ಮತ್ತು ಅಧಿಕಾರಿಗಳನ್ನು ನೇಮಕ ಮಾಡಿ ಕೊಳ್ಳುತ್ತಿದೆ. ಭಾರತೀಯ ಸೇನೆಯು ಇತ್ತೀಚೆಗೆ ತನ್ನ ಆರ್ಟಿಲರಿ ರೆಜಿಮೆಂಟ್ಗೆ ಐವರು ಮಹಿಳಾ ಅಧಿಕಾರಿಗಳನ್ನು ಸೇರ್ಪಡೆ ಮಾಡಿಕೊಂಡಿರುವುದು ಕೂಡ ಉಲ್ಲೇಖಾರ್ಹವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Rahul Gandhi: ಜಾತಿಗಣತಿಯನ್ನು ಯಾವ ಶಕ್ತಿಯೂ ತಡೆಯಲಾರದು: ರಾಹುಲ್ ಗಾಂಧಿ
Rajveer Diler: ಹೃದಯಾಘಾತದಿಂದ ಬಿಜೆಪಿ ಸಂಸದ ರಾಜ್ವೀರ್ ದಿಲೇರ್ ನಿಧನ
Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್
LS Polls: ವೇದಿಕೆಯಲ್ಲಿ ಭಾಷಣ ಮಾಡುತ್ತಲೇ ಅಸ್ವಸ್ಥಗೊಂಡ ಕೇಂದ್ರ ಸಚಿವ ನಿತಿನ್ ಗಡ್ಕರಿ
Lok Sabha Election: ಗೋವಾದ ಎರಡೂ ಕ್ಷೇತ್ರದಲ್ಲಿ 16 ಅಭ್ಯರ್ಥಿಗಳು ಕಣಕ್ಕೆ, ಇಲ್ಲಿದೆ ವಿವರ
MUST WATCH
ಹೊಸ ಸೇರ್ಪಡೆ
Lok Sabha Elections; ಕುಮಾರಸ್ವಾಮಿ ಪರ ಕೊನೆಗೂ ಪ್ರಚಾರಕ್ಕೆ ಬಾರದ ಸುಮಲತಾ
ಮಹಿಳೆಯರಿಗೆ 2 ಸಾವಿರ ಕೊಟ್ಟು ಗಂಡಸರ ಜೇಬಿಗೆ ಕತ್ತರಿ: ಕುಮಾರಸ್ವಾಮಿ
OBC ವರ್ಗಕ್ಕೆ ಕಾಂಗ್ರೆಸ್ನಿಂದ ಅನ್ಯಾಯ: ಸುನಿಲ್ ಕುಮಾರ್
ಸರಕಾರದ ಖಜಾನೆ ಖಾಲಿ, ರೈತರಿಗೆ ಪರಿಹಾರ ನೀಡಲು ಹಣವಿಲ್ಲ: ವಿಜಯೇಂದ್ರ
Bangalore Rural; ಬಿಜೆಪಿಗೆ ಅಭ್ಯರ್ಥಿ ಇರಲಿಲ್ಲ, ಎಚ್ಡಿಕೆಗೆ ಧೈರ್ಯ ಇರಲಿಲ್ಲ: ಡಿಕೆಶಿ