ಎಲ್ಲೇ ಇದ್ದರೂ ಇನ್ನು ಮತ ಚಲಾಯಿಸಲು ಸಾಧ್ಯ?
Team Udayavani, Feb 17, 2020, 6:30 AM IST
ಹೊಸದಿಲ್ಲಿ: ಸಾರ್ವತ್ರಿಕ ಚುನಾವಣೆ ಸಂದರ್ಭ ಬೇರೆ ಊರುಗಳಲ್ಲಿ ಉಳಿಯುವ ಮತದಾರರು ಮತ ಚಲಾಯಿಸಲಾಗದೆ ಬೇಸರಿಸುವ ಪ್ರಮೇಯ ಸದ್ಯದಲ್ಲೇ ದೂರವಾಗಲಿದೆ. ಇಂಥ ಮತದಾರರಿಗೆ ಅನುಕೂಲಕರವಾದ ಹೊಸ ತಂತ್ರಜ್ಞಾನವನ್ನು ಜಾರಿಗೊಳಿಸಲು ಕೇಂದ್ರ ಚುನಾವಣ ಆಯೋಗ ನಿರ್ಧರಿಸಿದೆ. ಈ ಹಿನ್ನೆಲೆಯಲ್ಲಿ, ಮದ್ರಾಸ್ ಐಐಟಿ ತಜ್ಞರೊಂದಿಗೆ ಸಮಾಲೋಚಿಸಲಾಗಿದೆ ಎಂದು ಆಯೋಗದ ಹಿರಿಯ ಉಪ ಆಯುಕ್ತ ಸಂದೀಪ್ ಸಕ್ಸೇನಾ ತಿಳಿಸಿದ್ದಾರೆ.
ಏನಿದು ತಂತ್ರಜ್ಞಾನ?
“ಬ್ಲಾಕ್ ಚೈನ್’ ಎಂಬ ತಂತ್ರಜ್ಞಾನದ ಸಹಾಯದಿಂದ ಇ-ಮತದಾನದ ಹೊಸ ವ್ಯವಸ್ಥೆ ರೂಪಿಸಲಾಗುತ್ತದೆ. ಇದು “ದ್ವಿಮುಖ ವಿದ್ಯುನ್ಮಾನ ದೂರ ನಿಯಂತ್ರಣ ಮತದಾನ’ ವ್ಯವಸ್ಥೆ ಆಗಿರುತ್ತದೆ.
ಇದರಡಿ ದೃಢೀಕೃತ ಐಪಿ ವಿಳಾಸವಿರುವ ಕಂಪ್ಯೂಟರ್ಗಳ ಮೂಲಕ ಮತ ಚಲಾಯಿಸಬಹುದು. ಮತದಾನಕ್ಕೆ ಮುನ್ನ ಪ್ರತಿ ಮತದಾರನ ಬಯೋಮೆಟ್ರಿಕ್ ಮತ್ತು ವೆಬ್ ಕೆಮರಾ ಮೂಲಕ ಮುಖ ಗುರುತನ್ನು ತಾಳೆ ಹಾಕಲಾಗುವುದು. ಗುರುತು ದೃಢೀಕರಣವಾದ ಅನಂತರ ಮತದಾರರಿಗೆ ಕಂಪ್ಯೂಟರ್ ಪರದೆಯ ಮೇಲೆ ಇ-ಬ್ಯಾಲೆಟ್ ತೆರೆಯುತ್ತದೆ. ಅದರ ಮೂಲಕ ಮತದಾರರು ಮತ ಚಲಾಯಿಸಬಹುದು.
ಮತದಾನದ ಬಳಿಕ ಬ್ಲಾಕ್ ಚೈನ್ ಹ್ಯಾಶ್ಟ್ಯಾಗ್ ಪರದೆಯಲ್ಲಿ ಗೋಚರಿಸುತ್ತದೆ. ಇದರ ಪ್ರತಿಗಳು ಸ್ವಯಂಚಾಲಿತವಾಗಿ ಆತನ ಮತಕ್ಷೇತ್ರದಲ್ಲಿ ಚುನಾವಣ ಕರ್ತವ್ಯದಲ್ಲಿರುವ ಅಧಿಕಾರಿಗಳಿಗೆ, ಪಕ್ಷಗಳ ಪ್ರತಿನಿಧಿಗಳಿಗೆ, ಅಭ್ಯರ್ಥಿಗಳಿಗೆ ಅಂತರ್ಜಾಲದ ಮೂಲಕ ರವಾನೆಯಾಗುತ್ತವೆ. ಆ ಮೂಲಕ ಮತದಾರ ಬೇರೊಂದು ಸ್ಥಳದಿಂದ ಮತ ಚಲಾಯಿಸಿರುವುದನ್ನು ದೃಢಪಡಿಸಲಾಗುತ್ತದೆ ಎಂದಿದ್ದಾರೆ.
ಇ-ಮತ ಎಣಿಕೆ ಹೇಗೆ?
ಬೇರೆ ಊರುಗಳಿಂದ ಚಲಾವಣೆಯಾದ ಮತಗಳನ್ನು ಯಾರೂ ಪರಿಷ್ಕರಣೆಗೊಳಿಸದಂಥ ಡಿಜಿಟಲ್ ಕೋಡಿಂಗ್ ಮಾದರಿ(ಎನ್ಕ್ರಿಪ್ಶನ್ ಮಾದರಿ)ಯಲ್ಲಿ ಸರ್ವರ್ಗಳಲ್ಲಿ ಸಂಗ್ರಹಿಸಲಾಗುತ್ತದೆ. ಮತ ಎಣಿಕೆಗೆ ಕೆಲವು ತಾಸುಗಳ ಮುನ್ನ ಈ ಮತಗಳನ್ನು ಮತ್ತೂಮ್ಮೆ ಪರೀಕ್ಷಿಸಿ ಅವುಗಳು ಹ್ಯಾಕರ್ಗಳಿಂದ ಬದಲಾಯಿಸಲ್ಪಟ್ಟಿಲ್ಲ ಎಂಬುದನ್ನು ಖಚಿತಪಡಿಸಿಕೊಂಡು ಎಣಿಕೆಗೆ ಪರಿಗಣಿಸಲಾಗುತ್ತದೆ.
ತಂತ್ರಜ್ಞಾನ ಯಾವಾಗ ಜಾರಿ?
ಯಾವುದೇ ಘಳಿಗೆಯಲ್ಲಿ, ಯಾವುದೇ ಸ್ಥಳದಲ್ಲಿ, ಯಾವುದೇ ದೃಢೀಕೃತ ಪರಿಕರಗಳ ಮೂಲಕ ಮತ ಚಲಾಯಿಸುವ ವ್ಯವಸ್ಥೆ ಇದು ಆಗಿರಲಿದೆ. ಇದನ್ನು ಲೋಪ ದೋಷಗಳಿಲ್ಲದಂತೆ ರೂಪುಗೊಳಿಸಬೇಕಿರುವುದರಿಂದ ಸಾಕಷ್ಟು ಸಮಯ ಬೇಕಿದೆ ಎಂದು ಸಕ್ಸೇನಾ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ
JEE; ಮಹಾರಾಷ್ಟ್ರ ರೈತನ ಮಗ ಮೇನ್ ಟಾಪರ್
MUST WATCH
ಹೊಸ ಸೇರ್ಪಡೆ
ಚನ್ನಮ್ಮನ ಕಿತ್ತೂರು: ಮಹಾನ್ ಯೋಗಿಗಳು-ಸೂಫಿ ಸಂತರ ನಾಡಿದು- ಶಿಲೇದಾರ
Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ
ಮೊದಲ ಬಾರಿ ಕುಂದಾನಗರಿಯಲ್ಲಿ ಪ್ರಧಾನಿ ಮೋದಿ ವಾಸ್ತವ್ಯ; 28ಕ್ಕೆ ಸಮಾವೇಶ
ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!
Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ