ಯೋಧರಿಗೆ “ಬದ್ಧತಾ ಉಂಗುರ’ದ ಉಡುಗೊರೆ: ಪುಣೆಯ ಆಭರಣ ಕಂಪನಿಯಿಂದ ಈ ಗಿಫ್ಟ್
ಚಿನ್ನ, ಬೆಳ್ಳಿ, ವಜ್ರ, ಮಣ್ಣಿನಿಂದ ಮಾಡಿರುವ ರಿಂಗ್: ಸ್ವಾತಂತ್ರ್ಯದ ಅಮೃತಮಹೋತ್ಸವ ಹಿನ್ನೆಲೆ 7,500 ಯೋಧರಿಗೆ ವಿತರಣೆ
Team Udayavani, Jul 16, 2022, 6:55 AM IST
ಪುಣೆ:ಪುಣೆ ಮೂಲದ ಆಭರಣ ತಯಾರಕ ಕಂಪನಿ ಬೋನಿಸಾ “ಏಕ್ ಇಂಡಿಯಾ ಮಿಷನ್’ ಎಂಬ ವಿನೂತನ ಯೋಜನೆಯೊಂದನ್ನು ಘೋಷಿಸಿದೆ. ಅದರಂತೆ, ದೇಶ ಕಾಯುವ ಯೋಧರಿಗೆ ಈ ಸಂಸ್ಥೆಯು “ಬೆಳ್ಳಿ, ಬಂಗಾರ, ವಜ್ರ ಮತ್ತು ವಿವಿಧ ರಾಜ್ಯಗಳ ಮಣ್ಣನ್ನು ಬಳಸಿ ತಯಾರಿಸಿದ ಉಂಗುರ’ವನ್ನು ಉಡುಗೊರೆಯಾಗಿ ನೀಡಲಿದೆ. ಈ ಉಂಗುರಕ್ಕೆ “ಬದ್ಧತಾ ಉಂಗುರ'(ಕಮಿಟ್ಮೆಂಟ್ ರಿಂಗ್) ಎಂದು ಹೆಸರಿಡಲಾಗಿದೆ.
ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿ 75 ವರ್ಷಗಳು ಸಂದ ಹಿನ್ನೆಲೆಯಲ್ಲಿ ಪ್ರಸಕ್ತ ವರ್ಷ 7,500 ಯೋಧರಿಗೆ ಈ ಉಂಗುರದ ಗಿಫ್ಟ್ ಸಿಗಲಿದೆ. ಈ ಯೋಜನೆಯ ಅಂಗವಾಗಿ ಗುರುವಾರ ಖಾಡ್ಕಿಯ ಪ್ಯಾರಾಪ್ಲೆಜಿಕ್ ರಿಹ್ಯಾಬಿಲಿಟೇಷನ್ ಸೆಂಟರ್ನ 88 ಹಿರಿಯ ಸೈನಿಕರಿಗೆ “ಏಕ್ ಇಂಡಿಯಾ ರಿಂಗ್’ಗಳನ್ನು ವಿತರಿಸಲಾಗಿದೆ.
ಏನಿದರ ವಿಶೇಷ?
“ಬೆಳ್ಳಿಯು ನಮ್ಮನ್ನು ಶಾಂತವಾಗಿಡುವಂಥದ್ದು, ಬಂಗಾರವು “ಭಾರತದ’ ಸಂಕೇತ, ಪ್ರತಿಯೊಂದು ರಾಜ್ಯದ ಮಣ್ಣು ಏಕತೆಯ ಸಂಕೇತ. ಇನ್ನು, ದೇಶದಲ್ಲಿರುವ ನಾವೆಲ್ಲರೂ “ವಜ್ರ’ದಂತೆ ಎಂಬ ಕಾರಣಕ್ಕೆ ವಜ್ರವನ್ನು ಬಳಸಿದ್ದೇವೆ’ ಎಂದು ಬೋನಿಸಾ ಕಂಪನಿಯ ಪಾಲುದಾರ ಸಂಕೇತ್ ಬಿಯಾನಿ ಹೇಳಿದ್ದಾರೆ.
ಉಂಗುರವನ್ನು ಬೆಳ್ಳಿಯಲ್ಲಿ ಮಾಡಲಾಗಿದೆ. ಅದರ ಮೇಲೆ “ಭಾರತ’ ಎಂದು ಚಿನ್ನದಲ್ಲಿ ಬರೆಯಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕಾಂಗ್ರೆಸ್ ಗೆ ಆಘಾತ; ರಾಜೀನಾಮೆ ನೀಡಿದ ದೆಹಲಿ ಕಾಂಗ್ರೆಸ್ ಮುಖ್ಯಸ್ಥ
Mahadev Betting App Case; ಮುಂಬೈ ಪೊಲೀಸರಿಂದ ನಟ ಸಾಹಿಲ್ ಖಾನ್ ಬಂಧನ
Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ
Congress ಗೆದ್ದರೆ ದೇಶದಲ್ಲಿ ಗೋ ಹತ್ಯೆ ಖಚಿತ: ಯೋಗಿ ಆದಿತ್ಯನಾಥ್
Goa; ದಿನಕ್ಕೆ ಒಂದೇ ಖರ್ಜೂರ ತಿನ್ನುತ್ತಿದ್ದ ಇಬ್ಬರು ಸಹೋದರರು ನಿಧನ
MUST WATCH
ಹೊಸ ಸೇರ್ಪಡೆ
RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ
Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ
China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ
Davanagere;ಬೆಣ್ಣೆದೋಸೆಯೊಂದಿಗೆ ವಿಜಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ: ಮೋದಿ
PM Modi ಪ್ರತಿ ಬಾರಿ ಭಯಾನಕ ಸುಳ್ಳು ಹೇಳಿ ಹೋಗ್ತಾರೆ: ಸಿದ್ದರಾಮಯ್ಯ ಕಿಡಿ