ಉಪ ಚುನಾವಣೆಗೆ 30 ಕೋಟಿ ರೂ. ವೆಚ್ಚ! ; ಚುನಾವಣೆಗಳ ಖರ್ಚು-ವೆಚ್ಚ ಜನರ ಜೇಬಿಗೆ ಹೊರೆ!


Team Udayavani, Nov 26, 2019, 6:15 AM IST

Election-25-11

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used

ಬೆಂಗಳೂರು: ರಾಜಕೀಯ ಪಕ್ಷಗಳ ಹಣದ ‘ಹರಿದಾಟ’ದ ವಿಚಾರದಲ್ಲಿ ಕರ್ನಾಟಕದ ಚುನಾವಣೆಗಳು ಅತ್ಯಂತ ದುಬಾರಿ ಎಂಬ ಮಾತಿದೆ. ಅದೇ ರೀತಿ ಚುನಾವಣೆ ನಡೆಸಬೇಕಾದರೆ ಚುನಾವಣ ಆಯೋಗಕ್ಕೂ ಕೋಟಿಗಟ್ಟಲೆ ರೂ. ಬೇಕು. ಈಗ ನಡೆಯುತ್ತಿರುವ ರಾಜ್ಯದ 15 ವಿಧಾನಸಭೆ ಕ್ಷೇತ್ರಗಳ ಉಪಚುನಾವಣೆಗೆ ಅಂದಾಜು 30 ಕೋಟಿ ರೂ. ವೆಚ್ಚ ಬರಲಿದೆ. ಚುನಾವಣ ಆಯೋಗ ವೆಚ್ಚ ಮಾಡುವ ಈ ಹಣ ಸಾರ್ವಜನಿಕರ ತೆರಿಗೆ ಹಣವೇ ಆಗಿದೆ.

2018ರ ವಿಧಾನಸಭೆ ಚುನಾವಣೆ ವೇಳೆ ಎಲ್ಲ 224 ಕ್ಷೇತ್ರಗಳಿಗೆ ಚುನಾವಣ ಆಯೋಗ 393 ಕೋಟಿಗೂ ಹೆಚ್ಚು ಹಣ ವೆಚ್ಚ ಮಾಡಿತ್ತು. ಅದರಂತೆ ಪ್ರತಿ ಕ್ಷೇತ್ರಕ್ಕೆ ಅಂದಾಜು 1.75 ಕೋಟಿ ರೂ. ವೆಚ್ಚ ಆಗಿತ್ತು. ಚುನಾವಣೆ ನಡೆದು ಇನ್ನೇನು ಒಂದೂವರೆ ವರ್ಷವಷ್ಟೇ ಆಗಿದ್ದರಿಂದ ಪ್ರತಿ ಕ್ಷೇತ್ರದ ಚುನಾವಣ ಖರ್ಚು ಹೆಚ್ಚು-ಕಡಿಮೆ ಅಷ್ಟೇ ಆಗಲಿದೆ. ಹೀಗಾಗಿ 15 ಕ್ಷೇತ್ರಗಳಿಗೆ ತಲಾ ಅಂದಾಜು 1.75 ಕೋಟಿ ರೂ. ಗಳಂತೆ ಸರಾಸರಿ 26ರಿಂದ 30 ಕೋಟಿ ರೂ. ಖರ್ಚು ಬರಲಿದೆ ಅನ್ನುವುದು ಚುನಾವಣ ಆಯೋಗದ ಲೆಕ್ಕಾಚಾರ.

ಒಟ್ಟು ಕ್ಷೇತ್ರಗಳಿಗೆ ತಗಲಿದ ವೆಚ್ಚವನ್ನು ಒಟ್ಟು ಮತಗಟ್ಟೆಗಳು ಮತ್ತು ಮತದಾರರ ಸಂಖ್ಯೆಯಿಂದ ಭಾಗಿಸಿ ಒಂದು ಮತಗಟ್ಟೆಗೆ, ಒಬ್ಬ ಮತದಾರನಿಗೆ ಎಷ್ಟು ವೆಚ್ಚ ಆಗಲಿದೆ ಎಂದು ಚುನಾವಣ ಆಯೋಗ ಅಂದಾಜಿಸುತ್ತದೆ. ಅದರಂತೆ 15 ಕ್ಷೇತ್ರಗಳಿಗೆ 26ರಿಂದ 30 ಕೋಟಿ ರೂ. ಒಟ್ಟು ವೆಚ್ಚ ಎಂದು ಲೆಕ್ಕ ಅಂದಾಜು ಮಾಡಿದರೆ ಈ 15 ಕ್ಷೇತ್ರಗಳಲ್ಲಿ 37.77 ಲಕ್ಷ ಮತದಾರರಿದ್ದು, 4,185 ಮತ ಗಟ್ಟೆಗಳಿವೆ. ಈ ರೀತಿ ಒಬ್ಬ ಮತದಾರನ ಮೇಲೆ 70ರಿಂದ 90 ರೂ. ಹಾಗೂ ಒಂದು ಮತಗಟ್ಟೆಗೆ 60ರಿಂದ 64 ಸಾವಿರ ರೂ. ಖರ್ಚು ಬರಬಹುದು ಅನ್ನುವುದು ಲೆಕ್ಕಾಚಾರ.

ಆದರೆ ಕ್ಷೇತ್ರದಿಂದ ಕ್ಷೇತ್ರಕ್ಕೆ ಚುನಾವಣ ಖರ್ಚು ವ್ಯತ್ಯಾಸವಾಗಿರುತ್ತದೆ. ಸಾಮಾನ್ಯ ಮತ ಗಟ್ಟೆಗಳು, ಸೂಕ್ಷ್ಮ, ಅತೀ ಸೂಕ್ಷ್ಮ ಮತಗಟ್ಟೆ, ಗಡಿಭಾಗ, ಗುಡ್ಡಗಾಡು ಪ್ರದೇಶ,
ಮತಗಟ್ಟೆಗಳ ಒಟ್ಟು ಸಂಖ್ಯೆ, ಆಡಳಿತಾತ್ಮಕ ವಿಷಯಗಳು, ಕಾನೂನು – ಸುವ್ಯವಸ್ಥೆ ಇತ್ಯಾದಿಗಳ ಮೇಲೆ ಚುನಾವಣ ಖರ್ಚು ಅಂದಾಜಿಸಲಾಗುತ್ತದೆ.

ಅಭ್ಯರ್ಥಿಗೆ 28 ಲಕ್ಷ ರೂ. ಮಿತಿ
ವಿಧಾನಸಭೆ ಚುನಾವಣೆಗಳಿಗೆ ರಾಜಕೀಯ ಪಕ್ಷಗಳು ಮಾಡುವ ವೆಚ್ಚಕ್ಕೆ ಮಿತಿ ಇರುವುದಿಲ್ಲ. ಆದರೆ ಅಭ್ಯರ್ಥಿಗಳಿಗೆ ಮಿತಿ ಹೇರಲಾಗಿರುತ್ತದೆ. ಅದರಂತೆ ಕರ್ನಾಟಕದ ವಿಧಾನಸಭೆ ಚುನಾವಣೆಗಳಲ್ಲಿ ಒಬ್ಬ ಅಭ್ಯರ್ಥಿ ಗರಿಷ್ಠ 28 ಲಕ್ಷ ರೂ. ವೆಚ್ಚ ಮಾಡಬಹುದು.

ಆದರೆ ಚುನಾವಣೆಗಳಿಗೆ ಹಣ ಬಲವೇ ಮುಖ್ಯ ಆಧಾರ ಆಗಿರುವ ಈಗಿನ ಸಂದರ್ಭದಲ್ಲಿ ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳ ಚುನಾವಣ ವೆಚ್ಚ ‘ಕಾಗೆ ಲೆಕ್ಕ-ಗುಬ್ಬಿ ಲೆಕ್ಕ’ ಆಗಿರುತ್ತದೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ.
ರಫೀಕ್‌ ಅಹ್ಮದ್‌

ಟಾಪ್ ನ್ಯೂಸ್

1-sadadas

NDA;ಎಲ್ಲಾ ಸಮಸ್ಯೆಗಳನ್ನು ಪರಿಹರಿಸುವವರು ಮೋದಿ ಮತ್ತು ಶಾ ಮಾತ್ರ: ದೇವೇಗೌಡ

Arrested: 17 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

Arrested: 17 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

Padubidri: ಬೈಕಿಗೆ ಡಿಕ್ಕಿ ಹೊಡೆದ ಕಾರು… ಪೊಲೀಸ್‌ ಕಾನ್‌ಸ್ಟೆಬಲ್‌ ಗೆ ಗಾಯ

Padubidri: ಬೈಕಿಗೆ ಡಿಕ್ಕಿ ಹೊಡೆದ ಕಾರು… ಪೊಲೀಸ್‌ ಕಾನ್‌ಸ್ಟೆಬಲ್‌ ಗೆ ಗಾಯ

sumalata

Vijayendra ಜತೆ ಚರ್ಚೆ: ಮಂಡ್ಯದಲ್ಲೇ ನಿರ್ಧಾರ ತಿಳಿಸುತ್ತೇನೆ ಎಂದ ಸುಮಲತಾ

1-weqewqe

Vasooli Titans;ಪ್ರಧಾನಿ, ಬಿಜೆಪಿ ವಿರೋಧಿ ಪೋಸ್ಟ್ ಗಾಗಿ ಕ್ಷಮೆ ಯಾಚಿಸಿದ ವಸ್ತ್ರಾಕರ್

Yatindra

Yathindra Siddaramaiah ಗೂಂಡಾ, ರೌಡಿ ಹೇಳಿಕೆ : EC ಗೆ ದೂರು ನೀಡಿದ ಬಿಜೆಪಿ

1-ewqeqwqe

AAP ‘ಮಹಾರ್‍ಯಾಲಿ’ಯಲ್ಲಿ ಭಾಗಿಯಾಗಲಿರುವ ರಾಹುಲ್,ಖರ್ಗೆ,ಪವಾರ್, ಅಖಿಲೇಶ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-ewqeqwqe

AAP ‘ಮಹಾರ್‍ಯಾಲಿ’ಯಲ್ಲಿ ಭಾಗಿಯಾಗಲಿರುವ ರಾಹುಲ್,ಖರ್ಗೆ,ಪವಾರ್, ಅಖಿಲೇಶ್

1-wewqeq

Kejriwal ಪತ್ನಿಯನ್ನು ರಾಬ್ರಿ ದೇವಿಗೆ ಹೋಲಿಸಿದ ಕೇಂದ್ರ ಸಚಿವ ಹರ್ದೀಪ್ ಪುರಿ

1-eqqwqw

Mukhtar Ansari ಸಾವಿನ ಪ್ರಕರಣ: ನ್ಯಾಯಾಂಗ ತನಿಖೆಗೆ ಆದೇಶಿಸಿದ ಕೋರ್ಟ್

it

Congress ಬಳಿಕ ಸಿಪಿಐಗೂ 11 ಕೋಟಿ ರೂ.ಬಾಕಿಗಾಗಿ ಐಟಿ ನೋಟಿಸ್

ಬಂಧನದಲ್ಲಿರುವ ಪತಿಯ ಬೆಂಬಲಕ್ಕಾಗಿ ವಾಟ್ಸ್‌ಆ್ಯಪ್‌ ಅಭಿಯಾನ ಆರಂಭಿಸಿದ ಕೇಜ್ರಿವಾಲ್ ಪತ್ನಿ

ಬಂಧನದಲ್ಲಿರುವ ಪತಿಯ ಬೆಂಬಲಕ್ಕಾಗಿ ವಾಟ್ಸ್‌ಆ್ಯಪ್‌ ಅಭಿಯಾನ ಆರಂಭಿಸಿದ ಕೇಜ್ರಿವಾಲ್ ಪತ್ನಿ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-sadadas

NDA;ಎಲ್ಲಾ ಸಮಸ್ಯೆಗಳನ್ನು ಪರಿಹರಿಸುವವರು ಮೋದಿ ಮತ್ತು ಶಾ ಮಾತ್ರ: ದೇವೇಗೌಡ

Arrested: 17 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

Arrested: 17 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

Padubidri: ಬೈಕಿಗೆ ಡಿಕ್ಕಿ ಹೊಡೆದ ಕಾರು… ಪೊಲೀಸ್‌ ಕಾನ್‌ಸ್ಟೆಬಲ್‌ ಗೆ ಗಾಯ

Padubidri: ಬೈಕಿಗೆ ಡಿಕ್ಕಿ ಹೊಡೆದ ಕಾರು… ಪೊಲೀಸ್‌ ಕಾನ್‌ಸ್ಟೆಬಲ್‌ ಗೆ ಗಾಯ

Brahmavara: ವಿದ್ಯುತ್‌ ಕಂಬ ಮುರಿದು ಬಿದ್ದು ಯುವಕ ಮೃತ್ಯು

Brahmavara: ವಿದ್ಯುತ್‌ ಕಂಬ ಮುರಿದು ಬಿದ್ದು ಯುವಕ ಮೃತ್ಯು

sumalata

Vijayendra ಜತೆ ಚರ್ಚೆ: ಮಂಡ್ಯದಲ್ಲೇ ನಿರ್ಧಾರ ತಿಳಿಸುತ್ತೇನೆ ಎಂದ ಸುಮಲತಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.